ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ಬಹುದಿನಗಳ ಕನಸು ಸಾಕಾರಗೊಳ್ಳುವುದು
Published 7 ಅಕ್ಟೋಬರ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆ ಮಾಡಿಕೊಳ್ಳುವ ತೀರ್ಮಾನ ಅಭಿವೃದ್ಧಿಗೆ ಕಾರಣವಾಗುವುದು.ರಾಜಕೀಯ ಪಿತೂರಿ ನಡೆಸುತ್ತಿರುವವರು ಯಾರು ಎಂಬುದು ತಿಳಿದುಬರಲಿದೆ.
ವೃಷಭ
ಹರಾಜಿನಲ್ಲಿ ಆಸ್ತಿ ಖರೀದಿ ಎನ್ನುವ ರೀತಿಯಲ್ಲಿ ಸಂಪತ್ತು ಅಭಿವೃದ್ಧಿಯಾಗಲಿದೆ. ಜಾಮೀನು ವಿಷಯಕ್ಕೆ ಸಂಬಂಧಿಸಿದಂತೆ ನೆರೆಯವರಲ್ಲಿ ಮಾತುಕತೆ ನಡೆಯಲಿದೆ. ಉಪಾಯದಿಂದ ಉತ್ತರಿಸಿ. ಮಕ್ಕಳಿಂದ ಸಂತೋಷ ಸಿಗಲಿದೆ.
ಮಿಥುನ
ಮನೆಯಲ್ಲಿ ನಡೆದ ಅಹಿತಕರ ಘಟನೆಯಿಂದಾಗಿ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯಕ್ಕೆ ಹಾನಿಯುಂಟಾಗಲಿದೆ. ಸುತ್ತಲಿನ ವಾತಾವರಣ ಸಂತಸದಾಯಕವಾಗಿ ಇರುತ್ತದೆ. ಸಮಸ್ಯೆ ನೀವಾಗಿಯೇ ಪರಿಹರಿಸಿಕೊಳ್ಳುವಿರಿ.
ಕರ್ಕಾಟಕ
ಬಾಲ್ಯಸ್ನೇಹಿತನಿಗಾಗಿ ಮನೆಯಲ್ಲಿ ವಿಶೇಷ ಭೋಜನದ ವ್ಯವಸ್ಥೆ ನಡೆಯುವುದು. ಆಹಾರದಲ್ಲಿ ಆಗುವ ಬದಲಾವಣೆಯಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ.
ಸಿಂಹ
ಸ್ವಂತ ಉದ್ಯೋಗಿಗಳಿಗೆ ಬರುವ ನೂತನ ಯೋಚನೆಗಳನ್ನು ಕೈ ಬಿಟ್ಟು ಈಗಿನ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳುವುದು ಉತ್ತಮ. ಪ್ರೀತಿ ಪಾತ್ರರಿಂದ ನೆಮ್ಮದಿ ತರುವಂಥ ಸನ್ನಿವೇಶಗಳು ನಡೆಯುತ್ತವೆ.
ಕನ್ಯಾ
ಸಾಮಾಜಿಕ ಕಾರ್ಯಗಳಲ್ಲಿ ಚಟುವಟಿಕೆಯಿಂದ, ಆಕರ್ಷಕಾ ರೀತಿಯಲ್ಲಿ ಭಾಗವಹಿಸುವಿರಿ. ಗೃಹ ಬಳಕೆಯ ಸಾಮಗ್ರಿ ಖರೀದಿಯಿಂದ ಸಂತಸ. ಸೋದರರನ್ನು ಸರಿಹಾದಿಗೆ ತರುವಲ್ಲಿ ಶ್ರಮ ವಹಿಸುವಿರಿ.
ತುಲಾ
ಬಹುದಿನಗಳ ಕನಸು ಸಾಕಾರಗೊಳ್ಳುವುದು. ಪ್ರಾಮಾಣಿಕತೆ, ಬುದ್ಧಿವಂತಿಕೆ, ಕೆಲಸದಲ್ಲಿನ ಶಿಸ್ತು ಗೌರವಯುತ ಹುದ್ದೆಯನ್ನು ಅಲಂಕರಿಸಲು ಸಹಾಯ ಮಾಡಲಿದೆ. ರಾಜಕೀಯ ಚಟುವಟಿಕೆಗಳಲ್ಲಿ ಓಡಾಟ ಇರುವುದು.
ವೃಶ್ಚಿಕ
ಕುಟುಂಬದ ಸದಸ್ಯರ ಜೊತೆಗೆ ಕಳೆಯುವ ಈ ದಿನದ ಸಮಯವು ಹಾಸ್ಯಮಯವಾಗಿರಲಿದೆ. ಪ್ರಾಪಂಚಿಕ ವಿಷಯಗಳಲ್ಲಿ ಮಹತ್ವಾಕಾಂಕ್ಷೆ ಇರುವವರಿಗೆ ಶುಭ ದಿನ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು ಲಭ್ಯ.
ಧನು
ಮಹತ್ವಾಕಾಂಕ್ಷೆ ಈಡೇರಿಕೆಯತ್ತ ಮನುಷ್ಯ ಪ್ರಯತ್ನದ ಜತೆಯಲ್ಲಿ ಸಕಾರಾತ್ಮಕ ದೃಷ್ಟಿಕೋನವಿರಲಿ. ಉದ್ಯೋಗಾಕಾಂಕ್ಷಿಗಳಿಗೆ ವಿದ್ಯಾರ್ಹತೆಗೆ ಸರಿಯಾದ ಕೆಲಸಗಳು ದೊರಕುವಲ್ಲಿ ವ್ಯತ್ಯಾಸಗಳಾಗಬಹುದು.
ಮಕರ
ಒಡಹುಟ್ಟಿದವರ ಸಹಾಯ, ಸಹಕಾರದಿಂದ ಮಾನಸಿಕ ನೆಮ್ಮದಿ ಮತ್ತು ಸಂಸಾರದಲ್ಲಿ ಸಮತೋಲನ ಹೊಂದುವಿರಿ. ಬಂಧುವರ್ಗದವರ ಸಹಾಯ ಸ್ವೀಕರಿಸುವುದು ಅಗೌರವವೆಂದು ಭಾವಿಸಬೇಡಿ.
ಕುಂಭ
ಅದೃಷ್ಟ ನಿಮ್ಮೆಡೆಗಿದ್ದರೂ ಎಲ್ಲಾ ಕಾರ್ಯಗಳನ್ನು ಎಚ್ಚರಿಕೆಯಿಂದ ನಿರ್ವಹಿಸುವುದು ಉತ್ತಮ. ಸದುದ್ದೇಶ ಕಾರಣದಿಂದ ಕೆಲವು ಕೆಲಸವನ್ನು ಗೌಪ್ಯವಾಗಿ ನಿರ್ವಹಿಸಬೇಕಾಗುವುದು. ಆಹಾರದಲ್ಲಿ ಪಥ್ಯವಿರಲಿ.
ಮೀನ
ನಿಯಮ ಉಲ್ಲಂಘನೆ ಮಾಡುವುದು, ದಬ್ಬಾಳಿಕೆ ನಡೆಸುವ ನಿಮ್ಮ ರೀತಿ ನೀತಿಯನ್ನು ಬದಲಿಸಿಕೊಳ್ಳುವ ಹಾದಿಯನ್ನು ಹುಡುಕಿಕೊಳ್ಳಿರಿ. ವಿನಾಯಕನ ದರ್ಶನದಿಂದ ಅನುಕೂಲ.
ADVERTISEMENT
ADVERTISEMENT