<p><strong>ಚೆನ್ನೈ:</strong> ತಮಿಳುನಾಡಿನ ಕವಿ, ಸಂತ ತಿರುವಳ್ಳುವರ್ ಅವರು ಕೇಸರಿ ದಿರಿಸು ಹಾಗೂ ವಿಭೂತಿ ಧರಿಸಿರುವಂತಹ ಭಾವಚಿತ್ರವನ್ನು ಬಳಸುವ ಮೂಲಕ ರಾಜ್ಯಪಾಲ ಆರ್.ಎನ್.ರವಿ ಅವರು ಈಗ ವಿವಾದಕ್ಕೆ ನಾಂದಿ ಹಾಡಿದ್ದಾರೆ.</p>.<p>ರಾಜ್ಯದಲ್ಲಿ ಸಾಮಾನ್ಯವಾಗಿ ಜ. 16ರಂದು ‘ತಿರುವಳ್ಳುವರ್ ದಿನ’ ಆಚರಿಸಿದರೆ, ರಾಜಭವನದಲ್ಲಿ ಇದೇ ಮೊದಲ ಬಾರಿಗೆ ‘ವೈಕಾಸಿ ಅನುಶಂ’ ನಿಮಿತ್ತ ಶುಕ್ರವಾರ ಅವರ ಜನ್ಮದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.</p>.<p>ಈ ಸಂಬಂಧ ಸಿದ್ಧಪಡಿಸಿದ ಆಹ್ವಾನಪತ್ರಿಕೆಯಲ್ಲಿ ತಿರುವಳ್ಳುವರ್ ಅವರು ಕೇಸರಿ ದಿರಿಸು, ವಿಭೂತಿ ಧರಿಸಿರುವ ಚಿತ್ರ ಬಳಸಲಾಗಿತ್ತು. ತಮಿಳುನಾಡು ಸರ್ಕಾರ, ಕವಿಯು ಶ್ವೇತವರ್ಣದ ವಸ್ತ್ರ ಧರಿಸಿರುವಂತಹ ಚಿತ್ರ ಬಳಸಲಿದೆ.</p>.<p>ಬಿಜೆಪಿಯು ಮೊದಲ ಬಾರಿಗೆ ಕವಿಯು ಕೇಸರಿ ದಿರಿಸು ಧರಿಸಿದ್ದ ಚಿತ್ರವನ್ನು 2019ರಲ್ಲಿ ಬಳಸಿತ್ತು. ಆಗ ಸಮಾಜದ ವಿವಿಧ ಸ್ತರದಿಂದ ತೀವ್ರ ಟೀಕೆ, ಆಕ್ಷೇಪಗಳು ಕೇಳಿಬಂದಿದ್ದವು.</p>.<p>ರಾಜಭವನ ಮತ್ತು ಬಿಜೆಪಿಯ ಮೂಲಗಳ ಪ್ರಕಾರ, ದ್ರಾವಿಡ ಪಕ್ಷಗಳು ತಿರುವಳ್ಳುವರ್ ಅವರ ಜನ್ಮದಿನವನ್ನು ತಮಿಳು ಮಾಸಿಕ ‘ವೈಕಾಸಿ’ (ಮೇ ಮಧ್ಯದಿಂದ ಜೂನ್ ಮಧ್ಯ) ಬದಲಿಗೆ ತಾಯ್ ಮಾಸಿಕಕ್ಕೆ ಬದಲಿಸಿತ್ತು.</p>.<p>‘ಸಂಪ್ರದಾಯವನ್ನು ಸರಿಪಡಿಸುವುದರಲ್ಲಿ ತಪ್ಪೇನೂ ಇಲ್ಲ. ತಿರುವಳ್ಳುವರ್ ಅವರು ವೈಕಾಸಿ ಮಾಸದಲ್ಲಿ ಜನಿಸಿದ್ದರು. ಈ ಬಗ್ಗೆ ಯಾವುದೇ ಅನುಮಾನ ಬೇಡ. ಅವರು ಹಿಂದೂ ಸಂತರು. ಹೀಗಾಗಿ, ಅವರು ಕೇಸರಿ ದಿರಿಸಿನಲ್ಲಿ ಇರುವಂತೆ ಚಿತ್ರಿಸುವುದರಲ್ಲಿಯೂ ತಪ್ಪಿಲ್ಲ‘ ಎಂದು ಬಿಜೆಪಿ ನಾಯಕರೊಬ್ಬರು ಸಮರ್ಥಿಸಿಕೊಂಡರು.</p>.<p>ಶುಕ್ರವಾರ ತಿರುವಳ್ಳುವರ್ ಅವರ ಭಾವಚಿತ್ರಕ್ಕೆ ರಾಜ್ಯಪಾಲರು ಪುಷ್ಪನಮನ ಸಲ್ಲಿಸಿದರು. ಡಿಎಂಕೆ ಸರ್ಕಾರವು 1970ರಲ್ಲಿ ಮೊದಲಿಗೆ, ಕೆ.ಆರ್.ವೇಣುಗೋಪಾಲ ಶರ್ಮಾ ಅವರು ಚಿತ್ರಿಸಿದ್ದ ಕವಿ, ಸಂತ ತಿರುವಳ್ಳುವರ್ ಚಿತ್ರ ಪ್ರಕಟಿಸಿತ್ತು. ಆ ನಂತರ ತಿರುವಳ್ಳುವರ್ ಅವರ ದಿರಿಸಿನ ವರ್ಣವು ಚರ್ಚಾಸ್ಪದ ವಿಷಯವೇ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೆನ್ನೈ:</strong> ತಮಿಳುನಾಡಿನ ಕವಿ, ಸಂತ ತಿರುವಳ್ಳುವರ್ ಅವರು ಕೇಸರಿ ದಿರಿಸು ಹಾಗೂ ವಿಭೂತಿ ಧರಿಸಿರುವಂತಹ ಭಾವಚಿತ್ರವನ್ನು ಬಳಸುವ ಮೂಲಕ ರಾಜ್ಯಪಾಲ ಆರ್.ಎನ್.ರವಿ ಅವರು ಈಗ ವಿವಾದಕ್ಕೆ ನಾಂದಿ ಹಾಡಿದ್ದಾರೆ.</p>.<p>ರಾಜ್ಯದಲ್ಲಿ ಸಾಮಾನ್ಯವಾಗಿ ಜ. 16ರಂದು ‘ತಿರುವಳ್ಳುವರ್ ದಿನ’ ಆಚರಿಸಿದರೆ, ರಾಜಭವನದಲ್ಲಿ ಇದೇ ಮೊದಲ ಬಾರಿಗೆ ‘ವೈಕಾಸಿ ಅನುಶಂ’ ನಿಮಿತ್ತ ಶುಕ್ರವಾರ ಅವರ ಜನ್ಮದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.</p>.<p>ಈ ಸಂಬಂಧ ಸಿದ್ಧಪಡಿಸಿದ ಆಹ್ವಾನಪತ್ರಿಕೆಯಲ್ಲಿ ತಿರುವಳ್ಳುವರ್ ಅವರು ಕೇಸರಿ ದಿರಿಸು, ವಿಭೂತಿ ಧರಿಸಿರುವ ಚಿತ್ರ ಬಳಸಲಾಗಿತ್ತು. ತಮಿಳುನಾಡು ಸರ್ಕಾರ, ಕವಿಯು ಶ್ವೇತವರ್ಣದ ವಸ್ತ್ರ ಧರಿಸಿರುವಂತಹ ಚಿತ್ರ ಬಳಸಲಿದೆ.</p>.<p>ಬಿಜೆಪಿಯು ಮೊದಲ ಬಾರಿಗೆ ಕವಿಯು ಕೇಸರಿ ದಿರಿಸು ಧರಿಸಿದ್ದ ಚಿತ್ರವನ್ನು 2019ರಲ್ಲಿ ಬಳಸಿತ್ತು. ಆಗ ಸಮಾಜದ ವಿವಿಧ ಸ್ತರದಿಂದ ತೀವ್ರ ಟೀಕೆ, ಆಕ್ಷೇಪಗಳು ಕೇಳಿಬಂದಿದ್ದವು.</p>.<p>ರಾಜಭವನ ಮತ್ತು ಬಿಜೆಪಿಯ ಮೂಲಗಳ ಪ್ರಕಾರ, ದ್ರಾವಿಡ ಪಕ್ಷಗಳು ತಿರುವಳ್ಳುವರ್ ಅವರ ಜನ್ಮದಿನವನ್ನು ತಮಿಳು ಮಾಸಿಕ ‘ವೈಕಾಸಿ’ (ಮೇ ಮಧ್ಯದಿಂದ ಜೂನ್ ಮಧ್ಯ) ಬದಲಿಗೆ ತಾಯ್ ಮಾಸಿಕಕ್ಕೆ ಬದಲಿಸಿತ್ತು.</p>.<p>‘ಸಂಪ್ರದಾಯವನ್ನು ಸರಿಪಡಿಸುವುದರಲ್ಲಿ ತಪ್ಪೇನೂ ಇಲ್ಲ. ತಿರುವಳ್ಳುವರ್ ಅವರು ವೈಕಾಸಿ ಮಾಸದಲ್ಲಿ ಜನಿಸಿದ್ದರು. ಈ ಬಗ್ಗೆ ಯಾವುದೇ ಅನುಮಾನ ಬೇಡ. ಅವರು ಹಿಂದೂ ಸಂತರು. ಹೀಗಾಗಿ, ಅವರು ಕೇಸರಿ ದಿರಿಸಿನಲ್ಲಿ ಇರುವಂತೆ ಚಿತ್ರಿಸುವುದರಲ್ಲಿಯೂ ತಪ್ಪಿಲ್ಲ‘ ಎಂದು ಬಿಜೆಪಿ ನಾಯಕರೊಬ್ಬರು ಸಮರ್ಥಿಸಿಕೊಂಡರು.</p>.<p>ಶುಕ್ರವಾರ ತಿರುವಳ್ಳುವರ್ ಅವರ ಭಾವಚಿತ್ರಕ್ಕೆ ರಾಜ್ಯಪಾಲರು ಪುಷ್ಪನಮನ ಸಲ್ಲಿಸಿದರು. ಡಿಎಂಕೆ ಸರ್ಕಾರವು 1970ರಲ್ಲಿ ಮೊದಲಿಗೆ, ಕೆ.ಆರ್.ವೇಣುಗೋಪಾಲ ಶರ್ಮಾ ಅವರು ಚಿತ್ರಿಸಿದ್ದ ಕವಿ, ಸಂತ ತಿರುವಳ್ಳುವರ್ ಚಿತ್ರ ಪ್ರಕಟಿಸಿತ್ತು. ಆ ನಂತರ ತಿರುವಳ್ಳುವರ್ ಅವರ ದಿರಿಸಿನ ವರ್ಣವು ಚರ್ಚಾಸ್ಪದ ವಿಷಯವೇ ಆಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>