ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮತ್ತವರ ಬೆಂಬಲಿಗರಿಗೆ ಹಲವು ನಿವೇಶನಗಳನ್ನು ಮಂಜೂರು ಮಾಡಲಾಗಿದೆ’ ಎಂದರು. ಈ ಸಂಬಂಧ ದಾಖಲೆಗಳನ್ನು ಮಾಧ್ಯಮಗೋಷ್ಠಿಯ ಮುಂದೆ ಇಟ್ಟರು. ವಿರೋಧ ಪಕ್ಷಗಳ ಯಾವೆಲ್ಲಾ ನಾಯಕರಿಗೆ, ಅವರ ಕುಟುಂಬದವರಿಗೆ ಮತ್ತು ಆಪ್ತರಿಗೆ ನಿವೇಶನಗಳನ್ನು ಮಂಜೂರು ಮಾಡಲಾಗಿದೆ ಎಂಬ ವಿವರ ಇದ್ದ ಪಟ್ಟಿಯನ್ನು ಓದಿ ಹೇಳಿದರು.