ಜಿಟಿಜಿಟಿ ಮಳೆಗೆ ಕೊಡೆ ಹಿಡಿದು ನಡೆದ ಹನುಮ ವೇಷಧಾರಿಗಳು ಹಾಡಿ–ಕುಣಿದು–ನೆಗೆದು ಮಕ್ಕಳನ್ನು ರಂಜಿಸಿದರು. ಕಪಿಸೇನೆ ಬಂದ ಮೇಲೆ ರಾಮದೇವರು ಬಾರದಿರಲು ಸಾಧ್ಯವೇ? ಆದರೆ ಮೈಗೆ ನೀಲಿಬಣ್ಣ ಪೂಸಿಕೊಂಡಿದ್ದ ಈ ರಾಮ ರಾಜನಂತಿರಲಿಲ್ಲ. ವನವಾಸದ ನೆನಪಿನಲ್ಲಿ ಬಸವಳಿದಂತೆ ಕಾಣುತ್ತಿದ್ದ ಜಟಾಧಾರಿಯಾಗಿದ್ದ. ಆನಂದರಾವ್ ವೃತ್ತದ ಸಮೀಪ ಕಂಡುಬಂದ ವಾನರಸೇನೆಯ ಹುಡುಗಾಟಗಳನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದವರು ಎಂ.ಎಸ್. ಮಂಜುನಾಥ್