‘ಗ್ರಾಮ ಪಂಚಾಯಿತಿಗಳು ಮೊದಲಿನಿಂದಲೂ ಇವೆ. ಸ್ವಾತಂತ್ರ್ಯ ಬಂದಾಗಿನಿಂದ ಕಾಮಗಾರಿಗಳು ನಡೆದಿವೆ. ಇಷ್ಟಾದರೂ ಕೊಳೆಗೇರಿಗಳಿವೆ, ಹಿಂದುಳಿದ ಗ್ರಾಮಗಳಿವೆ. ನಮ್ಮ ಕೆಲಸಗಳಿಂದ ನಮ್ಮನ್ನು ಗುರುತಿಸುವಂತೆ ಆಗಬೇಕಿತ್ತು. 30 ವರ್ಷಗಳು ಕಳೆದರೂ ನೀರ್ ಸಾಬ್ ಎಂದೇ ಕರೆಯಲ್ಪಡುವ ಅಬ್ದುಲ್ ನಜೀರ್ ಸಾಬ್ ಯಾರಿಗೆ ಗೊತ್ತಿಲ್ಲ ಹೇಳಿ, ಅವರ ರೀತಿಯಲ್ಲಿ ನಾವು ಮಾಡುವ ಕೆಲಸದಿಂದ ಜನರು ನಮ್ಮ ಗುರುತು ಹಿಡಿಯುವಂತಾಗಬೇಕು’ ಎಂದು ಹೇಳಿದರು.