<p><strong>ನವದೆಹಲಿ</strong>: ಹಿಂದಿ ಭಾಷಿಕ ಪ್ರದೇಶಗಳನ್ನು ‘ಗೋಮೂತ್ರ ರಾಜ್ಯಗಳು’ ಎಂದು ಲೋಕಸಭೆಯಲ್ಲಿ ಕರೆಯುವ ಮೂಲಕ ಡಿಎಂಕೆ ಸಂಸದ ಡಿ.ಎನ್.ವಿ. ಸೆಂಥಿಲ್ ಕುಮಾರ್ ಅವರು ವಿವಾದಕ್ಕೆ ಕಿಡಿ ಹೊತ್ತಿಸಿದ್ದಾರೆ.</p><p>ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಎರಡು ಮಸೂದೆಗಳ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಸೆಂಥಿಲ್ ಕುಮಾರ್ ಅವರು, ‘ಹಿಂದಿ ಭಾಷಿಕ ಪ್ರದೇಶದಲ್ಲಿ ಮಾತ್ರ ಗೆಲ್ಲುವ ಶಕ್ತಿ ಬಿಜೆಪಿಗೆ ಇದೆ ಎಂದು ದೇಶದ ಜನರು ಅರಿತುಕೊಳ್ಳಬೇಕು. ನಾವು ಆ ಪ್ರದೇಶವನ್ನು ಗೋಮೂತ್ರ ರಾಜ್ಯಗಳು ಎಂದು ಕರೆಯುತ್ತೇವೆ’ ಎಂದರು.</p><p>‘ತಮಿಳುನಾಡು, ಕರ್ನಾಟಕ, ತೆಲಂಗಾಣ, ಕೇರಳ, ಆಂಧ್ರಪ್ರದೇಶದ ಚುನಾವಣಾ ಫಲಿತಾಂಶ ಗಮನಿಸಿದ್ದೀರಲ್ಲವೇ. ನಿಮಗೆ (ಬಿಜೆಪಿ) ದಕ್ಷಿಣ ಭಾರತಕ್ಕೆ ಬರಲು ಸಾಧ್ಯವಿಲ್ಲ. ಅಲ್ಲಿ ನಾವೇ ಬಲಿಷ್ಠರು’ ಎಂದರು.</p>.<p>ಮಾತನ್ನು ಮುಂದುವರೆಸಿದ ಅವರು, ‘ದಕ್ಷಿಣ ಭಾರತವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ನಿಮಗೆ ತಿಳಿದಿದೆ. ಹಿಂಬಾಗಿಲ ಮೂಲಕ ನಿಯಂತ್ರಣ ಸಾಧಿಸಲು ದಕ್ಷಿಣ ರಾಜ್ಯಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾರ್ಪಾಡು ಮಾಡುವ ಆಯ್ಕೆ ನಿಮ್ಮ ಮುಂದಿದ್ದರೆ ಅದರಲ್ಲಿ ನಮಗೆ ಆಶ್ಚರ್ಯವಿಲ್ಲ’ ಎಂದರು. </p>.<p><strong>ಬಿಜೆಪಿ ತಿರುಗೇಟು:</strong> ಡಿಎಂಕೆ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ, ‘ಇಂಡಿಯಾ’ ಮೈತ್ರಿಕೂಟದ ಸದಸ್ಯ ಪಕ್ಷದ ಸಂಸದರೊಬ್ಬರು ಉತ್ತರ ಭಾರತವನ್ನು ಹೀಯಾಳಿಸಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಮ್ಮತಿ ಇದೆಯೇ ಎಂದು ಪ್ರಶ್ನಿಸಿದೆ.</p>.<p>ತಮಿಳುನಾಡು ಬಿಜೆಪಿ ಘಟಕದ ಮುಖ್ಯಸ್ಥ ಕೆ. ಅಣ್ಣಾಮಲೈ ಅವರು ಈ ಹೇಳಿಕೆ ವಿರೋಧಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಉತ್ತರ ಭಾರತೀಯರನ್ನು ಪಾನಿಪೂರಿ ಮಾರಾಟಗಾರರು, ಶೌಚಾಲಯ ನಿರ್ಮಿಸುವವರು ಎಂದು ಕರೆದ ಡಿಎಂಕೆ, ಈಗ ಗೋಮೂತ್ರದ ಉದಾಹರಣೆ ಮೂಲಕ ಅವರನ್ನು ಅವಮಾನಿಸಿದೆ’ ಎಂದಿದ್ದಾರೆ.</p>.<div><blockquote>ಡಿಎಂಕೆಯ ದುರಾಡಳಿತದಿಂದ ಚೆನ್ನೈ ಮುಳುಗುತ್ತಿದೆ. ಸಂಸತ್ತಿನಲ್ಲಿ ಅವರ ಚರ್ಚೆಗಳಿಗೂ ಅದೇ ಗತಿಯಾಗುತ್ತಿದೆ. ಡಿಎಂಕೆಯ ಈ ಅಸೂಕ್ಷ್ಮ ಹೇಳಿಕೆಯನ್ನು ಬಿಜೆಪಿ ಖಂಡಿಸುತ್ತದೆ.</blockquote><span class="attribution"> ಕೆ. ಅಣ್ಣಾಮಲೈ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ</span></div>.<p>‘ದೇಶದ ಹೃದಯಭಾಗದ ಭಾರತೀಯರನ್ನು ಡಿಎಂಕೆ ಅವಮಾನಿಸಿದ್ದನ್ನು ರಾಹುಲ್ ಗಾಂಧಿ ಒಪ್ಪಿಕೊಳ್ಳುತ್ತಾರಾ? ಭಾರತೀಯರನ್ನು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಇನ್ನೆಷ್ಟು ಕಾಲ ಅವಮಾನಿಸುತ್ತವೆ?’ ಎಂದು ಕರ್ನಾಟಕದ ಬಿಜೆಪಿ ನಾಯಕ ಸಿ.ಟಿ. ರವಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.</p>.<p>‘ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು’ ಎಂದು ಡಿಎಂಕೆ ನಾಯಕ, ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪಕ್ಷದ ಇತರ ಸದಸ್ಯರೂ ಧ್ವನಿಗೂಡಿಸಿದ್ದರು. ಕಳೆದ ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್ ವಿರುದ್ಧ ಈ ಹೇಳಿಕೆಯನ್ನು ಅಸ್ತ್ರವನ್ನಾಗಿ ಬಳಸಿಕೊಂಡಿತ್ತು. ಅದಾದ ಬೆನ್ನಲ್ಲೇ ಡಿಎಂಕೆ ಮತ್ತೊಂದು ವಿವಾದ ಹುಟ್ಟುಹಾಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಹಿಂದಿ ಭಾಷಿಕ ಪ್ರದೇಶಗಳನ್ನು ‘ಗೋಮೂತ್ರ ರಾಜ್ಯಗಳು’ ಎಂದು ಲೋಕಸಭೆಯಲ್ಲಿ ಕರೆಯುವ ಮೂಲಕ ಡಿಎಂಕೆ ಸಂಸದ ಡಿ.ಎನ್.ವಿ. ಸೆಂಥಿಲ್ ಕುಮಾರ್ ಅವರು ವಿವಾದಕ್ಕೆ ಕಿಡಿ ಹೊತ್ತಿಸಿದ್ದಾರೆ.</p><p>ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಎರಡು ಮಸೂದೆಗಳ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಸೆಂಥಿಲ್ ಕುಮಾರ್ ಅವರು, ‘ಹಿಂದಿ ಭಾಷಿಕ ಪ್ರದೇಶದಲ್ಲಿ ಮಾತ್ರ ಗೆಲ್ಲುವ ಶಕ್ತಿ ಬಿಜೆಪಿಗೆ ಇದೆ ಎಂದು ದೇಶದ ಜನರು ಅರಿತುಕೊಳ್ಳಬೇಕು. ನಾವು ಆ ಪ್ರದೇಶವನ್ನು ಗೋಮೂತ್ರ ರಾಜ್ಯಗಳು ಎಂದು ಕರೆಯುತ್ತೇವೆ’ ಎಂದರು.</p><p>‘ತಮಿಳುನಾಡು, ಕರ್ನಾಟಕ, ತೆಲಂಗಾಣ, ಕೇರಳ, ಆಂಧ್ರಪ್ರದೇಶದ ಚುನಾವಣಾ ಫಲಿತಾಂಶ ಗಮನಿಸಿದ್ದೀರಲ್ಲವೇ. ನಿಮಗೆ (ಬಿಜೆಪಿ) ದಕ್ಷಿಣ ಭಾರತಕ್ಕೆ ಬರಲು ಸಾಧ್ಯವಿಲ್ಲ. ಅಲ್ಲಿ ನಾವೇ ಬಲಿಷ್ಠರು’ ಎಂದರು.</p>.<p>ಮಾತನ್ನು ಮುಂದುವರೆಸಿದ ಅವರು, ‘ದಕ್ಷಿಣ ಭಾರತವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ನಿಮಗೆ ತಿಳಿದಿದೆ. ಹಿಂಬಾಗಿಲ ಮೂಲಕ ನಿಯಂತ್ರಣ ಸಾಧಿಸಲು ದಕ್ಷಿಣ ರಾಜ್ಯಗಳನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾರ್ಪಾಡು ಮಾಡುವ ಆಯ್ಕೆ ನಿಮ್ಮ ಮುಂದಿದ್ದರೆ ಅದರಲ್ಲಿ ನಮಗೆ ಆಶ್ಚರ್ಯವಿಲ್ಲ’ ಎಂದರು. </p>.<p><strong>ಬಿಜೆಪಿ ತಿರುಗೇಟು:</strong> ಡಿಎಂಕೆ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ, ‘ಇಂಡಿಯಾ’ ಮೈತ್ರಿಕೂಟದ ಸದಸ್ಯ ಪಕ್ಷದ ಸಂಸದರೊಬ್ಬರು ಉತ್ತರ ಭಾರತವನ್ನು ಹೀಯಾಳಿಸಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಮ್ಮತಿ ಇದೆಯೇ ಎಂದು ಪ್ರಶ್ನಿಸಿದೆ.</p>.<p>ತಮಿಳುನಾಡು ಬಿಜೆಪಿ ಘಟಕದ ಮುಖ್ಯಸ್ಥ ಕೆ. ಅಣ್ಣಾಮಲೈ ಅವರು ಈ ಹೇಳಿಕೆ ವಿರೋಧಿಸಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ‘ಉತ್ತರ ಭಾರತೀಯರನ್ನು ಪಾನಿಪೂರಿ ಮಾರಾಟಗಾರರು, ಶೌಚಾಲಯ ನಿರ್ಮಿಸುವವರು ಎಂದು ಕರೆದ ಡಿಎಂಕೆ, ಈಗ ಗೋಮೂತ್ರದ ಉದಾಹರಣೆ ಮೂಲಕ ಅವರನ್ನು ಅವಮಾನಿಸಿದೆ’ ಎಂದಿದ್ದಾರೆ.</p>.<div><blockquote>ಡಿಎಂಕೆಯ ದುರಾಡಳಿತದಿಂದ ಚೆನ್ನೈ ಮುಳುಗುತ್ತಿದೆ. ಸಂಸತ್ತಿನಲ್ಲಿ ಅವರ ಚರ್ಚೆಗಳಿಗೂ ಅದೇ ಗತಿಯಾಗುತ್ತಿದೆ. ಡಿಎಂಕೆಯ ಈ ಅಸೂಕ್ಷ್ಮ ಹೇಳಿಕೆಯನ್ನು ಬಿಜೆಪಿ ಖಂಡಿಸುತ್ತದೆ.</blockquote><span class="attribution"> ಕೆ. ಅಣ್ಣಾಮಲೈ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ</span></div>.<p>‘ದೇಶದ ಹೃದಯಭಾಗದ ಭಾರತೀಯರನ್ನು ಡಿಎಂಕೆ ಅವಮಾನಿಸಿದ್ದನ್ನು ರಾಹುಲ್ ಗಾಂಧಿ ಒಪ್ಪಿಕೊಳ್ಳುತ್ತಾರಾ? ಭಾರತೀಯರನ್ನು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಇನ್ನೆಷ್ಟು ಕಾಲ ಅವಮಾನಿಸುತ್ತವೆ?’ ಎಂದು ಕರ್ನಾಟಕದ ಬಿಜೆಪಿ ನಾಯಕ ಸಿ.ಟಿ. ರವಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.</p>.<p>‘ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು’ ಎಂದು ಡಿಎಂಕೆ ನಾಯಕ, ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪಕ್ಷದ ಇತರ ಸದಸ್ಯರೂ ಧ್ವನಿಗೂಡಿಸಿದ್ದರು. ಕಳೆದ ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್ ವಿರುದ್ಧ ಈ ಹೇಳಿಕೆಯನ್ನು ಅಸ್ತ್ರವನ್ನಾಗಿ ಬಳಸಿಕೊಂಡಿತ್ತು. ಅದಾದ ಬೆನ್ನಲ್ಲೇ ಡಿಎಂಕೆ ಮತ್ತೊಂದು ವಿವಾದ ಹುಟ್ಟುಹಾಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>