ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಂಗಳವಾರ ಮಾತನಾಡಿದ ಅವರು, ಕೇರಳದ ಮುಖ್ಯಮಂತ್ರಿ ಸಹ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕಾರ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯು ಮಲೆನಾಡು ಜಿಲ್ಲೆಗಳಲ್ಲಿಯೇ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿದ ಪ್ರದೇಶವಾಗಿದೆ. ಇಂತಹ ಜಿಲ್ಲೆಯಲ್ಲಿ ಶೇ 80ರಷ್ಟು ಪ್ರದೇಶದಲ್ಲಿ ಮನೆ ಕಟ್ಟಬಾರದು, ಸೊಪ್ಪು ಕಡಿಯಬಾರದು, ಮಣ್ಣು ಮುಟ್ಟಬಾರದು ಎಂದು ಕಸ್ತೂರಿ ರಂಗನ್ ಮತ್ತು ಗಾಡ್ಗಿಲ್ ವರದಿ ನೀಡಿದೆ. ಕಸ್ತೂರಿ ರಂಗನ್ ವರದಿಯನ್ನು ಈ ಹಿಂದೆಯೇ ಮಲೆನಾಡಿನ ಎಲ್ಲ ಶಾಸಕರು ತಿರಸ್ಕಾರ ಮಾಡಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅರಣ್ಯ ಸಚಿವರು, ಮಲೆನಾಡು ಪ್ರದೇಶದ ಎಲ್ಲ ಶಾಸಕರ ಸಭೆ ಕರೆದು, ಅಭಿಪ್ರಾಯವನ್ನು ಕ್ರೋಡೀಕರಣ ಮಾಡಬೇಕು ಎಂದರು.