ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಕಾಳೆಬೆಳಗುಂದಿ ಗ್ರಾಮದ ಹೊರವಲಯದಲ್ಲಿ ನಿರ್ಮಾಣವಾಗಿರುವ ಸುಂದರ ಉದ್ಯಾನವನ
ಎನ್.ಕೆ.ಬಗಾಯತ್ ಅರಣ್ಯ ಸಂರಕ್ಷಣಾಧಿಕಾರಿ ಸಾಮಾಜಿಕ ಅರಣ್ಯ ವಿಭಾಗ
ಸಾಮಾಜಿಕ ಅರಣ್ಯ ವಿಭಾಗದಿಂದ ₹14 ಲಕ್ಷ ವೆಚ್ಚದಲ್ಲಿ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಕಾಳೆಬೆಳಗುಂದಿ ದೇವಸ್ಥಾನಗಳಿಗೆ ಬರುವ ಭಕ್ತರು ಇಲ್ಲಿಗೂ ಭೇಟಿ ನೀಡಿ ವಿಶ್ರಾಂತಿ ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ
ಎನ್.ಕೆ.ಬಗಾಯತ್ ಅರಣ್ಯ ಸಂರಕ್ಷಣಾಧಿಕಾರಿ ಸಾಮಾಜಿಕ ಅರಣ್ಯ ವಿಭಾಗ
ವನ್ಯಜೀವಿಗಳ ತಾಣ
ಅರಣ್ಯ ಇಲಾಖೆ ಈ ಭಾಗದಲ್ಲಿ ಅಭಿವೃದ್ಧಿ ಕಾರ್ಯ ಮಾಡಿದಾಗ ಎಲ್ಲಿ ಪ್ರಾಣಿಗಳು ಬೇರೆಡೆ ಹೋಗುತ್ತವೆ ಎನ್ನುವ ಆತಂಕ ಇತ್ತು. ಆದರೆ ಈಗ ವನ್ಯ ಜೀವಿಗಳು ಹೆಚ್ಚಾಗಿವೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ. ಜಿಂಕೆ ಚಿಗರೆ ನವಿಲು ಅಳಿಲು ಪಾರಿವಾಳ ವಿವಿಧ ಜಾತಿಯ ಹಕ್ಕಿಗಳು ಕಾಡು ಹಂದಿ ನರಿ ತೋಳ ಮುಳ್ಳುಹಂದಿ ಮತ್ತಿತರ ಕಾಡು ಪ್ರಾಣಿಕ್ಷಿಗಳ ಆಶ್ರಯ ತಾಣವಾಗಿದೆ. ಉದ್ಯಾನ ವನದಲ್ಲಿರುವ ಗಿಡ ಮರಗಳಲ್ಲಿ ಪಕ್ಷಿಗಳು ಆಶ್ರಯ ಪಡೆದು ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತಿವೆ. ‘ಈಗ ಬೇಸಿಗೆ ಕಾಲ ಇರುವ ಕಾರಣ ಕಾಡಿನಲ್ಲಿರುವ ಪ್ರಾಣಿ ಪಕ್ಷಿಗಳಿಗೆ ನೀರಿನ ಕೊರತೆಯಾದಂತೆ ಟ್ಯಾಂಕರ್ ಮೂಲಕ ನೀರು ತೊಟ್ಟಿಗಳಲ್ಲಿ ಸಂಗ್ರಹ ಮಾಡಲಾಗುತ್ತಿದೆ. ಹಲವಾರು ಪ್ರಾಣಿ ಪಕ್ಷಿಗಳು ಪ್ರತಿನಿತ್ಯವೂ ತಿರುಗಾಡುತ್ತಿದ್ದು ಖುಷಿಯಾಗುತ್ತಿದೆ’ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳುವ ಮಾತಾಗಿದೆ.