<p><strong>ಮುಂಬೈ: </strong>ಬಿಜೆಪಿಗೆ ಮರಳಲಿದ್ದಾರೆ ಎನ್ನಲಾಗಿದ್ದ ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಏಕನಾಥ ಖಡ್ಸೆ, ಡಿಸಿಎಂ ದೇವೇಂದ್ರ ಫಡಣವೀಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ರಾಜ್ಯಪಾಲರಾಗಿ ನೇಮಿಸುವ ಭರವಸೆಯನ್ನು ನನಗೆ ನೀಡಲಾಗಿತ್ತು’ ಎಂದೂ ಹೇಳಿದ್ದಾರೆ. </p> <p>‘ಆದರೆ, ಈಗ ನಡೆಯುತ್ತಿರುವ ಗಣೇಶೋತ್ಸವ ಆಚರಣೆಗಳು ಮುಗಿದ ತರುವಾಯ ಪಕ್ಷ ಈ ವಿಷಯವನ್ನು ಗಮನಿಸಲಿದೆ’ ಎಂದು ಫಡಣವೀಸ್ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.</p> <p>ನಾಗ್ಪುರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಡಿಸಿಎಂ, ‘ಪಕ್ಷ ಕೈಗೊಳ್ಳುವ ತೀರ್ಮಾನವನ್ನು ಸ್ವಾಗತಿಸುತ್ತೇವೆ. ಗಣೇಶೋತ್ಸವ ಆಚರಣೆ ಬಳಿಕವೇ ಈ ಬಗ್ಗೆ ತೀರ್ಮಾನಿಸಲಾಗುತ್ತದೆ’ ಎಂದು ಹೇಳಿದರು. </p><p>72 ವರ್ಷ ವಯಸ್ಸಿನ ಖಡ್ಸೆ, ಒಬಿಸಿ ವರ್ಗದ ಲೆವಾ–ಪಾಟೀಲ ಸಮುದಾಯದವರು. ಉತ್ತರ ಮಹಾರಾಷ್ಟ್ರ–ಖಂಡೇಶ್ ವಲಯದಲ್ಲಿ ತಮ್ಮದೇ ಪ್ರಭಾವ ಹೊಂದಿದ್ದಾರೆ.</p><p>ಫಡಣವೀಸ್, ಮುಖಂಡ ಗಿರೀಶ್ ಮಹಾಜನ್ ಜೊತೆಗಿನ ವೈಮನಸ್ಯದಿಂದಾಗಿ ಖಡ್ಸೆ ಅವರು, ಅಕ್ಟೋಬರ್ 2020ರಲ್ಲಿ ಬಿಜೆಪಿ ತೊರೆದಿದ್ದು, ಶರದ್ ಪವಾರ್ ನೇತೃತ್ವದ ಎನ್ಸಿಪಿ ಸೇರಿದ್ದರು.</p><p>ಅನುಭವವನ್ನು ಆಧರಿಸಿ ಎನ್ಸಿಪಿ ಅವರನ್ನು ಪರಿಷತ್ ಸದಸ್ಯರಾಗಿಸಿತ್ತು. ಸದ್ಯ ಅವರು, ಎನ್ಸಿಪಿ ಶರದ್ ಬಣದ ಮುಖ್ಯಸ್ಥರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ: </strong>ಬಿಜೆಪಿಗೆ ಮರಳಲಿದ್ದಾರೆ ಎನ್ನಲಾಗಿದ್ದ ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಏಕನಾಥ ಖಡ್ಸೆ, ಡಿಸಿಎಂ ದೇವೇಂದ್ರ ಫಡಣವೀಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ರಾಜ್ಯಪಾಲರಾಗಿ ನೇಮಿಸುವ ಭರವಸೆಯನ್ನು ನನಗೆ ನೀಡಲಾಗಿತ್ತು’ ಎಂದೂ ಹೇಳಿದ್ದಾರೆ. </p> <p>‘ಆದರೆ, ಈಗ ನಡೆಯುತ್ತಿರುವ ಗಣೇಶೋತ್ಸವ ಆಚರಣೆಗಳು ಮುಗಿದ ತರುವಾಯ ಪಕ್ಷ ಈ ವಿಷಯವನ್ನು ಗಮನಿಸಲಿದೆ’ ಎಂದು ಫಡಣವೀಸ್ ಈ ಕುರಿತು ಪ್ರತಿಕ್ರಿಯಿಸಿದ್ದಾರೆ.</p> <p>ನಾಗ್ಪುರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಡಿಸಿಎಂ, ‘ಪಕ್ಷ ಕೈಗೊಳ್ಳುವ ತೀರ್ಮಾನವನ್ನು ಸ್ವಾಗತಿಸುತ್ತೇವೆ. ಗಣೇಶೋತ್ಸವ ಆಚರಣೆ ಬಳಿಕವೇ ಈ ಬಗ್ಗೆ ತೀರ್ಮಾನಿಸಲಾಗುತ್ತದೆ’ ಎಂದು ಹೇಳಿದರು. </p><p>72 ವರ್ಷ ವಯಸ್ಸಿನ ಖಡ್ಸೆ, ಒಬಿಸಿ ವರ್ಗದ ಲೆವಾ–ಪಾಟೀಲ ಸಮುದಾಯದವರು. ಉತ್ತರ ಮಹಾರಾಷ್ಟ್ರ–ಖಂಡೇಶ್ ವಲಯದಲ್ಲಿ ತಮ್ಮದೇ ಪ್ರಭಾವ ಹೊಂದಿದ್ದಾರೆ.</p><p>ಫಡಣವೀಸ್, ಮುಖಂಡ ಗಿರೀಶ್ ಮಹಾಜನ್ ಜೊತೆಗಿನ ವೈಮನಸ್ಯದಿಂದಾಗಿ ಖಡ್ಸೆ ಅವರು, ಅಕ್ಟೋಬರ್ 2020ರಲ್ಲಿ ಬಿಜೆಪಿ ತೊರೆದಿದ್ದು, ಶರದ್ ಪವಾರ್ ನೇತೃತ್ವದ ಎನ್ಸಿಪಿ ಸೇರಿದ್ದರು.</p><p>ಅನುಭವವನ್ನು ಆಧರಿಸಿ ಎನ್ಸಿಪಿ ಅವರನ್ನು ಪರಿಷತ್ ಸದಸ್ಯರಾಗಿಸಿತ್ತು. ಸದ್ಯ ಅವರು, ಎನ್ಸಿಪಿ ಶರದ್ ಬಣದ ಮುಖ್ಯಸ್ಥರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>