<p><strong>ನವದೆಹಲಿ</strong>: ‘ಜಾರಿ ನಿರ್ದೇಶನಾಲಯವು (ಇ.ಡಿ) ‘ಕಿರುಕುಳ ನೀಡುವ ಸಂಸ್ಥೆ’ಯಂತೆ ಕಾರ್ಯ<br>ನಿರ್ವಹಿಸುತ್ತಿದ್ದು, ತನ್ನ ಕಕ್ಷಿದಾರರ ವಿರುದ್ಧ ಉದ್ದೇಶಪೂರ್ವಕವಾಗಿ ತನಿಖೆ ಕೈಗೊಂಡಿದೆ’ ಎಂದು ಬಿಆರ್ಎಸ್ ನಾಯಕಿ ಕೆ.ಕವಿತಾ ಪರ ವಕೀಲರು ವಿಶೇಷ ಕೋರ್ಟ್ಗೆ ತಿಳಿಸಿದ್ದಾರೆ.</p>.<p>ದೆಹಲಿ ಅಬಕಾರಿ ನೀತಿ ಹಗರಣ ಕುರಿತ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಅಭಿಷೇಕ್ ಸಿಂಘ್ವಿ ಅವರು ಸೋಮವಾರ ವಿಶೇಷ ಕೋರ್ಟ್ ಎದುರು ವಾದ ಮಂಡಿಸಿದರು.</p>.<p>‘ಇ.ಡಿ ತನಿಖೆ ನಿಷ್ಪಕ್ಷಪಾತವಾಗಿಲ್ಲ. ತನಿಖೆ ಉದ್ದೇಶಪೂರ್ವಕವಾಗಿದೆ. ‘ಬಂಧಿಸುತ್ತೇವೆ. ಬಂಧಿಸಲಾಗದಿದ್ದರೆ, ಬೆಕ್ಕು–ಇಲಿಯಾಟ ಆಡುತ್ತೇವೆ’ ಎನ್ನುವಂತಿದೆ ಇ.ಡಿ ಕಾರ್ಯಶೈಲಿ. ಬಿಆರ್ಎಸ್ ನಾಯಕಿಗೆ ಮತ್ತೆ ಮತ್ತೆ ಸಮನ್ಸ್ ಜಾರಿಯಾಗಿದೆ. ದಿನಕ್ಕೊಂದು ಸಮನ್ಸ್ ನೀಡಿದರೆ ಅದಕ್ಕೆ ಖುಷಿಯಾಗುವುದೋ ಏನೋ’ ಎಂದು ಹೇಳಿದರು.</p>.<p>ಕೋರ್ಟ್ ವಿಚಾರಣೆಯನ್ನು ಏಪ್ರಿಲ್ 4ಕ್ಕೆ ಮುಂದೂಡಿದ್ದು, ಸಿಂಘ್ವಿ ಅಂದು ವಾದ ಮುಂದುವರಿಸಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ‘ಜಾರಿ ನಿರ್ದೇಶನಾಲಯವು (ಇ.ಡಿ) ‘ಕಿರುಕುಳ ನೀಡುವ ಸಂಸ್ಥೆ’ಯಂತೆ ಕಾರ್ಯ<br>ನಿರ್ವಹಿಸುತ್ತಿದ್ದು, ತನ್ನ ಕಕ್ಷಿದಾರರ ವಿರುದ್ಧ ಉದ್ದೇಶಪೂರ್ವಕವಾಗಿ ತನಿಖೆ ಕೈಗೊಂಡಿದೆ’ ಎಂದು ಬಿಆರ್ಎಸ್ ನಾಯಕಿ ಕೆ.ಕವಿತಾ ಪರ ವಕೀಲರು ವಿಶೇಷ ಕೋರ್ಟ್ಗೆ ತಿಳಿಸಿದ್ದಾರೆ.</p>.<p>ದೆಹಲಿ ಅಬಕಾರಿ ನೀತಿ ಹಗರಣ ಕುರಿತ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಅಭಿಷೇಕ್ ಸಿಂಘ್ವಿ ಅವರು ಸೋಮವಾರ ವಿಶೇಷ ಕೋರ್ಟ್ ಎದುರು ವಾದ ಮಂಡಿಸಿದರು.</p>.<p>‘ಇ.ಡಿ ತನಿಖೆ ನಿಷ್ಪಕ್ಷಪಾತವಾಗಿಲ್ಲ. ತನಿಖೆ ಉದ್ದೇಶಪೂರ್ವಕವಾಗಿದೆ. ‘ಬಂಧಿಸುತ್ತೇವೆ. ಬಂಧಿಸಲಾಗದಿದ್ದರೆ, ಬೆಕ್ಕು–ಇಲಿಯಾಟ ಆಡುತ್ತೇವೆ’ ಎನ್ನುವಂತಿದೆ ಇ.ಡಿ ಕಾರ್ಯಶೈಲಿ. ಬಿಆರ್ಎಸ್ ನಾಯಕಿಗೆ ಮತ್ತೆ ಮತ್ತೆ ಸಮನ್ಸ್ ಜಾರಿಯಾಗಿದೆ. ದಿನಕ್ಕೊಂದು ಸಮನ್ಸ್ ನೀಡಿದರೆ ಅದಕ್ಕೆ ಖುಷಿಯಾಗುವುದೋ ಏನೋ’ ಎಂದು ಹೇಳಿದರು.</p>.<p>ಕೋರ್ಟ್ ವಿಚಾರಣೆಯನ್ನು ಏಪ್ರಿಲ್ 4ಕ್ಕೆ ಮುಂದೂಡಿದ್ದು, ಸಿಂಘ್ವಿ ಅಂದು ವಾದ ಮುಂದುವರಿಸಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>