<p><strong>ಬೆಂಗಳೂರು</strong>: ಮುಸ್ಲಿಮರನ್ನು ಉಗ್ರರು ಎಂಬಂತೆ ಬಿಂಬಿಸಲಾಗಿದೆ. ಇಂದಿನ ಪ್ರಪಂಚದಲ್ಲಿ ಮುಸ್ಲಿಮನಾಗಿ ಉಳಿಯುವುದು ಒಬ್ಬಂಟಿ ಭಾವ ಮೂಡಿಸುತ್ತದೆ ಎಂದು ಗಾಯಕ ಲಕ್ಕಿ ಅಲಿ ಹೇಳಿದ್ದಾರೆ.</p><p>ಬಾಲಿವುಡ್ನ ಜನಪ್ರಿಯ ಗಾಯಕ ಅಲಿ ಬೆಂಗಳೂರು ಮೂಲದವರು. ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್/ಟ್ವಿಟರ್ನಲ್ಲಿ ಶುಕ್ರವಾರ ಪೋಸ್ಟ್ ಹಂಚಿಕೊಂಡಿರುವ ಅವರು, ಸ್ನೇಹಿತರೂ ತಮ್ಮಿಂದ ದೂರವಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.</p><p>'ಇಂದಿನ ಪ್ರಪಂಚದಲ್ಲಿ ಮುಸ್ಲಿಮನಾಗಿ ಉಳಿಯುವುದು ಒಬ್ಬಂಟಿ ಭಾವ ಮೂಡಿಸುತ್ತದೆ. ಪ್ರವಾದಿ ಅವರ ಮಾರ್ಗವನ್ನು ಅನುಸರಿಸುವುದು ಒಂಟಿತನ ಎದುರಾಗುತ್ತದೆ. ನಿಮ್ಮ ಸ್ನೇಹಿತರು ಬಿಟ್ಟು ಹೋಗುತ್ತಾರೆ. ಈ ಜಗತ್ತು ನಿಮ್ಮನ್ನು ಉಗ್ರ ಎಂದು ಕರೆಯುತ್ತದೆ' ಎಂದು ಬರೆದುಕೊಂಡಿದ್ದಾರೆ.</p><p>'ಓ ಸನಮ್', 'ಎಕ್ ಪಲ್ಕಾ ಜೀನಾ' 'ಹೈರಾತ್' ಸೇರಿದಂತೆ ಹಲವು ಹಾಡುಗಳ ಮೂಲಕ ಖ್ಯಾತಿ ಗಳಿಸಿರುವ ಅಲಿ, ನಟ ಮೆಹಮೂದ್ ಅವರ ಮಗ. ಐಎಎಸ್ ಅಧಿಕಾರಿಯೊಬ್ಬರ ವಿರುದ್ಧ ಇತ್ತೀಚೆಗೆ ಭೂ ಕಬಳಿಕ ಆರೋಪ ಮಾಡಿದ್ದ ಅವರು, ಈ ವಿಚಾರವಾಗಿ ಕರ್ನಾಟಕ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.</p>.ತಮಿಳುನಾಡಿಗೆ ಜುಲೈ 31ರವರೆಗೆ ನಿತ್ಯ 1 ಟಿಎಂಸಿ ಅಡಿ ನೀರು ಹರಿಸಲು CWRC ಶಿಫಾರಸು.ತಮಿಳುನಾಡಿಗೆ ಕಾವೇರಿ ನೀರು, ಕಾನೂನು ತಜ್ಞರೊಂದಿಗೆ ಚರ್ಚೆ: ಶಿವಕುಮಾರ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಮುಸ್ಲಿಮರನ್ನು ಉಗ್ರರು ಎಂಬಂತೆ ಬಿಂಬಿಸಲಾಗಿದೆ. ಇಂದಿನ ಪ್ರಪಂಚದಲ್ಲಿ ಮುಸ್ಲಿಮನಾಗಿ ಉಳಿಯುವುದು ಒಬ್ಬಂಟಿ ಭಾವ ಮೂಡಿಸುತ್ತದೆ ಎಂದು ಗಾಯಕ ಲಕ್ಕಿ ಅಲಿ ಹೇಳಿದ್ದಾರೆ.</p><p>ಬಾಲಿವುಡ್ನ ಜನಪ್ರಿಯ ಗಾಯಕ ಅಲಿ ಬೆಂಗಳೂರು ಮೂಲದವರು. ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್/ಟ್ವಿಟರ್ನಲ್ಲಿ ಶುಕ್ರವಾರ ಪೋಸ್ಟ್ ಹಂಚಿಕೊಂಡಿರುವ ಅವರು, ಸ್ನೇಹಿತರೂ ತಮ್ಮಿಂದ ದೂರವಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.</p><p>'ಇಂದಿನ ಪ್ರಪಂಚದಲ್ಲಿ ಮುಸ್ಲಿಮನಾಗಿ ಉಳಿಯುವುದು ಒಬ್ಬಂಟಿ ಭಾವ ಮೂಡಿಸುತ್ತದೆ. ಪ್ರವಾದಿ ಅವರ ಮಾರ್ಗವನ್ನು ಅನುಸರಿಸುವುದು ಒಂಟಿತನ ಎದುರಾಗುತ್ತದೆ. ನಿಮ್ಮ ಸ್ನೇಹಿತರು ಬಿಟ್ಟು ಹೋಗುತ್ತಾರೆ. ಈ ಜಗತ್ತು ನಿಮ್ಮನ್ನು ಉಗ್ರ ಎಂದು ಕರೆಯುತ್ತದೆ' ಎಂದು ಬರೆದುಕೊಂಡಿದ್ದಾರೆ.</p><p>'ಓ ಸನಮ್', 'ಎಕ್ ಪಲ್ಕಾ ಜೀನಾ' 'ಹೈರಾತ್' ಸೇರಿದಂತೆ ಹಲವು ಹಾಡುಗಳ ಮೂಲಕ ಖ್ಯಾತಿ ಗಳಿಸಿರುವ ಅಲಿ, ನಟ ಮೆಹಮೂದ್ ಅವರ ಮಗ. ಐಎಎಸ್ ಅಧಿಕಾರಿಯೊಬ್ಬರ ವಿರುದ್ಧ ಇತ್ತೀಚೆಗೆ ಭೂ ಕಬಳಿಕ ಆರೋಪ ಮಾಡಿದ್ದ ಅವರು, ಈ ವಿಚಾರವಾಗಿ ಕರ್ನಾಟಕ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.</p>.ತಮಿಳುನಾಡಿಗೆ ಜುಲೈ 31ರವರೆಗೆ ನಿತ್ಯ 1 ಟಿಎಂಸಿ ಅಡಿ ನೀರು ಹರಿಸಲು CWRC ಶಿಫಾರಸು.ತಮಿಳುನಾಡಿಗೆ ಕಾವೇರಿ ನೀರು, ಕಾನೂನು ತಜ್ಞರೊಂದಿಗೆ ಚರ್ಚೆ: ಶಿವಕುಮಾರ್.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>