<p><strong>ನವದೆಹಲಿ</strong>: ಚುನಾವಾಣಾ ಬಾಂಡ್ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆಗೆ ಕಾಂಗ್ರೆಸ್ ಸೋಮವಾರ ತೀವ್ರ ಟೀಕೆ ವ್ಯಕ್ತಪಡಿಸಿದೆ.</p>.<p>‘ಮೋದಿ ನೇತೃತ್ವದ ಸರ್ಕಾರದ ಭ್ರಷ್ಟಾಚಾರ ಇಡೀ ದೇಶಕ್ಕೆ ತಿಳಿದಿದೆ. ಆದರೆ, ಇದನ್ನು ಸಾಬೀತುಮಾಡಲು ಸರಿಯಾದ ಸಾಕ್ಷಿ ಸಿಗುತ್ತಿಲ್ಲ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಹೇಳಿದ್ದಾರೆ.</p>.<p>ಮೋದಿ ಅವರು ‘ತಂತಿ’ ಸುದ್ದಿವಾಹಿನಿಗೆ ಭಾನುವಾರ ನೀಡಿದ ಸಂದರ್ಶನದಲ್ಲಿ, ಚುನಾವಣಾ ಬಾಂಡ್ ವಿವಾದದಿಂದಾಗಿ ತಮ್ಮ ಸರ್ಕಾರಕ್ಕೆ ಹಿನ್ನಡೆಯಾಗಿದೆ ಎಂಬುದನ್ನು ತಳ್ಳಿಹಾಕಿದ್ದು, ‘ಯಾವುದೇ ವ್ಯವಸ್ಥೆಯೂ ಪರಿಪೂರ್ಣವಲ್ಲ ಅಥವಾ ಕೊರತೆಗಳಿಲ್ಲದೇ ಇಲ್ಲ. ಆದರೆ, ಆ ವ್ಯವಸ್ಥೆಯಲ್ಲಿರುವ ಕೊರತೆಯನ್ನು ನೀಗಿಸಬಹುದು’ ಎಂದು ತಿಳಿಸಿದ್ದರು.</p>.<p>ಪ್ರಧಾನಿ ಅವರ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಜೈರಾಮ್ ಅವರು, ‘ಪ್ರತಿದಿನವೂ ಪ್ರಧಾನಿ ಮೋದಿ ಅವರ ಬೂಟಾಟಿಕೆ ಹೆಚ್ಚುತ್ತಲೇ ಇದೆ. ಅಲ್ಲದೇ ಅವರ ಅಪ್ರಾಮಾಣಿಕತೆಯೂ ಅಧಿಕವಾಗುತ್ತಿದೆ’ ಎಂದು ‘ಎಕ್ಸ್’ನಲ್ಲಿ ಹೇಳಿದ್ದಾರೆ.</p>.<p>‘ಈ ಚುನಾವಣಾ ಬಾಂಡ್ ಯೋಜನೆಯಲ್ಲಿ ಬಾಂಡ್ ನೀಡಿದವರ ಹೆಸರನ್ನು ಗುಟ್ಟಾಗಿ ಇಡಲಾಗಿತ್ತು . ಯಾವ ಮೂಲಗಳಿಂದ ಪಕ್ಷಕ್ಕೆ ಹಣ ಬಂದಿದೆ ಮತ್ತು ಅದನ್ನು ಹೇಗೆ ಬಳಸಿಕೊಳ್ಳಲಾಗಿದೆ ಎಂಬುದನ್ನು ಸಾರ್ವಜನಿಕರಿಂದ ಮುಚ್ಚಿಡುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿತ್ತು ಎನ್ನುವುದೇ ಇದರ ಅರ್ಥ’ ಎಂದು ಜೈರಾಮ್ ಕಿಡಿಕಾರಿದ್ದಾರೆ.</p>.<p>‘2018ರಿಂದ 2024ರವರೆಗೆ ಯಾವ ದೇಣಿಗೆದಾರನಿಂದ ಯಾವ ಪಕ್ಷಕ್ಕೆ ಎಷ್ಟು ಹಣ ಬಂದಿದೆ ಎಂಬ ಒಂದೇ ಒಂದು ಮಾಹಿತಿ ಸಾರ್ವಜನಿಕರ ಮುಂದೆ ಬಹಿರಂಗವಾಗಿಲ್ಲ’ ಎಂದೂ ಅವರು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಚುನಾವಾಣಾ ಬಾಂಡ್ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಹೇಳಿಕೆಗೆ ಕಾಂಗ್ರೆಸ್ ಸೋಮವಾರ ತೀವ್ರ ಟೀಕೆ ವ್ಯಕ್ತಪಡಿಸಿದೆ.</p>.<p>‘ಮೋದಿ ನೇತೃತ್ವದ ಸರ್ಕಾರದ ಭ್ರಷ್ಟಾಚಾರ ಇಡೀ ದೇಶಕ್ಕೆ ತಿಳಿದಿದೆ. ಆದರೆ, ಇದನ್ನು ಸಾಬೀತುಮಾಡಲು ಸರಿಯಾದ ಸಾಕ್ಷಿ ಸಿಗುತ್ತಿಲ್ಲ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಹೇಳಿದ್ದಾರೆ.</p>.<p>ಮೋದಿ ಅವರು ‘ತಂತಿ’ ಸುದ್ದಿವಾಹಿನಿಗೆ ಭಾನುವಾರ ನೀಡಿದ ಸಂದರ್ಶನದಲ್ಲಿ, ಚುನಾವಣಾ ಬಾಂಡ್ ವಿವಾದದಿಂದಾಗಿ ತಮ್ಮ ಸರ್ಕಾರಕ್ಕೆ ಹಿನ್ನಡೆಯಾಗಿದೆ ಎಂಬುದನ್ನು ತಳ್ಳಿಹಾಕಿದ್ದು, ‘ಯಾವುದೇ ವ್ಯವಸ್ಥೆಯೂ ಪರಿಪೂರ್ಣವಲ್ಲ ಅಥವಾ ಕೊರತೆಗಳಿಲ್ಲದೇ ಇಲ್ಲ. ಆದರೆ, ಆ ವ್ಯವಸ್ಥೆಯಲ್ಲಿರುವ ಕೊರತೆಯನ್ನು ನೀಗಿಸಬಹುದು’ ಎಂದು ತಿಳಿಸಿದ್ದರು.</p>.<p>ಪ್ರಧಾನಿ ಅವರ ಈ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಜೈರಾಮ್ ಅವರು, ‘ಪ್ರತಿದಿನವೂ ಪ್ರಧಾನಿ ಮೋದಿ ಅವರ ಬೂಟಾಟಿಕೆ ಹೆಚ್ಚುತ್ತಲೇ ಇದೆ. ಅಲ್ಲದೇ ಅವರ ಅಪ್ರಾಮಾಣಿಕತೆಯೂ ಅಧಿಕವಾಗುತ್ತಿದೆ’ ಎಂದು ‘ಎಕ್ಸ್’ನಲ್ಲಿ ಹೇಳಿದ್ದಾರೆ.</p>.<p>‘ಈ ಚುನಾವಣಾ ಬಾಂಡ್ ಯೋಜನೆಯಲ್ಲಿ ಬಾಂಡ್ ನೀಡಿದವರ ಹೆಸರನ್ನು ಗುಟ್ಟಾಗಿ ಇಡಲಾಗಿತ್ತು . ಯಾವ ಮೂಲಗಳಿಂದ ಪಕ್ಷಕ್ಕೆ ಹಣ ಬಂದಿದೆ ಮತ್ತು ಅದನ್ನು ಹೇಗೆ ಬಳಸಿಕೊಳ್ಳಲಾಗಿದೆ ಎಂಬುದನ್ನು ಸಾರ್ವಜನಿಕರಿಂದ ಮುಚ್ಚಿಡುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿತ್ತು ಎನ್ನುವುದೇ ಇದರ ಅರ್ಥ’ ಎಂದು ಜೈರಾಮ್ ಕಿಡಿಕಾರಿದ್ದಾರೆ.</p>.<p>‘2018ರಿಂದ 2024ರವರೆಗೆ ಯಾವ ದೇಣಿಗೆದಾರನಿಂದ ಯಾವ ಪಕ್ಷಕ್ಕೆ ಎಷ್ಟು ಹಣ ಬಂದಿದೆ ಎಂಬ ಒಂದೇ ಒಂದು ಮಾಹಿತಿ ಸಾರ್ವಜನಿಕರ ಮುಂದೆ ಬಹಿರಂಗವಾಗಿಲ್ಲ’ ಎಂದೂ ಅವರು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>