ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ: ತರಕಾರಿ ದರದಲ್ಲಿ ಏರಿಳಿತ

ಬೇಸಿಗೆ ಸೀಸನ್‌ ಆರಂಭ; ಸೊಪ್ಪುಗಳ ದರ ಯಥಾಸ್ಥಿತಿ
Published : 4 ಫೆಬ್ರುವರಿ 2024, 6:35 IST
Last Updated : 4 ಫೆಬ್ರುವರಿ 2024, 6:35 IST
ಫಾಲೋ ಮಾಡಿ
Comments
ಬೇಸಿಗೆ ಕಾಲದಲ್ಲಿ ತರಕಾರಿ ದರ ಹೆಚ್ಚಳ ಸಾಮಾನ್ಯ. ಅಲ್ಲದೇ ಈ ಬಾರಿ ತುಸು ಬೇಗನೆ ಕೆಲ ತರಕಾರಿ ದರದಲ್ಲಿ ಹೆಚ್ಚಳವಾಗಿದೆ
ಬಸು ಚಿಂತನಹಳ್ಳಿ ತರಕಾರಿ ವ್ಯಾಪಾರಿ
ಕಳೆದ ವಾರದಲ್ಲಿ ತರಕಾರಿ ದರ ಏರಿಕೆಯಾಗಿರಲಿಲ್ಲ. ಈ ವಾರ ತುಸು ಹೆಚ್ಚಾಗಿದ್ದು ಕೆಲ ತರಕಾರಿಗಳು ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ
ಸಂತೋಷಮ್ಮ ಹೊಸಳ್ಳಿ ಗ್ರಾಹಕಿ
ನಿಂಬೆಹಣ್ಣು, ಸೌತೆಕಾಯಿ ದರ ಹೆಚ್ಚಳ
ಜಿಲ್ಲೆಯಲ್ಲಿ ನಿಧಾನವಾಗಿ ಬೇಸಿಗೆ ಆರಂಭವಾಗುತ್ತಿದ್ದು ನಿಂಬೆಹಣ್ಣು ಸೌತೆಕಾಯಿ ದರ ಹೆಚ್ಚಳವಾಗಿದೆ. ಸಗಟು ದರದಲ್ಲಿ ನಿಂಬೆಹಣ್ಣು ₹10ಗೆ ಮೂರು ಚಿಲ್ಲರೆ ಮಾರಾಟದಲ್ಲಿ ₹10ಗೆ ಎರಡು ಮಾರಾಟ ಮಾಡಲಾಗುತ್ತಿದೆ. ಕಳೆದ ಎರಡು ವಾರಗಳಿಂದ ಪ್ರತಿ ಕೆಜಿ ಸೌತೆಕಾಯಿ ₹60ಗೆ ಮಾರಾಟವಾಗುತ್ತಿತ್ತು. ಈಗ ₹20 ಹೆಚ್ಚಳವಾಗಿದ್ದು ಬೇಡಿಕೆಯೂ ಬಂದಿದೆ. ಸದ್ಯ ಮಾರುಕಟ್ಟೆಯಲ್ಲಿ ₹80ಗೆ ಒಂದು ಕೆಜಿ ಸೌತೆಕಾಯಿ ಮಾರಾಟ ಮಾಡಲಾಗುತ್ತಿದೆ. ಬೇಸಿಗೆ ಸೀಸನ್‌ ಹಣ್ಣುಗಳು ಮಾರುಕಟ್ಟೆ ಪ್ರವೇಶಿಸಿದ್ದು ರಸ್ತೆ ಬದಿಯಲ್ಲಿ ಕಲ್ಲಂಗಡಿ ಹಣ್ಣುಗಳ ರಾಶಿ ಕಂಡು ಬರುತ್ತಿದೆ. ಇದರ ಜೊತೆಗೆ ಕರಬೂಜ ಹಣ್ಣುಗಳನ್ನು ತಳ್ಳುಗಾಡಿಯಲ್ಲಿಟ್ಟು ಮಾರಾಟ ಮಾಡುವುದು ಕಂಡು ಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT