ಧುಬ್ರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಹಾನಿಗೊಳಗಾಗಿದ್ದು, 6,48,806 ಮಂದಿ ತೊಂದರೆಗೆ ಸಿಲುಕಿದ್ದಾರೆ. ದರಾಂಗ್ನಲ್ಲಿ 1,90,261, ಕಾಚಾರ್ನಲ್ಲಿ 1,45,926, ಬರ್ಪೆಟಾದಲ್ಲಿ 1,31,041 ಹಾಗೂ ಗೋಲಾಘಾಟ್ನಲ್ಲಿ 1,08,594 ಮಂದಿ ತೊಂದರೆಗೆ ಸಿಲುಕಿದ್ದಾರೆ.
ಪ್ರಸ್ತುತ 39,338 ಸಂತ್ರಸ್ತರು 698 ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಮತ್ತಷ್ಟು 7,24,322 ಶಿಬಿರೇತರ ಮಂದಿಗೆ ಪರಿಹಾರ ಸಾಮಗ್ರಿ ವಿತರಿಸಲಾಗಿದೆ. ದೋಣಿ ಬಳಸಿ 1,000ಕ್ಕೂ ಹೆಚ್ಚು ಮಂದಿ ಹಾಗೂ 635 ಪ್ರಾಣಿಗಳನ್ನು ರಕ್ಷಿಸಲಾಗಿದೆ.
ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.