<p><strong>ಅಂಕೋಲಾ:</strong>‘ಜಗತ್ತು ವೇಗವಾಗಿ ಬೆಳೆಯುತ್ತಿದೆ ಅದರ ಜತೆ ನಾವೂಚಲಿಸಬೇಕಿದೆ. ವಿದೇಶಕ್ಕೆ ಹೋಗಿ ದೇಶ ಗೆಲ್ಲಬೇಕಿದೆ. ಅದಕ್ಕೆ ಮುಂದಿನ ತಲೆಮಾರಿನ ವ್ಯಾವಹಾರಿಕ ಕೇಂದ್ರ ಕಾರವಾರ– ಅಂಕೋಲಾ ಆಗಲಿದೆ’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.</p>.<p>ಪಟ್ಟಣ ಅಂಚೆ ಕಚೇರಿಯಲ್ಲಿ ಜಿಲ್ಲೆಯ ಮೊದಲ ಪಾಸ್ಪೋರ್ಟ್ಸೇವಾ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಕೇವಲ ರಾಜಕಾರಣದಿಂದ ನೋಡಿದರೆ ದೇಶದ ಅಭಿವೃದ್ಧಿಯಾಗುವುದಿಲ್ಲ. ದೂರದೃಷ್ಟಿಯ ಕಲ್ಪನೆ ಇರಬೇಕು. ಅಭಿವೃದ್ಧಿ ಗೊತ್ತಿರದ ಸೋಗಲಾಡಿತನದವರಿಗೆ ಪ್ರಶ್ನೆ ಕೇಳುವುದೇ ಬಂಡವಾಳವಾಗಿದೆ. ದೇಶದ ಜನಸಂಖ್ಯೆ ನಮ್ಮ ಆಸ್ತಿಯಾಗಿದೆ. ಈಗಾಗಲೇ ಜಗತ್ತಿನಲ್ಲಿ ದೇಶನಾಲ್ಕನೇ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ’ ಎಂದರು.</p>.<p>‘ಮುಂದಿನ ದಿನಗಳಲ್ಲಿ ಬೆಳಗಾವಿವಿಮಾನ ನಿಲ್ದಾಣದಿಂದ ಸರಕು ಸಾಗಣೆ ಆರಂಭವಾಲಗಿದೆ. ಅಂಕೋಲಾದಲ್ಲಿ ನಾಗರಿಕ ವಿಮಾನ ನಿಲ್ದಾಣ, ರೈಲ್ವೆ ಜಂಕ್ಷನ್ ಆಗಲಿದೆ. ಮುಂದಿನ ದಿನಗಳಿಗೆ ನಾವು ಕೃಷಿ ತಂತ್ರಜ್ಞಾನದಲ್ಲೂಬೆಳೆಯಬೇಕಾಗಿದೆ. ಜಗತ್ತಿಗೆ ಉತ್ತರಕನ್ನಡ ಜಿಲ್ಲೆಯು ಉತ್ತಮ ವೇದಿಕೆಯಾಗಲಿ’ಎಂದು ಹಾರೈಸಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ‘ಸಂಪೂರ್ಣ ಜಿಲ್ಲೆ ಅಭಿವೃದ್ಧಿಯಾಗಬೇಕು.ಇದಕ್ಕೆ ನಮ್ಮ ಜಿಲ್ಲೆಯ ಪ್ರತಿಭೆಗಳು ವಿದೇಶದಲ್ಲಿದ್ದರೂ ಈ ಜಿಲ್ಲೆಗೆ ತಮ್ಮದೇ ಕೊಡುಗೆ ನೀಡಬೇಕು’ಎಂದರು.</p>.<p>ಸಹಾಯಕಅಧಿಕಾರಿ ಕೆ.ಹರಿಶ್ಚಂದ್ರನ್ ಪ್ರಾಸ್ತಾವಿಕ ಮಾತನಾಡಿ, ‘ದೇಶದಲ್ಲಿ 440ಪಾಸ್ಪೋರ್ಟ್ ಸೇವಾಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸಾಮಾನ್ಯ ಅರ್ಜಿ ಶುಲ್ಕ ₹ 1,500 ಆಗಿದೆ. ಎಲ್ಲ ಮಾಹಿತಿಗಳೂ ಆನ್ಲೈನ್ನಲ್ಲಿಲಭ್ಯವಿವೆ. ಯಾವುದೇ ಏಜೆಂಟರ ಬಳಿ ಹೋಗುವ ಅಗತ್ಯವಿಲ್ಲ’ ಎಂದರು.</p>.<p>ಮುಖಂಡ ಸುನೀಲ್ ಹೆಗಡೆ ಮಾತನಾಡಿದರು. ಲಿಂಗೈಕ್ಯರಾದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಮತ್ತು ಜಿಲ್ಲೆಯ ದೋಣಿ ದುರಂತದಲ್ಲಿ ಮಡಿದವರಿಗೆಶ್ರದ್ಧಾಂಜಲಿ ಸಲ್ಲಿಸಲಾಯಿತು.ಲಕ್ಷ್ಮಿನಾರಾಯಣ ಗೌಡ ಮತ್ತು ಕಾರವಾರದ ದತ್ತಾತ್ರೇಯ ಶೆಟ್ಟಿ ಅವರಿಗೆ ಪಾಸ್ಪೋರ್ಟ್ಸೇವಾ ಕೇಂದ್ರದಿಂದ ಪ್ರಥಮ ಟೋಕನ್ಗಳನ್ನುನೀಡಲಾಯಿತು.</p>.<p>ವೀಣಾ ಶ್ರೀನಿವಾಸನ್ ಸ್ವಾಗತಿಸಿದರು. ಶೀತಲ್ ಸಂಗಡಿಗರು ಪ್ರಾರ್ಥಿಸಿದರು. ಜಿಲ್ಲೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಂಕೋಲಾ:</strong>‘ಜಗತ್ತು ವೇಗವಾಗಿ ಬೆಳೆಯುತ್ತಿದೆ ಅದರ ಜತೆ ನಾವೂಚಲಿಸಬೇಕಿದೆ. ವಿದೇಶಕ್ಕೆ ಹೋಗಿ ದೇಶ ಗೆಲ್ಲಬೇಕಿದೆ. ಅದಕ್ಕೆ ಮುಂದಿನ ತಲೆಮಾರಿನ ವ್ಯಾವಹಾರಿಕ ಕೇಂದ್ರ ಕಾರವಾರ– ಅಂಕೋಲಾ ಆಗಲಿದೆ’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.</p>.<p>ಪಟ್ಟಣ ಅಂಚೆ ಕಚೇರಿಯಲ್ಲಿ ಜಿಲ್ಲೆಯ ಮೊದಲ ಪಾಸ್ಪೋರ್ಟ್ಸೇವಾ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಕೇವಲ ರಾಜಕಾರಣದಿಂದ ನೋಡಿದರೆ ದೇಶದ ಅಭಿವೃದ್ಧಿಯಾಗುವುದಿಲ್ಲ. ದೂರದೃಷ್ಟಿಯ ಕಲ್ಪನೆ ಇರಬೇಕು. ಅಭಿವೃದ್ಧಿ ಗೊತ್ತಿರದ ಸೋಗಲಾಡಿತನದವರಿಗೆ ಪ್ರಶ್ನೆ ಕೇಳುವುದೇ ಬಂಡವಾಳವಾಗಿದೆ. ದೇಶದ ಜನಸಂಖ್ಯೆ ನಮ್ಮ ಆಸ್ತಿಯಾಗಿದೆ. ಈಗಾಗಲೇ ಜಗತ್ತಿನಲ್ಲಿ ದೇಶನಾಲ್ಕನೇ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ’ ಎಂದರು.</p>.<p>‘ಮುಂದಿನ ದಿನಗಳಲ್ಲಿ ಬೆಳಗಾವಿವಿಮಾನ ನಿಲ್ದಾಣದಿಂದ ಸರಕು ಸಾಗಣೆ ಆರಂಭವಾಲಗಿದೆ. ಅಂಕೋಲಾದಲ್ಲಿ ನಾಗರಿಕ ವಿಮಾನ ನಿಲ್ದಾಣ, ರೈಲ್ವೆ ಜಂಕ್ಷನ್ ಆಗಲಿದೆ. ಮುಂದಿನ ದಿನಗಳಿಗೆ ನಾವು ಕೃಷಿ ತಂತ್ರಜ್ಞಾನದಲ್ಲೂಬೆಳೆಯಬೇಕಾಗಿದೆ. ಜಗತ್ತಿಗೆ ಉತ್ತರಕನ್ನಡ ಜಿಲ್ಲೆಯು ಉತ್ತಮ ವೇದಿಕೆಯಾಗಲಿ’ಎಂದು ಹಾರೈಸಿದರು.</p>.<p>ಅಧ್ಯಕ್ಷತೆ ವಹಿಸಿದ್ದ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ‘ಸಂಪೂರ್ಣ ಜಿಲ್ಲೆ ಅಭಿವೃದ್ಧಿಯಾಗಬೇಕು.ಇದಕ್ಕೆ ನಮ್ಮ ಜಿಲ್ಲೆಯ ಪ್ರತಿಭೆಗಳು ವಿದೇಶದಲ್ಲಿದ್ದರೂ ಈ ಜಿಲ್ಲೆಗೆ ತಮ್ಮದೇ ಕೊಡುಗೆ ನೀಡಬೇಕು’ಎಂದರು.</p>.<p>ಸಹಾಯಕಅಧಿಕಾರಿ ಕೆ.ಹರಿಶ್ಚಂದ್ರನ್ ಪ್ರಾಸ್ತಾವಿಕ ಮಾತನಾಡಿ, ‘ದೇಶದಲ್ಲಿ 440ಪಾಸ್ಪೋರ್ಟ್ ಸೇವಾಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸಾಮಾನ್ಯ ಅರ್ಜಿ ಶುಲ್ಕ ₹ 1,500 ಆಗಿದೆ. ಎಲ್ಲ ಮಾಹಿತಿಗಳೂ ಆನ್ಲೈನ್ನಲ್ಲಿಲಭ್ಯವಿವೆ. ಯಾವುದೇ ಏಜೆಂಟರ ಬಳಿ ಹೋಗುವ ಅಗತ್ಯವಿಲ್ಲ’ ಎಂದರು.</p>.<p>ಮುಖಂಡ ಸುನೀಲ್ ಹೆಗಡೆ ಮಾತನಾಡಿದರು. ಲಿಂಗೈಕ್ಯರಾದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಮತ್ತು ಜಿಲ್ಲೆಯ ದೋಣಿ ದುರಂತದಲ್ಲಿ ಮಡಿದವರಿಗೆಶ್ರದ್ಧಾಂಜಲಿ ಸಲ್ಲಿಸಲಾಯಿತು.ಲಕ್ಷ್ಮಿನಾರಾಯಣ ಗೌಡ ಮತ್ತು ಕಾರವಾರದ ದತ್ತಾತ್ರೇಯ ಶೆಟ್ಟಿ ಅವರಿಗೆ ಪಾಸ್ಪೋರ್ಟ್ಸೇವಾ ಕೇಂದ್ರದಿಂದ ಪ್ರಥಮ ಟೋಕನ್ಗಳನ್ನುನೀಡಲಾಯಿತು.</p>.<p>ವೀಣಾ ಶ್ರೀನಿವಾಸನ್ ಸ್ವಾಗತಿಸಿದರು. ಶೀತಲ್ ಸಂಗಡಿಗರು ಪ್ರಾರ್ಥಿಸಿದರು. ಜಿಲ್ಲೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>