ಕಳೆದ ಬಾರಿ ಬಿಜೆಪಿಗೆ ಜೈ ಎಂದಿದ್ದ ತುಮಕೂರು ಮತದಾರರು, ಈ ಬಾರಿಯೂ ಅದೇ ಪಕ್ಷಕ್ಕೆ ಗೆಲುವಿನ ಹಾರ ತೊಡಸಿದ್ದಾರೆ. ಆದರೆ, ವ್ಯಕ್ತಿ ಮಾತ್ರ ಬೇರೆ. ಅದು ವಿ. ಸೋಮಣ್ಣ. ವಿಧಾನಸಭೆ ಚುನಾವಣೆಯಲ್ಲಿ ಸೋತು ತುಮಕೂರಿಗೆ ವಲಸೆ ಬಂದಿದ್ದ ಅವರು ಗೆಲುವಿನ ನಗೆ ಬೀರಿದ್ದಾರೆ. ಕಳೆದ ಬಾರಿ ಬಿಜೆಪಿಯಿಂದ ಗೆದ್ದು, ಈ ಬಾರಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಮುದ್ದಹನುಮೇಗೌಡರಿಗೆ ಸೋಲಾಗಿದೆ.