<p><strong>ಗುರುಮಠಕಲ್: ಕ</strong>ಳೆದ ವರ್ಷ ಮುಂಗಾರು ಮಳೆಯು ಸಮಯಕ್ಕೆ ಬಾರದೆ ಮತ್ತು ನಂತರದಲ್ಲಿ ಬಿಡದಂತೆ ಜಿಟಿಜಿಟಿ ಸುರಿದು ಬೆಳೆ ಹಾನಿಯಾಗಿತ್ತು. ಈ ವರ್ಷವಾದರೂ ಮಳೆರಾಯ ಚೆಲ್ಲಾಟವಾಡದೆ ನಮ್ಮ ಕೈಹಿಡಿಯಲಿ. ಮಾಡಿದ ಸಾಲವೆಲ್ಲ ತೀರಿಸುವಂತೆ ಹರಸಲಿ ಎನ್ನುವ ಬೇಡಿಕೆಯೊಂದಿಗೆ ಭೂಮಿತಾಯಿ ಒಡಲಿಗೆ ಬೀಜ ನೀಡುತ್ತಿದ್ದೇವೆ’ ಎನ್ನುವ ರೈತಾಪಿ ವರ್ಗ ಮುಂಗಾರು ಬಿತ್ತನೆಗೆ ಚಾಲನೆ ನೀಡಿದೆ.</p>.<p>‘ರೋಹಿಣಿ ಮಳೆ ಆಶಾದಾಯಕವಾಗಿ ಕಂಡಿದ್ದು, ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಕಳೆದೆ ಎರಡ್ಮೂರು ವರ್ಷಗಳಿಂದ ವರುಣನ ಅವಕೃಪೆಯಿಂದ ನಿರೀಕ್ಷಿತ ಫಸಲು ಸಿಗದೆ ಕಂಗಾಲಾಗಿದ್ದೆವು. ಈಗಲಾದರೂ ನಮ್ಮ ಕಷ್ಟ ದೂರಾಗಲಿ’ ಎನ್ನುತ್ತಾರೆ ಯುವ ರೈತ ಪ್ರಸಾದ.</p>.<p>ಕೃಷಿ ಇಲಾಖೆ ಸನ್ನದ್ದ: ರೈತರ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ ಹಂಚಿಕೆ ಮಾಡುತ್ತಿದ್ದು, ಹಂತ-ಹಂತವಾಗಿ ಇಲಾಖೆಯಿಂದ ಬೀಜದ ದಾಸ್ತಾನು ಪೂರೈಕೆ ಮಾಡುತ್ತಿದೆ. ಅವಶ್ಯವಿದ್ದಲ್ಲಿ ಹೆಚ್ಚುವರಿ ದಾಸ್ತಾನು ವ್ಯವಸ್ಥೆ ಮಾಡಿ ರೈತರ ಬೇಡಿಕೆಯನ್ನು ಪೂರೈಸಲು ಯತ್ನಿಸುವುದಾಗಿ ಗುರುಮಠಕಲ್ ಹಾಗೂ ಕೊಂಕಲ್ ರೈತ ಸಂಪರ್ಕ ಕೇಂದ್ರಗಳ ಸಿಬ್ಬಂದಿ ಭರವಸೆ ನೀಡಿದರು.</p>.<p>ಡಿಎಪಿ ಕೊರತೆ: ಸರಬರಾಜು ವ್ಯತ್ಯಯದಿಂದ ತಾಲ್ಲೂಕಿನಲ್ಲಿ ಡಿಎಪಿ ಕೊರತೆ ಉಂಟಾಗಿದ್ದು, ಕೆಲ ರೈತರು ನೆರೆಯ ತೆಲಂಗಾಣದ ನಾರಾಯಣಪೇಟದಿಂದ ಖರೀದಿಸುತ್ತಿದ್ದಾರೆ. ಕೃಷಿ ಇಲಾಖೆ ಮೂಡಿಸುತ್ತಿರುವ ಜಾಗೃತಿಯಂತೆ ಕೆಲ ರೈತರು ಇತರ ಗೊಬ್ಬರವನ್ನೂ ಖರೀದಿಸುತ್ತಿದ್ದಾರೆ.</p>.<p>'ಈಗಾಗಲೇ ಡಿಎಪಿಗಾಗಿ ಹಣ ಪಾವತಿಸಿದ್ದು, ಅವರು ನಮಗೆ ಸರಬರಾಜು ಮಾಡಿದ ಕೂಡಲೇ ರೈತರಿಗೆ ಮಾರಾಟ ಮಾಡುತ್ತೇವೆ. ಜತೆಗೆ ಡಿಎಪಿಗೆ ಬದಲಾಗಿ ವಿವಿಧ ಗೊಬ್ಬರವನ್ನೂ ರೈತರು ಬಳಸಬಹುದು ಎಂದು ರಸಗೊಬ್ಬರ ಮಾರಾಟಗಾರರೊಬ್ಬರು ಹೇಳುತ್ತಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುರುಮಠಕಲ್: ಕ</strong>ಳೆದ ವರ್ಷ ಮುಂಗಾರು ಮಳೆಯು ಸಮಯಕ್ಕೆ ಬಾರದೆ ಮತ್ತು ನಂತರದಲ್ಲಿ ಬಿಡದಂತೆ ಜಿಟಿಜಿಟಿ ಸುರಿದು ಬೆಳೆ ಹಾನಿಯಾಗಿತ್ತು. ಈ ವರ್ಷವಾದರೂ ಮಳೆರಾಯ ಚೆಲ್ಲಾಟವಾಡದೆ ನಮ್ಮ ಕೈಹಿಡಿಯಲಿ. ಮಾಡಿದ ಸಾಲವೆಲ್ಲ ತೀರಿಸುವಂತೆ ಹರಸಲಿ ಎನ್ನುವ ಬೇಡಿಕೆಯೊಂದಿಗೆ ಭೂಮಿತಾಯಿ ಒಡಲಿಗೆ ಬೀಜ ನೀಡುತ್ತಿದ್ದೇವೆ’ ಎನ್ನುವ ರೈತಾಪಿ ವರ್ಗ ಮುಂಗಾರು ಬಿತ್ತನೆಗೆ ಚಾಲನೆ ನೀಡಿದೆ.</p>.<p>‘ರೋಹಿಣಿ ಮಳೆ ಆಶಾದಾಯಕವಾಗಿ ಕಂಡಿದ್ದು, ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ. ಕಳೆದೆ ಎರಡ್ಮೂರು ವರ್ಷಗಳಿಂದ ವರುಣನ ಅವಕೃಪೆಯಿಂದ ನಿರೀಕ್ಷಿತ ಫಸಲು ಸಿಗದೆ ಕಂಗಾಲಾಗಿದ್ದೆವು. ಈಗಲಾದರೂ ನಮ್ಮ ಕಷ್ಟ ದೂರಾಗಲಿ’ ಎನ್ನುತ್ತಾರೆ ಯುವ ರೈತ ಪ್ರಸಾದ.</p>.<p>ಕೃಷಿ ಇಲಾಖೆ ಸನ್ನದ್ದ: ರೈತರ ಬೇಡಿಕೆಗೆ ತಕ್ಕಂತೆ ಬಿತ್ತನೆ ಬೀಜ ಹಂಚಿಕೆ ಮಾಡುತ್ತಿದ್ದು, ಹಂತ-ಹಂತವಾಗಿ ಇಲಾಖೆಯಿಂದ ಬೀಜದ ದಾಸ್ತಾನು ಪೂರೈಕೆ ಮಾಡುತ್ತಿದೆ. ಅವಶ್ಯವಿದ್ದಲ್ಲಿ ಹೆಚ್ಚುವರಿ ದಾಸ್ತಾನು ವ್ಯವಸ್ಥೆ ಮಾಡಿ ರೈತರ ಬೇಡಿಕೆಯನ್ನು ಪೂರೈಸಲು ಯತ್ನಿಸುವುದಾಗಿ ಗುರುಮಠಕಲ್ ಹಾಗೂ ಕೊಂಕಲ್ ರೈತ ಸಂಪರ್ಕ ಕೇಂದ್ರಗಳ ಸಿಬ್ಬಂದಿ ಭರವಸೆ ನೀಡಿದರು.</p>.<p>ಡಿಎಪಿ ಕೊರತೆ: ಸರಬರಾಜು ವ್ಯತ್ಯಯದಿಂದ ತಾಲ್ಲೂಕಿನಲ್ಲಿ ಡಿಎಪಿ ಕೊರತೆ ಉಂಟಾಗಿದ್ದು, ಕೆಲ ರೈತರು ನೆರೆಯ ತೆಲಂಗಾಣದ ನಾರಾಯಣಪೇಟದಿಂದ ಖರೀದಿಸುತ್ತಿದ್ದಾರೆ. ಕೃಷಿ ಇಲಾಖೆ ಮೂಡಿಸುತ್ತಿರುವ ಜಾಗೃತಿಯಂತೆ ಕೆಲ ರೈತರು ಇತರ ಗೊಬ್ಬರವನ್ನೂ ಖರೀದಿಸುತ್ತಿದ್ದಾರೆ.</p>.<p>'ಈಗಾಗಲೇ ಡಿಎಪಿಗಾಗಿ ಹಣ ಪಾವತಿಸಿದ್ದು, ಅವರು ನಮಗೆ ಸರಬರಾಜು ಮಾಡಿದ ಕೂಡಲೇ ರೈತರಿಗೆ ಮಾರಾಟ ಮಾಡುತ್ತೇವೆ. ಜತೆಗೆ ಡಿಎಪಿಗೆ ಬದಲಾಗಿ ವಿವಿಧ ಗೊಬ್ಬರವನ್ನೂ ರೈತರು ಬಳಸಬಹುದು ಎಂದು ರಸಗೊಬ್ಬರ ಮಾರಾಟಗಾರರೊಬ್ಬರು ಹೇಳುತ್ತಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>