‘ಭಾಗ್ಯಮ್ಮ ಹಾಗೂ ಸುರೇಶ, ಹಲವು ವರ್ಷಗಳ ಹಿಂದೆ ಮದುವೆಯಾಗಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದರು. ಮೊದಲ ಮಗ ಈ ಹಿಂದೆ ತೀರಿಕೊಂಡಿದ್ದಾನೆ. ಧನರಾಜ್ ಎರಡನೇ ಮಗನಾಗಿದ್ದು, ಆತನನ್ನು ತಂದೆ– ತಾಯಿ ಹೆಚ್ಚು ಇಷ್ಟಪಡುತ್ತಿದ್ದರು. ಬಡತನವಿದ್ದರೂ ಮಗನಿಗೆ ಉತ್ತಮ ಶಿಕ್ಷಣ ಕೊಡಿಸಿದ್ದರು. ಧನರಾಜ್ ಆತ್ಮಹತ್ಯೆ ಮಾಡಿಕೊಂಡ ದೃಶ್ಯ ನೋಡಿದ ತಾಯಿ, ಮನೆ ಸಮೀಪದಲ್ಲಿದ್ದ ಹಳಿ ಬಳಿ ಹೋಗಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ಅವರು ಹೇಳಿದರು.