<p><strong>ಕಕ್ಕೇರಾ (ಯಾದಗಿರಿ ಜಿಲ್ಲೆ):</strong> ಪಟ್ಟಣ ಸಮೀಪದ ಗುಲಗಟ್ಟಿ ಗ್ರಾಮದ ಬಸವರಾಜ ದುರಗಪ್ಪ ಮಕಾಶಿ ಕಕ್ಕೇರಾ (28) ಹಾವು ಕಡಿದು ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಸಂಬಂಧಿಕರು ಆರೋಪಿಸಿದ್ದಾರೆ.</p><p>ಬಸವರಾಜ ಮಕಾಶಿ ಪ್ರಸ್ತುತ ಹುಣಸಗಿ ತಾಲ್ಲೂಕಿನ ಗುಳಬಾಳದಲ್ಲಿ ಪತ್ನಿ ಊರಲ್ಲಿ ವಾಸವಿದ್ದರು. ಶನಿವಾರ (ಮಾ.23) ರಂದು ಸಂಜೆ 6.30ಕ್ಕೆ ಜಾನುವಾರುಗಳಿಗೆ ಮೇವು ತರಲು ಹೋದಾಗ ಹಾವು ಕಚ್ಚಿದೆ. ಶೀಘ್ರವೇ ಸಮೀಪದ ಹುಣಸಗಿ ಆರೋಗ್ಯ ಕೇಂದ್ರಕ್ಕೆ ಆಗಮಿಸಿದಾಗ, ಸಿಬ್ಬಂದಿ ಗ್ಲುಕೋಸ್ ಹಚ್ಚಿದರು. <br>ನಂತರ ಹಟ್ಟಿಯಲ್ಲಿ ಇದಕ್ಕೆ ಔಷಧಿ ಇದೆ ಹೋಗಿ ಎಂದು ವೈದ್ಯಕೀಯ ಸಿಬ್ಬಂದಿ ಹೇಳಿದರು. ಸರಿಯಾದ ಸಮಯದಲ್ಲಿ ವೈದ್ಯಾಧಿಕಾರಿ ಇರಲಿಲ್ಲ. ಹೀಗಾಗಿ ಎರಡು ಗಂಟೆಯಾದರೂ ಅಂಬುಲೆನ್ಸ್ ಸಿಬ್ಬಂದಿ ಬಾರದ ಪ್ರಯುಕ್ತ ಜೀವ ಹೋಗಿದೆ ಎಂದು ಕುಟುಂಬಸ್ಥರು ದೂರಿದ್ದಾರೆ.</p><p>'ನನ್ನ ಮಗನ ಜೀವ ಹೋಗಲು ವೈದ್ಯರು, ಅಂಬುಲೆನ್ಸ್ ಸಿಬ್ಬಂದಿ' ಕಾರಣ ಎಂದು ತಂದೆ ದುರಗಪ್ಪ ಮಕಾಶಿ ಆರೋಪಿಸಿದ್ದಾರೆ.</p><p>ವೈದ್ಯಾಧಿಕಾರಿ ಡಾ.ಎಸ್.ಬಿ. ಪಾಟೀಲ, ಅಂಬುಲೆನ್ಸ್ ವಾಹನ ಚಾಲಕರ ನಿರ್ಲಕ್ಷ್ಯದಿಂದ ಜೀವ ಹೋಗಿದೆ. ಹೀಗಾಗಿ ಅವರನ್ನು ಅಮಾನತು ಮಾಡಬೇಕೆಂದು ರೈತ ಸಂಘ, ಎಸ್ಸಿ, ಎಸ್ಟಿ ಒಕ್ಕೂಟ ನಿರ್ದೇಶಕ ದೇವಿಂದ್ರಪ್ಪ ಬಳಿಚಕ್ರ, ದಲಿತ ಸಂಘಟನೆ, ಸೇರಿದಂತೆ ಗ್ರಾಮಸ್ಥರು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಕ್ಕೇರಾ (ಯಾದಗಿರಿ ಜಿಲ್ಲೆ):</strong> ಪಟ್ಟಣ ಸಮೀಪದ ಗುಲಗಟ್ಟಿ ಗ್ರಾಮದ ಬಸವರಾಜ ದುರಗಪ್ಪ ಮಕಾಶಿ ಕಕ್ಕೇರಾ (28) ಹಾವು ಕಡಿದು ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದು, ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಸಂಬಂಧಿಕರು ಆರೋಪಿಸಿದ್ದಾರೆ.</p><p>ಬಸವರಾಜ ಮಕಾಶಿ ಪ್ರಸ್ತುತ ಹುಣಸಗಿ ತಾಲ್ಲೂಕಿನ ಗುಳಬಾಳದಲ್ಲಿ ಪತ್ನಿ ಊರಲ್ಲಿ ವಾಸವಿದ್ದರು. ಶನಿವಾರ (ಮಾ.23) ರಂದು ಸಂಜೆ 6.30ಕ್ಕೆ ಜಾನುವಾರುಗಳಿಗೆ ಮೇವು ತರಲು ಹೋದಾಗ ಹಾವು ಕಚ್ಚಿದೆ. ಶೀಘ್ರವೇ ಸಮೀಪದ ಹುಣಸಗಿ ಆರೋಗ್ಯ ಕೇಂದ್ರಕ್ಕೆ ಆಗಮಿಸಿದಾಗ, ಸಿಬ್ಬಂದಿ ಗ್ಲುಕೋಸ್ ಹಚ್ಚಿದರು. <br>ನಂತರ ಹಟ್ಟಿಯಲ್ಲಿ ಇದಕ್ಕೆ ಔಷಧಿ ಇದೆ ಹೋಗಿ ಎಂದು ವೈದ್ಯಕೀಯ ಸಿಬ್ಬಂದಿ ಹೇಳಿದರು. ಸರಿಯಾದ ಸಮಯದಲ್ಲಿ ವೈದ್ಯಾಧಿಕಾರಿ ಇರಲಿಲ್ಲ. ಹೀಗಾಗಿ ಎರಡು ಗಂಟೆಯಾದರೂ ಅಂಬುಲೆನ್ಸ್ ಸಿಬ್ಬಂದಿ ಬಾರದ ಪ್ರಯುಕ್ತ ಜೀವ ಹೋಗಿದೆ ಎಂದು ಕುಟುಂಬಸ್ಥರು ದೂರಿದ್ದಾರೆ.</p><p>'ನನ್ನ ಮಗನ ಜೀವ ಹೋಗಲು ವೈದ್ಯರು, ಅಂಬುಲೆನ್ಸ್ ಸಿಬ್ಬಂದಿ' ಕಾರಣ ಎಂದು ತಂದೆ ದುರಗಪ್ಪ ಮಕಾಶಿ ಆರೋಪಿಸಿದ್ದಾರೆ.</p><p>ವೈದ್ಯಾಧಿಕಾರಿ ಡಾ.ಎಸ್.ಬಿ. ಪಾಟೀಲ, ಅಂಬುಲೆನ್ಸ್ ವಾಹನ ಚಾಲಕರ ನಿರ್ಲಕ್ಷ್ಯದಿಂದ ಜೀವ ಹೋಗಿದೆ. ಹೀಗಾಗಿ ಅವರನ್ನು ಅಮಾನತು ಮಾಡಬೇಕೆಂದು ರೈತ ಸಂಘ, ಎಸ್ಸಿ, ಎಸ್ಟಿ ಒಕ್ಕೂಟ ನಿರ್ದೇಶಕ ದೇವಿಂದ್ರಪ್ಪ ಬಳಿಚಕ್ರ, ದಲಿತ ಸಂಘಟನೆ, ಸೇರಿದಂತೆ ಗ್ರಾಮಸ್ಥರು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>