<p>ಮುಂಬೈ: ನಕಲಿ ಪ್ರಮಾಣಪತ್ರದೊಂದಿಗೆ ನಕಲಿ ಕಲಾಕೃತಿಗಳನ್ನು ಮಾರಾಟ ಮಾಡುತ್ತಿದ್ದ ಅಕ್ರಮ ಜಾಲದ ವಿರುದ್ಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ಇ.ಡಿ) ಇಲ್ಲಿಯ ಆರು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. </p>.<p>ಹಣ ಅಕ್ರಮ ವರ್ಗಾವಣೆ ತಡೆ (ಪಿಎಂಎಲ್ಎ) ಅಡಿ ಮಾರ್ಚ್ 13ರಂದು ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ಡಿಜಿಟಲ್ ಉಪಕರಣಗಳು, ದಾಖಲೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ದಕ್ಷಿಣ ಮುಂಬೈನ ಪ್ರಮುಖ ಕಲಾ ಗ್ಯಾಲರಿ, ಕಾರ್ಪೊರೆಟ್ ವಕೀಲರು, ಚಿನ್ನದ ಗಟ್ಟಿ ಮಾರಾಟಗಾರರು ಮತ್ತು ಇತರರು ಈ ಅಕ್ರಮ ವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. </p>.<p>ಮಾರಾಟ ಮಾಡುವ ಕಲಾಕೃತಿಗಳಿಗೆ ನಕಲಿ ಪ್ರಮಾಣೀಕರಣ, ಅದರ ‘ಮೂಲ’ ಕುರಿತ ಪ್ರಮಾಣಪತ್ರವನ್ನು ಅವರೇ ಖುದ್ದು ತಯಾರಿಸುತ್ತಿದ್ದಾರೆ. ನಗದು ಮುಖಾಂತರ ವ್ಯವಹಾರ ಮಾಡುತ್ತಿದ್ದಾರೆ ಎಂದು ಇ.ಡಿ. ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p>.<p>ರಾಜೇಶ್ ರಾಜ್ಪಾಲ್ ಮತ್ತು ವಿಶ್ವಾಂಗ್ ದೇಸಾಯಿ ಎಂಬುವವರು ₹17.9 ಕೋಟಿ ಪಡೆದು ನಕಲಿ ಕಲಾಕೃತಿಗಳು ಮತ್ತು ಪ್ರಮಾಣಪತ್ರಗಳನ್ನು ನೀಡಿ ವಂಚನೆ ಎಸಗಿರುವ ಕುರಿತು ಪುನೀತ್ ಭಾಟಿಯಾ ಎಂಬುವವರು ಮುಂಬೈನ ತಾರ್ದೇವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಆಧರಿಸಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಹಲವು ಸೆಕ್ಷನ್ಗಳ ಅಡಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಈ ಎಫ್ಐಆರ್ ಆಧರಿಸಿ ಇ.ಡಿ ತನಿಖೆ ನಡೆಸುತ್ತಿದೆ.</p>.<p>ದೇಶದ ಪ್ರಖ್ಯಾತ ಕಲಾವಿದರಾದ ಜಾಮಿನಿ ರಾಯ್, ಎಂ.ಎಫ್. ಹುಸೇನ್, ಎಫ್.ಎನ್. ಸೌಜಾ, ಜಹಾಂಗೀರ್ ಸಬಾವಾಲಾ, ಎಸ್.ಎಚ್. ರಾಜಾ, ಎನ್.ಎಸ್. ಬೇಂದ್ರೆ, ರಾಮ್ಕುಮಾರ್ ಮುಂತಾದವರ ಕಲಾಕೃತಿಗಳನ್ನೂ ಇವರು ನಕಲು ಮಾಡಿದ್ದಾರೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುಂಬೈ: ನಕಲಿ ಪ್ರಮಾಣಪತ್ರದೊಂದಿಗೆ ನಕಲಿ ಕಲಾಕೃತಿಗಳನ್ನು ಮಾರಾಟ ಮಾಡುತ್ತಿದ್ದ ಅಕ್ರಮ ಜಾಲದ ವಿರುದ್ಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ಇ.ಡಿ) ಇಲ್ಲಿಯ ಆರು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. </p>.<p>ಹಣ ಅಕ್ರಮ ವರ್ಗಾವಣೆ ತಡೆ (ಪಿಎಂಎಲ್ಎ) ಅಡಿ ಮಾರ್ಚ್ 13ರಂದು ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ಡಿಜಿಟಲ್ ಉಪಕರಣಗಳು, ದಾಖಲೆಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ದಕ್ಷಿಣ ಮುಂಬೈನ ಪ್ರಮುಖ ಕಲಾ ಗ್ಯಾಲರಿ, ಕಾರ್ಪೊರೆಟ್ ವಕೀಲರು, ಚಿನ್ನದ ಗಟ್ಟಿ ಮಾರಾಟಗಾರರು ಮತ್ತು ಇತರರು ಈ ಅಕ್ರಮ ವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. </p>.<p>ಮಾರಾಟ ಮಾಡುವ ಕಲಾಕೃತಿಗಳಿಗೆ ನಕಲಿ ಪ್ರಮಾಣೀಕರಣ, ಅದರ ‘ಮೂಲ’ ಕುರಿತ ಪ್ರಮಾಣಪತ್ರವನ್ನು ಅವರೇ ಖುದ್ದು ತಯಾರಿಸುತ್ತಿದ್ದಾರೆ. ನಗದು ಮುಖಾಂತರ ವ್ಯವಹಾರ ಮಾಡುತ್ತಿದ್ದಾರೆ ಎಂದು ಇ.ಡಿ. ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p>.<p>ರಾಜೇಶ್ ರಾಜ್ಪಾಲ್ ಮತ್ತು ವಿಶ್ವಾಂಗ್ ದೇಸಾಯಿ ಎಂಬುವವರು ₹17.9 ಕೋಟಿ ಪಡೆದು ನಕಲಿ ಕಲಾಕೃತಿಗಳು ಮತ್ತು ಪ್ರಮಾಣಪತ್ರಗಳನ್ನು ನೀಡಿ ವಂಚನೆ ಎಸಗಿರುವ ಕುರಿತು ಪುನೀತ್ ಭಾಟಿಯಾ ಎಂಬುವವರು ಮುಂಬೈನ ತಾರ್ದೇವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಆಧರಿಸಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಹಲವು ಸೆಕ್ಷನ್ಗಳ ಅಡಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಈ ಎಫ್ಐಆರ್ ಆಧರಿಸಿ ಇ.ಡಿ ತನಿಖೆ ನಡೆಸುತ್ತಿದೆ.</p>.<p>ದೇಶದ ಪ್ರಖ್ಯಾತ ಕಲಾವಿದರಾದ ಜಾಮಿನಿ ರಾಯ್, ಎಂ.ಎಫ್. ಹುಸೇನ್, ಎಫ್.ಎನ್. ಸೌಜಾ, ಜಹಾಂಗೀರ್ ಸಬಾವಾಲಾ, ಎಸ್.ಎಚ್. ರಾಜಾ, ಎನ್.ಎಸ್. ಬೇಂದ್ರೆ, ರಾಮ್ಕುಮಾರ್ ಮುಂತಾದವರ ಕಲಾಕೃತಿಗಳನ್ನೂ ಇವರು ನಕಲು ಮಾಡಿದ್ದಾರೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>