ಈ ವರ್ಷದ ಆಗಸ್ಟ್ 30ರಂದು ನಡೆದ ಲೋಕಪಾಲ ಸಂಸ್ಥೆಯ ಪೂರ್ಣಪೀಠದ ಸಭೆಯಲ್ಲಿ, ತನಿಖಾ ವಿಭಾಗವನ್ನು ರಚಿಸಲಾಗಿದೆ. ಲೋಕಪಾಲ ಸಂಸ್ಥೆಯ ಅಧ್ಯಕ್ಷ, ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಅವರು ಸೆಪ್ಟೆಂಬರ್ 5ರಂದು ಹೊರಡಿಸಿರುವ ಆದೇಶದಲ್ಲಿ ಈ ಉಲ್ಲೇಖ ಇದೆ. ಆಗಸ್ಟ್ 6ರಂದು ನಡೆದ ಸಭೆಯಲ್ಲಿ ಲೋಕಪಾಲ ಸಂಸ್ಥೆಯು ತನಿಖಾ ವಿಭಾಗದ ರಚನೆ, ಸ್ವರೂಪ ಹೇಗಿರಬೇಕು ಎಂಬುದಕ್ಕೆ ಒಪ್ಪಿಗೆ ನೀಡಿತ್ತು.