ಬಾರ್ಗೇನ್ ಸರ್ಕಲ್ನಲ್ಲಿರುವ 8.5 ಎಕರೆ ಜಮೀನಿನ ಯಾವುದೇ ದಾಖಲೆಗಳಲ್ಲಿ ತನ್ನ ಹೆಸರಿಲ್ಲ. ಜಮೀನು ತನಗೆ ಸೇರಿದ್ದು ಎಂದು ಹೇಳಿರುವ ಕೆಲವರ ಹೇಳಿಕೆಗಳನ್ನು ಮಾತ್ರ ಇ.ಡಿ ಪರಿಗಣಿಸಿದೆ. ಆದರೆ ಅಂತಹ ಹೇಳಿಕೆಗಳನ್ನು ಪುಷ್ಟೀಕರಿಸಲು ಯಾವುದೇ ದಾಖಲೆಗಳಿಲ್ಲ ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಸುಮಾರು ₹600 ಕೋಟಿ ಮೊತ್ತದ ಭೂ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇ.ಡಿ ಹೇಮಂತ್ ಅವರನ್ನು ಜನವರಿ 31ರಂದು ಬಂಧಿಸಿತ್ತು. ಅದಕ್ಕೂ ಮುನ್ನ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು.
ಸದ್ಯ ಅವರು ರಾಂಚಿಯ ಹೊತ್ವಾರ್ನಲ್ಲಿರುವ ಬಿರ್ಸಾ ಮುಂಡಾ ಜೈಲಿನಲ್ಲಿದ್ದಾರೆ.