ಬಾಗಲಕೋಟೆ: ಲೋಕಸಭೆ ಚುನಾವಣಾ ಕಣಕ್ಕೆ ಇಳಿದಿದ್ದ ಬೀಳಗಿ ತಾಲ್ಲೂಕಿನ ಸುನಗದ ಎಸ್.ಬಿ. ಪಾಟೀಲರನ್ನು ಸುನಗದ ಗೌಡ್ರ ಎಂದೇ ಗುರುತಿಸಲಾಗುತ್ತಿತ್ತು. ಬೀಳಗಿಯಲ್ಲಿ ಬಹಳ ವರ್ಷಗಳ ಕಾಲ ಇದ್ದರೂ ಅವರ ಹೆಸರಿನೊಂದಿಗೆ ಸುನಗ ಸೇರಿಕೊಂಡಿತ್ತು. ಸುನಗ ಗ್ರಾಮಕ್ಕೆ ಕುಡಿಯುವ ನೀರು ಹಾಗೂ ನೀರಾವರಿ ವ್ಯವಸ್ಥೆ ಕಲ್ಪಿಸುವ ಕಾರ್ಯವನ್ನು ಅವರು ಮಾಡಿದ್ದರು. ಗಾಂಧಿ ಟೊಪ್ಪಿಗೆ ಧರಿಸುತ್ತಿದ್ದ ಅವರು ಸರಳ ಸಜ್ಜನರಾಗಿದ್ದರು. ಪ್ರಾಮಾಣಿಕ ಹೋರಾಟದ ಫಲದಿಂದಲೇ ಅವರಿಗೆ ಟಿಕೆಟ್ ದೊರೆತಿತ್ತು.