<p><strong>ನವದೆಹಲಿ:</strong> ಪೂರ್ವ ಲಡಾಖ್ನಲ್ಲಿ ವಾಸ್ತವ ಗಡಿ ರೇಖೆ ಉದ್ದಕ್ಕೂ ಗಸ್ತು ಆರಂಭಕ್ಕೆ ಸಂಬಂಧಿಸಿ ಚೀನಾ, ಭಾರತ ನಡುವೆ ಒಪ್ಪಂದ ಆಗಿದ್ದರೂ, ‘ಹಲವು ಪ್ರಶ್ನೆಗಳು ಉಳಿದಿವೆ’ ಎಂದು ಕಾಂಗ್ರೆಸ್ ಬುಧವಾರ ಪ್ರತಿಕ್ರಿಯಿಸಿದೆ.</p><p> ಅಲ್ಲದೆ, ‘ಕಳೆದ ದಶಕದಲ್ಲಿನ ಕೆಟ್ಟ ವಿದೇಶಾಂಗ ನೀತಿಯಿಂದಾಗಿ ದೇಶಕ್ಕೆ ಆದ ಹಿನ್ನಡೆಗೆ ಈಗ ಗೌರವಯುತ ಪರಿಹಾರ ಸಿಗಬಹುದು’ ಎಂಬ ವಿಶ್ವಾಸವನ್ನೂ ಕಾಂಗ್ರೆಸ್ ಪಕ್ಷ ವ್ಯಕ್ತಪಡಿಸಿದೆ.</p><p>ಚೀನಾದ ಜೊತೆಗಿನ ಒಪ್ಪಂದ ಕುರಿತು ಮೋದಿ ಸರ್ಕಾರ ಹೆಚ್ಚಿನ ವಿವರಗಳನ್ನು ಬಹಿರಂಗ ಪಡಿಸಬೇಕು ಎಂದು ಪಕ್ಷ ಆಗ್ರಹಪಡಿಸಿದ್ದು, ಆರು ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟಿದೆ.</p><p>ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಚೀನಾ ಜೊತೆಗಿನ ಅನಿಶ್ಚಿತತೆಯನ್ನು ‘ದುರಂತ ಕಥೆ’ ಎಂದು ಬಣ್ಣಿಸಿದ್ದು, ಪ್ರಧಾನಿ ವಿರುದ್ಧ ಹರಿಹಾಯ್ದರು.</p><p>ಗಾಲ್ವಾನ್ ಸಂಘರ್ಷದ ಬಳಿಕ 2020ರ ಜೂ.19ರಂದು ಪ್ರಧಾನಿ ಚೀನಾಗೆ ‘ಕ್ಲೀನ್ ಚಿಟ್’ ನೀಡಿದ್ದರಿಂದ ಭಾರತದ ನಿಲುವು ಸಡಿಲವಾಯಿತು ಎಂದು ಆರೋಪಿಸಿದರು. ಆಗ ಪ್ರಧಾನಿ, ‘ನಮ್ಮ ಗಡಿಗೆ ಯಾರೂ ನುಗ್ಗಿ ಬಂದಿಲ್ಲ, ಗಡಿಯೊಳಗೆ ಯಾರೊಬ್ಬರೂ ಇಲ್ಲ’ ಎಂದು ಹೇಳಿದ್ದರು.</p><p>‘ಪ್ರಧಾನಿ ಹೇಳಿಕೆ ಚೀನಾಗೆ ತಾನು ಅತಿಕ್ರಮಿಸಿದ್ದ ಭಾರತದ ಭೂಮಿ ಮೇಲೆ ಹಕ್ಕು ಸ್ಥಾಪಿಸಲು ಅವಕಾಶ ನೀಡಿತು. ಬಿಕ್ಕಟ್ಟನ್ನು ಮೋದಿ ಸರ್ಕಾರ ನಿಭಾಯಿಸಿದ್ದನ್ನು ಡಿಡಿಎಲ್ಜೆಯಂತಿದೆ (ನಿರಾಕರಿಸು, ಗೊಂದಲ ಮೂಡಿಸು, ಸುಳ್ಳು ಹೇಳು, ಸಮರ್ಥಿಸಿಕೊ)’ ಎಂದು ಟೀಕಿಸಿದರು. </p><p>ಗಡಿಯಲ್ಲಿ ಎದುರಾಗಿರುವ ಸವಾಲುಗಳನ್ನು ಒಟ್ಟಾಗಿ ಎದುರಿಸಲು ಅನುವಾಗುವಂತೆ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ಕೇಳಲಾಯಿತು. ಆದರೆ, ನಾಲ್ಕು ವರ್ಷಗಳಲ್ಲಿ ಇದಕ್ಕೆ ಅವಕಾಶವನ್ನೇ ನೀಡಲಿಲ್ಲ ಎಂದು ಟೀಕಿಸಿದರು.</p> .<h2>ಕಾಂಗ್ರೆಸ್ ಎತ್ತಿರುವ ಪ್ರಶ್ನೆಗಳು</h2>.<ul><li><p> ಸೇನಾಪಡೆಗಳು ಡೆಪ್ಸಾಂಗ್ನಿಂದ ಈ ಹಿಂದಿನಂತೆ ಐದು ಗಸ್ತು ಪಾಯಿಂಟ್ವರೆಗೂ ಗಸ್ತು ನಡೆಸಲಿವೆಯೇ? </p></li><li><p>ಕಳೆದ ನಾಲ್ಕು ವರ್ಷಗಳಿಂದ ಗಸ್ತು ನಡೆಯದ ಡೆಮ್ಚೋಕ್ನ ಮೂರು ಪಾಯಿಂಟ್ವರೆಗೂ ಇನ್ನು ಮುಂದೆ ಗಸ್ತು ಮುಂದುವರಿಯಲಿದೆಯೇ? </p></li><li><p>ಭಾರತೀಯ ಯೋಧರಿಗೆ ಪಾಂಗಾಂಗ್ ಸರೋವರದ ಫಿಂಗರ್ 3 ಗಸ್ತು ಠಾಣೆ ಬಳಿಯೇ ತಡೆಒಡ್ಡಲಾಗುವುದೇ? ಫಿಂಗರ್ 8 ಠಾಣೆವರೆಗೆ ಹೋಗಬಹುದೇ? ಗೋಗ್ರಾಹಾಟ್ ಸ್ಪ್ರಿಂಗ್ಸ್ನ 3 ಗಸ್ತು ಠಾಣೆವರೆಗೆ ಹೋಗಲು ಅವಕಾಶ ಇದೆಯೇ ? </p></li><li><p>ಚುಶೂಲ್ ವಲಯದ ಹೆಲ್ಮೆಟ್ ಟಾಪ್ ಮುಕ್ಪಾ ರೇ ರೆಜಾಂಗ್ ಲಾ ರಿಂಚೆನ್ ಲಾ ಟೇಬಲ್ ಟಾಪ್ ಗುರುಂಗ್ ಪರ್ವತ ಭಾಗದಲ್ಲಿ ಸಾಂಪ್ರದಾಯಿಕ ಬಯಲು ಪ್ರವೇಶಿಸುವ ಅವಕಾಶ ಸೈನಿಕರಿಗೆ ಇದೆಯೇ? </p></li><li><p>ಸರ್ಕಾರ ಚೀನಾಗೆ ಬಿಟ್ಟುಕೊಟ್ಟಿರುವ ಮೇಜರ್ ಶೈತಾನ್ ಸಿಂಗ್ ಅವರ ಸ್ಮಾರಕವುಳ್ಳ ರೆಜಾಂಗ್ ಲಾದಲ್ಲಿನ ‘ಬಫರ್ ವಲಯ’ವು ಇನ್ನು ಇತಿಹಾಸವೇ? </p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಪೂರ್ವ ಲಡಾಖ್ನಲ್ಲಿ ವಾಸ್ತವ ಗಡಿ ರೇಖೆ ಉದ್ದಕ್ಕೂ ಗಸ್ತು ಆರಂಭಕ್ಕೆ ಸಂಬಂಧಿಸಿ ಚೀನಾ, ಭಾರತ ನಡುವೆ ಒಪ್ಪಂದ ಆಗಿದ್ದರೂ, ‘ಹಲವು ಪ್ರಶ್ನೆಗಳು ಉಳಿದಿವೆ’ ಎಂದು ಕಾಂಗ್ರೆಸ್ ಬುಧವಾರ ಪ್ರತಿಕ್ರಿಯಿಸಿದೆ.</p><p> ಅಲ್ಲದೆ, ‘ಕಳೆದ ದಶಕದಲ್ಲಿನ ಕೆಟ್ಟ ವಿದೇಶಾಂಗ ನೀತಿಯಿಂದಾಗಿ ದೇಶಕ್ಕೆ ಆದ ಹಿನ್ನಡೆಗೆ ಈಗ ಗೌರವಯುತ ಪರಿಹಾರ ಸಿಗಬಹುದು’ ಎಂಬ ವಿಶ್ವಾಸವನ್ನೂ ಕಾಂಗ್ರೆಸ್ ಪಕ್ಷ ವ್ಯಕ್ತಪಡಿಸಿದೆ.</p><p>ಚೀನಾದ ಜೊತೆಗಿನ ಒಪ್ಪಂದ ಕುರಿತು ಮೋದಿ ಸರ್ಕಾರ ಹೆಚ್ಚಿನ ವಿವರಗಳನ್ನು ಬಹಿರಂಗ ಪಡಿಸಬೇಕು ಎಂದು ಪಕ್ಷ ಆಗ್ರಹಪಡಿಸಿದ್ದು, ಆರು ಪ್ರಶ್ನೆಗಳನ್ನು ಸರ್ಕಾರದ ಮುಂದಿಟ್ಟಿದೆ.</p><p>ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, ಚೀನಾ ಜೊತೆಗಿನ ಅನಿಶ್ಚಿತತೆಯನ್ನು ‘ದುರಂತ ಕಥೆ’ ಎಂದು ಬಣ್ಣಿಸಿದ್ದು, ಪ್ರಧಾನಿ ವಿರುದ್ಧ ಹರಿಹಾಯ್ದರು.</p><p>ಗಾಲ್ವಾನ್ ಸಂಘರ್ಷದ ಬಳಿಕ 2020ರ ಜೂ.19ರಂದು ಪ್ರಧಾನಿ ಚೀನಾಗೆ ‘ಕ್ಲೀನ್ ಚಿಟ್’ ನೀಡಿದ್ದರಿಂದ ಭಾರತದ ನಿಲುವು ಸಡಿಲವಾಯಿತು ಎಂದು ಆರೋಪಿಸಿದರು. ಆಗ ಪ್ರಧಾನಿ, ‘ನಮ್ಮ ಗಡಿಗೆ ಯಾರೂ ನುಗ್ಗಿ ಬಂದಿಲ್ಲ, ಗಡಿಯೊಳಗೆ ಯಾರೊಬ್ಬರೂ ಇಲ್ಲ’ ಎಂದು ಹೇಳಿದ್ದರು.</p><p>‘ಪ್ರಧಾನಿ ಹೇಳಿಕೆ ಚೀನಾಗೆ ತಾನು ಅತಿಕ್ರಮಿಸಿದ್ದ ಭಾರತದ ಭೂಮಿ ಮೇಲೆ ಹಕ್ಕು ಸ್ಥಾಪಿಸಲು ಅವಕಾಶ ನೀಡಿತು. ಬಿಕ್ಕಟ್ಟನ್ನು ಮೋದಿ ಸರ್ಕಾರ ನಿಭಾಯಿಸಿದ್ದನ್ನು ಡಿಡಿಎಲ್ಜೆಯಂತಿದೆ (ನಿರಾಕರಿಸು, ಗೊಂದಲ ಮೂಡಿಸು, ಸುಳ್ಳು ಹೇಳು, ಸಮರ್ಥಿಸಿಕೊ)’ ಎಂದು ಟೀಕಿಸಿದರು. </p><p>ಗಡಿಯಲ್ಲಿ ಎದುರಾಗಿರುವ ಸವಾಲುಗಳನ್ನು ಒಟ್ಟಾಗಿ ಎದುರಿಸಲು ಅನುವಾಗುವಂತೆ ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ಕೇಳಲಾಯಿತು. ಆದರೆ, ನಾಲ್ಕು ವರ್ಷಗಳಲ್ಲಿ ಇದಕ್ಕೆ ಅವಕಾಶವನ್ನೇ ನೀಡಲಿಲ್ಲ ಎಂದು ಟೀಕಿಸಿದರು.</p> .<h2>ಕಾಂಗ್ರೆಸ್ ಎತ್ತಿರುವ ಪ್ರಶ್ನೆಗಳು</h2>.<ul><li><p> ಸೇನಾಪಡೆಗಳು ಡೆಪ್ಸಾಂಗ್ನಿಂದ ಈ ಹಿಂದಿನಂತೆ ಐದು ಗಸ್ತು ಪಾಯಿಂಟ್ವರೆಗೂ ಗಸ್ತು ನಡೆಸಲಿವೆಯೇ? </p></li><li><p>ಕಳೆದ ನಾಲ್ಕು ವರ್ಷಗಳಿಂದ ಗಸ್ತು ನಡೆಯದ ಡೆಮ್ಚೋಕ್ನ ಮೂರು ಪಾಯಿಂಟ್ವರೆಗೂ ಇನ್ನು ಮುಂದೆ ಗಸ್ತು ಮುಂದುವರಿಯಲಿದೆಯೇ? </p></li><li><p>ಭಾರತೀಯ ಯೋಧರಿಗೆ ಪಾಂಗಾಂಗ್ ಸರೋವರದ ಫಿಂಗರ್ 3 ಗಸ್ತು ಠಾಣೆ ಬಳಿಯೇ ತಡೆಒಡ್ಡಲಾಗುವುದೇ? ಫಿಂಗರ್ 8 ಠಾಣೆವರೆಗೆ ಹೋಗಬಹುದೇ? ಗೋಗ್ರಾಹಾಟ್ ಸ್ಪ್ರಿಂಗ್ಸ್ನ 3 ಗಸ್ತು ಠಾಣೆವರೆಗೆ ಹೋಗಲು ಅವಕಾಶ ಇದೆಯೇ ? </p></li><li><p>ಚುಶೂಲ್ ವಲಯದ ಹೆಲ್ಮೆಟ್ ಟಾಪ್ ಮುಕ್ಪಾ ರೇ ರೆಜಾಂಗ್ ಲಾ ರಿಂಚೆನ್ ಲಾ ಟೇಬಲ್ ಟಾಪ್ ಗುರುಂಗ್ ಪರ್ವತ ಭಾಗದಲ್ಲಿ ಸಾಂಪ್ರದಾಯಿಕ ಬಯಲು ಪ್ರವೇಶಿಸುವ ಅವಕಾಶ ಸೈನಿಕರಿಗೆ ಇದೆಯೇ? </p></li><li><p>ಸರ್ಕಾರ ಚೀನಾಗೆ ಬಿಟ್ಟುಕೊಟ್ಟಿರುವ ಮೇಜರ್ ಶೈತಾನ್ ಸಿಂಗ್ ಅವರ ಸ್ಮಾರಕವುಳ್ಳ ರೆಜಾಂಗ್ ಲಾದಲ್ಲಿನ ‘ಬಫರ್ ವಲಯ’ವು ಇನ್ನು ಇತಿಹಾಸವೇ? </p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>