<p><strong>ಮುಂಬೈ</strong>: ಕಾರ್ಗಿಲ್ ವಿಜಯ್ ದಿನದ 25 ನೇ ವಾರ್ಷಿಕೋತ್ಸವದ ಅಂಗವಾಗಿ ನಿವೃತ್ತ ಮಹಿಳಾ ಸೇನಾಧಿಕಾರಿಯೊಬ್ಬರು ಶ್ರೀನಗರದಿಂದ ದ್ರಾಸ್ಗೆ 160 ಕಿ.ಮೀ. ಓಟವನ್ನು ಪೂರ್ಣಗೊಳಿಸಿದ್ದಾರೆ.</p><p>ಲೆಫ್ಟಿನೆಂಟ್ ಕರ್ನಲ್ ಬರ್ಶಾ ರೈ (ನಿವೃತ್ತ) ಅವರು ದಿನಕ್ಕೆ ಸರಾಸರಿ 40 ಕಿ.ಮೀ. ಓಡುವ ಮೂಲಕ ನಾಲ್ಕು ದಿನದಲ್ಲಿ ಈ ಓಟವನ್ನು ಪೂರ್ಣಗೊಳಿಸಿದ್ದು, ‘ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ನಮ್ಮ ವೀರ ಹೃದಯಗಳನ್ನು ಗೌರವಿಸಲು ಈ ಓಟವನ್ನು ಮಾಡಿದ್ದೇನೆ’ ಎಂದು ಪಿಟಿಐಗೆ ತಿಳಿಸಿದ್ದಾರೆ. ಬರ್ಶಾ ಅವರ ಪತಿ ಸಹ ಕಾಶ್ಮೀರದಲ್ಲಿ ಸೇನಾ ಅಧಿಕಾರಿಯಾಗಿದ್ದು, ಶ್ರೀನಗರದಿಂದ ದ್ರಾಸ್ ಸೆಕ್ಟರ್ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಓಟವನ್ನು ಕೈಗೊಂಡಿದ್ದಾರೆ. </p><p>ಬರ್ಶಾ ಅವರೊಂದಿಗೆ ಚಿನಾರ್ ವಾರಿಯರ್ಸ್ ಮ್ಯಾರಥಾನ್ ತಂಡವೂ ಓಟದಲ್ಲಿ ಪಾಲ್ಗೊಂಡಿತ್ತು. ಓಟದ ನಂತರ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.</p><p>ಈ ಕುರಿತು ಮಾತನಾಡಿದ ಬರ್ಶಾ ಅವರು, ‘ಕಾರ್ಗಿಲ್ ಯುದ್ಧ ಪ್ರಾರಂಭವಾದಾಗ ನಾನು 7 ನೇ ತರಗತಿಯಲ್ಲಿದ್ದೆ. 10 ವರ್ಷಗಳ ಹಿಂದೆ ನಿವೃತ್ತರಾದ ನನ್ನ ತಂದೆ ಕರ್ನಲ್ ಕೇಶಬ್ ರೈ ಅವರು ತಮ್ಮ ಸಂಪೂರ್ಣ ಘಟಕದೊಂದಿಗೆ ರಾತ್ರೋರಾತ್ರಿ ಗಡಿಗೆ ತೆರಳಿದ್ದರು. ನಮ್ಮಂತಹ ಸೇನಾ ಕುಟುಂಬಗಳಿಗೆ ಆಗ ಅನಿಶ್ಚಿತತೆ, ಆರ್ಥಿಕ ನಷ್ಟ, ಹತಾಶೆಯ ದಿನಗಳು ಎದುರಾಗಿದ್ದವು. ಈ ಓಟ ನನ್ನ ವೈಯಕ್ತಿಕಕ್ಕಾಗಿ ಅಲ್ಲ. ಕಾರ್ಗಿಲ್ ಯುದ್ಧದ ಸಮಯದಲ್ಲಿ ವೀರಾವೇಶದಿಂದ ಹೋರಾಡಿದ ಸೈನಿಕರ ಅದಮ್ಯ ಚೇತನಕ್ಕೆ ಸಲ್ಲಿಸಿದ ಗೌರವವಾಗಿದೆ’ ಎಂದಿದ್ದಾರೆ. </p><p>ಲೆಫ್ಟಿನೆಂಟ್ ಕರ್ನಲ್ ಬರ್ಶಾ ರೈ ಅವರು ಅವರ ಕುಟುಂಬದ ನಾಲ್ಕನೇ ತಲೆಮಾರಿನ ಸೇನಾ ಅಧಿಕಾರಿ. ಬರ್ಶಾ ಅವರ ಮುತ್ತಜ್ಜ ಕೂಡ ಮಿಲಿಟರಿ ಕಾರ್ಯನಿರ್ವಹಿಸಿದ್ದರು ಎಂದು ವರದಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಕಾರ್ಗಿಲ್ ವಿಜಯ್ ದಿನದ 25 ನೇ ವಾರ್ಷಿಕೋತ್ಸವದ ಅಂಗವಾಗಿ ನಿವೃತ್ತ ಮಹಿಳಾ ಸೇನಾಧಿಕಾರಿಯೊಬ್ಬರು ಶ್ರೀನಗರದಿಂದ ದ್ರಾಸ್ಗೆ 160 ಕಿ.ಮೀ. ಓಟವನ್ನು ಪೂರ್ಣಗೊಳಿಸಿದ್ದಾರೆ.</p><p>ಲೆಫ್ಟಿನೆಂಟ್ ಕರ್ನಲ್ ಬರ್ಶಾ ರೈ (ನಿವೃತ್ತ) ಅವರು ದಿನಕ್ಕೆ ಸರಾಸರಿ 40 ಕಿ.ಮೀ. ಓಡುವ ಮೂಲಕ ನಾಲ್ಕು ದಿನದಲ್ಲಿ ಈ ಓಟವನ್ನು ಪೂರ್ಣಗೊಳಿಸಿದ್ದು, ‘ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ನಮ್ಮ ವೀರ ಹೃದಯಗಳನ್ನು ಗೌರವಿಸಲು ಈ ಓಟವನ್ನು ಮಾಡಿದ್ದೇನೆ’ ಎಂದು ಪಿಟಿಐಗೆ ತಿಳಿಸಿದ್ದಾರೆ. ಬರ್ಶಾ ಅವರ ಪತಿ ಸಹ ಕಾಶ್ಮೀರದಲ್ಲಿ ಸೇನಾ ಅಧಿಕಾರಿಯಾಗಿದ್ದು, ಶ್ರೀನಗರದಿಂದ ದ್ರಾಸ್ ಸೆಕ್ಟರ್ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಓಟವನ್ನು ಕೈಗೊಂಡಿದ್ದಾರೆ. </p><p>ಬರ್ಶಾ ಅವರೊಂದಿಗೆ ಚಿನಾರ್ ವಾರಿಯರ್ಸ್ ಮ್ಯಾರಥಾನ್ ತಂಡವೂ ಓಟದಲ್ಲಿ ಪಾಲ್ಗೊಂಡಿತ್ತು. ಓಟದ ನಂತರ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.</p><p>ಈ ಕುರಿತು ಮಾತನಾಡಿದ ಬರ್ಶಾ ಅವರು, ‘ಕಾರ್ಗಿಲ್ ಯುದ್ಧ ಪ್ರಾರಂಭವಾದಾಗ ನಾನು 7 ನೇ ತರಗತಿಯಲ್ಲಿದ್ದೆ. 10 ವರ್ಷಗಳ ಹಿಂದೆ ನಿವೃತ್ತರಾದ ನನ್ನ ತಂದೆ ಕರ್ನಲ್ ಕೇಶಬ್ ರೈ ಅವರು ತಮ್ಮ ಸಂಪೂರ್ಣ ಘಟಕದೊಂದಿಗೆ ರಾತ್ರೋರಾತ್ರಿ ಗಡಿಗೆ ತೆರಳಿದ್ದರು. ನಮ್ಮಂತಹ ಸೇನಾ ಕುಟುಂಬಗಳಿಗೆ ಆಗ ಅನಿಶ್ಚಿತತೆ, ಆರ್ಥಿಕ ನಷ್ಟ, ಹತಾಶೆಯ ದಿನಗಳು ಎದುರಾಗಿದ್ದವು. ಈ ಓಟ ನನ್ನ ವೈಯಕ್ತಿಕಕ್ಕಾಗಿ ಅಲ್ಲ. ಕಾರ್ಗಿಲ್ ಯುದ್ಧದ ಸಮಯದಲ್ಲಿ ವೀರಾವೇಶದಿಂದ ಹೋರಾಡಿದ ಸೈನಿಕರ ಅದಮ್ಯ ಚೇತನಕ್ಕೆ ಸಲ್ಲಿಸಿದ ಗೌರವವಾಗಿದೆ’ ಎಂದಿದ್ದಾರೆ. </p><p>ಲೆಫ್ಟಿನೆಂಟ್ ಕರ್ನಲ್ ಬರ್ಶಾ ರೈ ಅವರು ಅವರ ಕುಟುಂಬದ ನಾಲ್ಕನೇ ತಲೆಮಾರಿನ ಸೇನಾ ಅಧಿಕಾರಿ. ಬರ್ಶಾ ಅವರ ಮುತ್ತಜ್ಜ ಕೂಡ ಮಿಲಿಟರಿ ಕಾರ್ಯನಿರ್ವಹಿಸಿದ್ದರು ಎಂದು ವರದಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>