ನಗರದಲ್ಲಿ ಬುಧವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ‘ಭ್ರಷ್ಟಾಚಾರಿಗಳನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ರಾಜ್ಯಸಭಾ ಸದಸ್ಯರು, ಸಚಿವರನ್ನಾಗಿ ಮಾಡಿದ್ದಾರೆ. ಕಳಂಕ ಇದ್ದ ಮನುಷ್ಯ ಬಿಜೆಪಿ ಸೇರಿದ ಬಳಿಕ ಬೆಳ್ಳಗಾಗಿ ಹೋಗುತ್ತಾರೆ. ಮೋದಿ ಅವರು, ಬೆರಳು ಕೊಟ್ಟರೆ ಮನುಷ್ಯನನ್ನು ನುಂಗುವವರಾಗಿದ್ದಾರೆ’ ಎಂದು ದೂರಿದರು.