ಸುರಪುರ ತಾಲ್ಲೂಕಿನ ಕಂಪಾಪುರದಲ್ಲಿರುವ ಪಂಪ್ಹೌಸ್ ಹತ್ತಿರ ನೀರಿನ ಸಂಗ್ರಹ ಕಡಿಮೆಯಾಗಿರುವುದು
ಸದ್ಯಕ್ಕೆ ಕುಡಿಯುವ ನೀರಿನ ಕೊರತೆ ಕಾಣಿಸಿಲ್ಲ. ಮುಂದಿನ ತಿಂಗಳಿಂದ ಸಮಸ್ಯೆ ಕಾಣಿಸಿಕೊಂಡರೆ ಅಗತ್ಯ ಕ್ರಮದ ಬಗ್ಗೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದೆ. ಕುಡಿಯುವ ನೀರಿಗಾಗಿ ಸಾಕಷ್ಟು ಅನುದಾನವಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಇಲ್ಲ
–ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಉಸ್ತುವಾರಿ ಸಚಿವ
ಮುಂದಿನ ದಿನಗಳಲ್ಲಿ ಯಾದಗಿರಿ ನಗರದಲ್ಲಿ 8–10 ವಾರ್ಡ್ಗಳಲ್ಲಿ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕರು ನೀರು ಮಿತವಾಗಿ ಬಳಸಬೇಕು
–ಲಕ್ಷ್ಮೀಕಾಂತ, ನಗರಸಭೆ ಪೌರಾಯುಕ್ತ ಯಾದಗಿರಿ
ಪ್ರತಿ ವರ್ಷವೂ ಬೇಸಿಗೆಗೂ ಮುಂಚೆಯೇ ನಮ್ಮ ಗ್ರಾಮದಲ್ಲಿ ಸಮಸ್ಯೆಯಿರುತ್ತದೆ. ಇದು ಎಲ್ಲಾ ಅಧಿಕಾರಿಗಳಿಗೂ ಗೊತ್ತಿರುವ ವಿಷಯ. ಸಮಸ್ಯೆಯ ತೀವ್ರತೆಯ ವಿರುದ್ಧ ಗ್ರಾಮಸ್ಥರು ಕೇಳಿದಾಗ ಅಥವಾ ಪತ್ರಿಕೆಯಲ್ಲಿ ಬಂದಾಗ ತಾತ್ಕಾಲಿಕ ವ್ಯವಸ್ಥೆ ಮಾಡುತ್ತಾರೆ
–ಸಾಬಣ್ಣ ಬೋಯಿನ್, ಯಂಪಾಡ ಗ್ರಾಮಸ್ಥ
ಬೇಸಿಗೆ ಸಮಯದಲ್ಲಿ ಪಟ್ಟಣಕ್ಕೆ ನೀರು ಸರಬರಾಜು ಮಾಡಲು ಸಮಸ್ಯೆಯಾಗದಂತೆ ಬೇಕಾದ ಸಿದ್ಧತೆಗಳಲ್ಲಿ ತೊಡಗಿದ್ದೇವೆ. ಭೀಮಾ ನದಿಯಿಂದ ಬರುವ ನೀರಿನ ಜಾಕ್ವೆಲ್ ಅರಕೇರಾ ಮತ್ತು ಧರಂಪುರ ಗ್ರಾಮಗಳಲ್ಲಿನ ಪಂಪಿಂಗ್ ಮೋಟಾರ್ಗಳಲ್ಲಿ ಸಮಸ್ಯೆಯಾಗುವ ಸಾಧ್ಯತೆಯಿರುವುದರಿಂದ ಮುನ್ನೆಚ್ಚರಿಕ ಕ್ರಮವಾಗಿ ದುರಸ್ತಿ ಮಾಡಿಕೊಳ್ಳಲಾಗುತ್ತಿದೆ