ಕಾರವಾರ: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ನಿರ್ದೋಷಿಯಾಗಿ ಹೊರಬರಲಿ ಎಂದು ಅವರ ಹಿರಿಯ ಸಹೋದರಿ ದಿವ್ಯಾ ಮತ್ತು ಕೈಗಾದಲ್ಲಿ ಎಂಜಿನಿಯರ್ ಆಗಿರುವ ಇವರ ಪತಿ ಮಂಜುನಾಥ ಅವರು ತಾಲ್ಲೂಕಿನ ಮಲ್ಲಾಪುರದ ಕೈಗಾ ಟೌನ್ಶಿಪ್ನಲ್ಲಿನ ರಾಮಲಿಂಗೇಶ್ವರ, ಶನೀಶ್ವರ ದೇವಾಲಯದಲ್ಲಿ ಶನಿವಾರ ಪೂಜೆ ಸಲ್ಲಿಸಿದರು. ದರ್ಶನ್ ಹೆಸರಿನಲ್ಲಿ ಅರ್ಚನೆ ಮಾಡಿಸಿದ ಅವರು, ನವಗ್ರಹ ಪೂಜೆ, ಶನಿಶಾಂತಿ ಪೂಜೆಯೂ ನೆರವೇರಿಸಿದರು.