ಧಾರಾವಾಹಿ ಜಗತ್ತಿನಿಂದ ಬಂದಿರುವ ನಿರ್ದೇಶಕ ರಮೇಶ್ ಕೃಷ್ಣ ಒಂದಷ್ಟು ಟ್ವಿಸ್ಟ್ಗಳೊಂದಿಗೆ ಅಚ್ಚುಕಟ್ಟಾದ ಕಥೆಯನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಹೆಚ್ಚು ಪಾತ್ರಗಳಿಲ್ಲ, ಬಹಳಷ್ಟು ಜಾಗಗಳಿಲ್ಲ. ಕಥೆ ಅದನ್ನು ಬೇಡುವುದೂ ಇಲ್ಲ. ಅಷ್ಟರಮಟ್ಟಿಗೆ ಚೌಕಟ್ಟಿನೊಳಗೆ ಕಥೆಯನ್ನು ಹೆಣೆದಿದ್ದಾರೆ. ಆದರೆ ಈ ಇತಿಮಿತಿಗಳೇ ಕೆಲವು ಕಡೆ ಸಿನಿಮೀಯ ಅನುಭವವನ್ನು ತಗ್ಗಿಸುತ್ತದೆ.