ಕೇಂದ್ರ ಸರ್ಕಾರ ದೇಶದಲ್ಲಿ ಬೆಲೆ ನಿಯಂತ್ರಣ ಮಾಡಿದರೆ ರಾಜ್ಯ ಸರ್ಕಾರ ಕೃತಕವಾಗಿ ಬೆಲೆ ಏರಿಕೆ ಸನ್ನಿವೇಶ ಸೃಷ್ಟಿಸಿದೆ. ಇದು ಸರ್ಕಾರ ದಿವಾಳಿಯಾಗಿರುವುದಕ್ಕೆ ಸಾಕ್ಷಿ. ಲೋಕಸಭಾ ಚುನಾವಣೆಯಲ್ಲಿ ಜನರು ತಿರಸ್ಕಾರ ಮಾಡಿದ್ದಕ್ಕೆ ದ್ವೇಷ ಸಾಧಿಸುತ್ತಿದೆ
–ಪ್ರಲ್ಹಾದ ಜೋಶಿಕೇಂದ್ರ ಸಚಿವ
‘ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬೊಕ್ಕಸ ಖಾಲಿಯಾಗಿದೆ. ಇದಕ್ಕಾಗಿ ಕಾಂಗ್ರೆಸ್ ಸರ್ಕಾರವು ಜನರ ಕಿಸೆಗೆ ಕೈಹಾಕುತ್ತಿದೆ. ಜನಸಾಮಾನ್ಯರ ಮೇಲೆ ಹೊರೆ ಹಾಕುವ ಬದಲು ಗ್ಯಾರಂಟಿ ಯೋಜನೆಗಳನ್ನೇ ನಿಲ್ಲಿಸಲಿ’
– ಜಗದೀಶ ಶೆಟ್ಟರ್ ಸಂಸದ
‘ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದೊಡ್ಡ ಜಾಹೀರಾತು ನೀಡಿದ್ದ ಕಾಂಗ್ರೆಸ್ ಇದೀಗ ಬೆಲೆ ಏರಿಕೆ ಮೂಲಕ ರಾಜ್ಯದ ಜನರ ಕೈಗೆ ‘ಚೊಂಬು’ ನೀಡಿದೆ.