ವಾಘ್ಮೋರೆ ವಿಜಯಪುರ ಜಿಲ್ಲೆಯವನಾದರೂ ಅವನುಗುಂಡು ಹಾರಿಸುವ ತರಬೇತಿ ಪಡೆದಿದ್ದು ಖಾನಾಪುರದ ಅರಣ್ಯದಲ್ಲಿ. ಈ ತಾಲ್ಲೂಕಿನ ಜಾಂಬೋಟಿ, ಲೋಂಡಾ ಅರಣ್ಯಗಳು ಕ್ರಿಮಿನಲ್ಗಳ ತರಬೇತಿ ಕೇಂದ್ರಗಳಾಗಿರುವಂತಿವೆ. ಅಲ್ಲಿ ಎಷ್ಟು ಮರಿ ವೀರಪ್ಪನ್ಗಳು ಇದ್ದಾರೋ ಏನೋ! ದೂರದ ಬೆಂಗಳೂರಿನಲ್ಲಿ ಕುಳಿತಿರುವ ಕರ್ನಾಟಕ ಸರ್ಕಾರದವರಿಗೆ ಬೆಳಗಾವಿ ಜಿಲ್ಲೆಯ ಅರಣ್ಯದಲ್ಲಿ ನಡೆಯುವ ಕ್ರಿಮಿನಲ್ ಚಟುವಟಿಕೆಯ ಅಂದಾಜು ಇರಲಿಕ್ಕಿಲ್ಲ. ಪೊಲೀಸ್ ಹಾಗೂ ಗುಪ್ತಚರ ಇಲಾಖೆಗಳು ಖಾನಾಪುರ ತಾಲ್ಲೂಕಿನ ಅರಣ್ಯಗಳತ್ತ ಸ್ವಲ್ಪ ಗಮನ ಹರಿಸುವುದು ಅಗತ್ಯ