ಮಕ್ಕಳ ಹಕ್ಕುಗಳ ಬಗ್ಗೆ ಕೇವಲ ವೇದಿಕೆಯಲ್ಲಿ ಮಾತನಾಡುವ ಅಧಿಕಾರಿಗಳು ಮಕ್ಕಳು ಪ್ರಸ್ತಾಪಿಸುವ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಇದು ಅವರ ಕುರುಡು ಆಡಳಿತಕ್ಕೆ ಹಿಡಿದ ಕೈಗನ್ನಡಿ
ಮಲ್ಲಪ್ಪ ಸೈದಾಪುರ ಪಾಲಕ
ಮಕ್ಕಳ ಗ್ರಾಮ ಸಭೆಯ ಬಗ್ಗೆ ಗ್ರಾಮ ಪಂಚಾಯಿತಿ ಪಿಡಿಒ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿಲ್ಲ ಮುಕುಂದರಾವ್
ಕುಲಕರ್ಣಿ ಸೈದಾಪುರ ವಲಯ ಸಿಆರ್ಪಿ
ಮಕ್ಕಳ ಹಕ್ಕುಗಳ ಸಭೆಯಲ್ಲಿ ವಿದ್ಯಾರ್ಥಿಗಳು ತಿಳಿಸಿರುವ ಸಮಸ್ಯೆಗಳನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಶೀಘ್ರವೇ ಬಗೆಹರಿಸಲು ತಿಳಿಸುತ್ತೇವೆ
ನೇತ್ರಾವತಿ ಗ್ರಾಮ ಪಂಚಾಯಿತಿ ಸದಸ್ಯೆ
ತಯಾರಿ ಇಲ್ಲದೇ ಸಭೆ...?
‘ಮಕ್ಕಳ ಗ್ರಾಮ ಸಭೆ ಆಯೋಜನೆ ಕುರಿತು ನಮಗೆ ಮಾಹಿತಿ ನೀಡಿದ್ದು ನ.23ರ ಮಧ್ಯಾಹ್ನ 3:30ಕ್ಕೆ. ಆ ಕಾರಣದಿಂದ ಎಲ್ಲಾ ಮಕ್ಕಳಿಗೆ ಮಾಹಿತಿ ನೀಡಲು ಸಾಧ್ಯವಾಗಿಲ್ಲ. ಈ ಸಭೆಯು ನೆಪ ಮಾತ್ರಕ್ಕೆ ಎಂಬಂತಾಗಿದೆ. ಪ್ರತಿವರ್ಷವೂ ಸಭೆಯಲ್ಲಿ ವಿದ್ಯಾರ್ಥಿಗಳು ಪ್ರಸ್ತಾಪಿಸುವ ಹಲವು ಸಮಸ್ಯೆಗಳಿಗೆ ಈತನಕ ಪರಿಹಾರ ಸಿಕ್ಕಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಶಿಕ್ಷಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು. ‘ಸೈದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 20 ಅಧಿಕ ಸರ್ಕಾರಿ ಶಾಲೆಗಳು ಬರುತ್ತವೆ. ಆದರೆ ಶುಕ್ರವಾರ ನಡೆದ ಮಕ್ಕಳ ಸಭೆಯಲ್ಲಿ ಕೇವಲ ಐದು ಶಾಲೆಗಳ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಿದ್ದರು. ಇದಕ್ಕೆ ಮಾಹಿತಿ ಕೊರತೆಯೇ ಇದಕ್ಕೆ ಕಾರಣ’ ಎಂಬುದು ಪಾಲಕರು ಮತ್ತು ಶಿಕ್ಷಕರ ಆರೋಪ.