<p><strong>ಮುಂಬೈ</strong>: ಕಾಯ್ದೆ ರೂಪಿಸುವಾಗ ಮತ್ತು ಭ್ರಷ್ಟಾಚಾರದ ವಿಚಾರದಲ್ಲಿ ಶಿಷ್ಟಾಚಾರ ಪಾಲನೆ ಮುಖ್ಯ. ಆದರೆ, ಶಿಕ್ಷೆಗೆ ಗುರಿಯಾಗಿರುವ ಭ್ರಷ್ಟರನ್ನು ವೈಭವೀಕರಿಸುತ್ತಿರುವುದು ಗಂಭೀರ ವಿಷಯ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಕಳವಳ ವ್ಯಕ್ತಪಡಿಸಿದರು.</p>.<p>ಇಲ್ಲಿನ ವಿಧಾನಸಭೆಯಲ್ಲಿ ನಡೆದ ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಸಮಾವೇಶವನ್ನು ಉದ್ದೇಶಿಸಿ ವರ್ಚುವಲ್ ಆಗಿ ಅವರು ಮಾತನಾಡಿದರು.</p>.<p>‘ಈ ಹಿಂದೆ, ಶಾಸನಸಭೆ ಸದಸ್ಯರೊಬ್ಬರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದ ಸಂದರ್ಭಗಳಲ್ಲಿ ಅವರನ್ನು ಸಾರ್ವಜನಿಕ ಜೀವನದಿಂದ ದೂರ ಇಡಲಾಗುತ್ತಿತ್ತು. ಆದರೆ, ಈಗ ಶಿಕ್ಷೆಗೆ ಗುರಿಯಾಗಿರುವ ಭ್ರಷ್ಟರನ್ನು ಸಾರ್ವಜನಿಕವಾಗಿ ವೈಭವೀಕರಿಸುವುದನ್ನು ನೋಡುತ್ತಿದ್ದೇವೆ. ಇದು ಕಾರ್ಯಾಂಗ, ನ್ಯಾಯಾಂಗ ಮತ್ತು ಸಂವಿಧಾನಕ್ಕೆ ಧಕ್ಕೆ ತರುವಂಥದು’ ಎಂದು ಮೋದಿ ಹೇಳಿದರು.</p>.<p>‘ಸದನಗಳಲ್ಲಿ ಚುನಾಯಿತ ಪ್ರತಿನಿಧಿಗಳ ನಡವಳಿಕೆ ಹಾಗೂ ನಡೆಯುವ ಚರ್ಚೆಗಳು ಫಲಪ್ರದವಾಗುವಂತಿರಬೇಕು. ಹೀಗಾಗಿ, ಈ ಸಮಾವೇಶದಲ್ಲಿ ಹೊರಹೊಮ್ಮುವ ಸಲಹೆ–ಸೂಚನೆಗಳು ಶಾಸನಸಭೆಗಳ ಅಧಿವೇಶನದ ಉತ್ಪಾದಕತೆ ಹೆಚ್ಚುವಂತೆ ಮಾಡಲಿ’ ಎಂದು ಆಶಿಸಿದರು.</p>.<p>‘ಸದನದ ವರ್ಚಸ್ಸಿನ ವಿಚಾರದಲ್ಲಿ ಚುನಾಯಿತ ಪ್ರತಿನಿಧಿಗಳ ವರ್ತನೆ ನಿರ್ಣಾಯಕವಾಗಲಿದೆ’ ಎಂದೂ ಅವರು ಹೇಳಿದರು.</p>.<p>‘ತಮ್ಮ ಪಕ್ಷದ ಸದಸ್ಯರು ತೋರುವ ಆಕ್ಷೇಪಾರ್ಹ ವರ್ತನೆಯನ್ನು ಖಂಡಿಸುವ ಬದಲು ಪಕ್ಷಗಳು ಅವರನ್ನೇ ಬೆಂಬಲಿಸುವುದು ವಿಷಾದಕರ. ಇಂತಹ ನಡೆಗಳು ವಿಧಾನಸಭೆಗಳಿಗೆ ಅಥವಾ ಸಂಸತ್ಗೆ ತಕ್ಕುದಲ್ಲ’ ಎಂದು ಹೇಳಿದರು.</p>.<p>‘ಅನಗತ್ಯ ಕಾಯ್ದೆಗಳು ಹಾಗೂ ಜನಸಾಮಾನ್ಯರ ಮೇಲೆ ಅವುಗಳಿಂದಾಗುತ್ತಿರುವ ಪರಿಣಾಮಗಳ ಬಗ್ಗೆ ಪೀಠಾಸೀನಾಧಿಕಾರಿಗಳು ಗಮನ ಹರಿಸಬೇಕು. ಅನಗತ್ಯ ಕಾಯ್ದೆಗಳನ್ನು ರದ್ದು ಮಾಡಿದಲ್ಲಿ ಅದರಿಂದಾಗುವ ಪರಿಣಾಮ ಅಗಾಧ’ ಎಂದರು.</p>.<p>Quote - ನೀತಿ ನಿರೂಪಣೆ ಪ್ರಕ್ರಿಯೆಯಲ್ಲಿ ಮಹಿಳೆಯರು ಮತ್ತು ಯುವಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಬೇಕು. ಅವರಿಗೆ ಹೆಚ್ಚು ಅವಕಾಶಗಳನ್ನು ಕಲ್ಪಿಸಬೇಕು ನರೇಂದ್ರ ಮೋದಿ ಪ್ರಧಾನಿ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಕಾಯ್ದೆ ರೂಪಿಸುವಾಗ ಮತ್ತು ಭ್ರಷ್ಟಾಚಾರದ ವಿಚಾರದಲ್ಲಿ ಶಿಷ್ಟಾಚಾರ ಪಾಲನೆ ಮುಖ್ಯ. ಆದರೆ, ಶಿಕ್ಷೆಗೆ ಗುರಿಯಾಗಿರುವ ಭ್ರಷ್ಟರನ್ನು ವೈಭವೀಕರಿಸುತ್ತಿರುವುದು ಗಂಭೀರ ವಿಷಯ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಕಳವಳ ವ್ಯಕ್ತಪಡಿಸಿದರು.</p>.<p>ಇಲ್ಲಿನ ವಿಧಾನಸಭೆಯಲ್ಲಿ ನಡೆದ ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಸಮಾವೇಶವನ್ನು ಉದ್ದೇಶಿಸಿ ವರ್ಚುವಲ್ ಆಗಿ ಅವರು ಮಾತನಾಡಿದರು.</p>.<p>‘ಈ ಹಿಂದೆ, ಶಾಸನಸಭೆ ಸದಸ್ಯರೊಬ್ಬರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದ ಸಂದರ್ಭಗಳಲ್ಲಿ ಅವರನ್ನು ಸಾರ್ವಜನಿಕ ಜೀವನದಿಂದ ದೂರ ಇಡಲಾಗುತ್ತಿತ್ತು. ಆದರೆ, ಈಗ ಶಿಕ್ಷೆಗೆ ಗುರಿಯಾಗಿರುವ ಭ್ರಷ್ಟರನ್ನು ಸಾರ್ವಜನಿಕವಾಗಿ ವೈಭವೀಕರಿಸುವುದನ್ನು ನೋಡುತ್ತಿದ್ದೇವೆ. ಇದು ಕಾರ್ಯಾಂಗ, ನ್ಯಾಯಾಂಗ ಮತ್ತು ಸಂವಿಧಾನಕ್ಕೆ ಧಕ್ಕೆ ತರುವಂಥದು’ ಎಂದು ಮೋದಿ ಹೇಳಿದರು.</p>.<p>‘ಸದನಗಳಲ್ಲಿ ಚುನಾಯಿತ ಪ್ರತಿನಿಧಿಗಳ ನಡವಳಿಕೆ ಹಾಗೂ ನಡೆಯುವ ಚರ್ಚೆಗಳು ಫಲಪ್ರದವಾಗುವಂತಿರಬೇಕು. ಹೀಗಾಗಿ, ಈ ಸಮಾವೇಶದಲ್ಲಿ ಹೊರಹೊಮ್ಮುವ ಸಲಹೆ–ಸೂಚನೆಗಳು ಶಾಸನಸಭೆಗಳ ಅಧಿವೇಶನದ ಉತ್ಪಾದಕತೆ ಹೆಚ್ಚುವಂತೆ ಮಾಡಲಿ’ ಎಂದು ಆಶಿಸಿದರು.</p>.<p>‘ಸದನದ ವರ್ಚಸ್ಸಿನ ವಿಚಾರದಲ್ಲಿ ಚುನಾಯಿತ ಪ್ರತಿನಿಧಿಗಳ ವರ್ತನೆ ನಿರ್ಣಾಯಕವಾಗಲಿದೆ’ ಎಂದೂ ಅವರು ಹೇಳಿದರು.</p>.<p>‘ತಮ್ಮ ಪಕ್ಷದ ಸದಸ್ಯರು ತೋರುವ ಆಕ್ಷೇಪಾರ್ಹ ವರ್ತನೆಯನ್ನು ಖಂಡಿಸುವ ಬದಲು ಪಕ್ಷಗಳು ಅವರನ್ನೇ ಬೆಂಬಲಿಸುವುದು ವಿಷಾದಕರ. ಇಂತಹ ನಡೆಗಳು ವಿಧಾನಸಭೆಗಳಿಗೆ ಅಥವಾ ಸಂಸತ್ಗೆ ತಕ್ಕುದಲ್ಲ’ ಎಂದು ಹೇಳಿದರು.</p>.<p>‘ಅನಗತ್ಯ ಕಾಯ್ದೆಗಳು ಹಾಗೂ ಜನಸಾಮಾನ್ಯರ ಮೇಲೆ ಅವುಗಳಿಂದಾಗುತ್ತಿರುವ ಪರಿಣಾಮಗಳ ಬಗ್ಗೆ ಪೀಠಾಸೀನಾಧಿಕಾರಿಗಳು ಗಮನ ಹರಿಸಬೇಕು. ಅನಗತ್ಯ ಕಾಯ್ದೆಗಳನ್ನು ರದ್ದು ಮಾಡಿದಲ್ಲಿ ಅದರಿಂದಾಗುವ ಪರಿಣಾಮ ಅಗಾಧ’ ಎಂದರು.</p>.<p>Quote - ನೀತಿ ನಿರೂಪಣೆ ಪ್ರಕ್ರಿಯೆಯಲ್ಲಿ ಮಹಿಳೆಯರು ಮತ್ತು ಯುವಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಬೇಕು. ಅವರಿಗೆ ಹೆಚ್ಚು ಅವಕಾಶಗಳನ್ನು ಕಲ್ಪಿಸಬೇಕು ನರೇಂದ್ರ ಮೋದಿ ಪ್ರಧಾನಿ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>