<p><strong>ಗುವಾಹಟಿ</strong>: ಕಾನ್ಸ್ಟೆಬಲ್ವೊಬ್ಬರ ಅಮಾನತು ಹಿಂಪಡೆಯಲು ನೀಡಿದ್ದ ಗಡುವು ಮುಗಿದ ಹಿನ್ನೆಲೆಯಲ್ಲಿ ಮಣಿಪುರದ ಚುರಚಾಂದಪುರ ಜಿಲ್ಲೆಯಲ್ಲಿನ ಸರ್ಕಾರಿ ಕಚೇರಿಗಳನ್ನು ಬಲವಂತದಿಂದ ಬಂದ್ ಮಾಡುವ ಕಾರ್ಯವನ್ನು ಸೋಮವಾರದಿಂದ ಆರಂಭಿಸಲು ಕುಕಿ ಸಂಘಟನೆಗಳ ವೇದಿಕೆ ಐಟಿಎಲ್ಎಫ್ ಮುಂದಾಗಿದೆ.</p>.<p>ಈ ಬಗ್ಗೆ ಐಟಿಎಲ್ಎಫ್ ಮುಖ್ಯಸ್ಥ ಪಗಿನ್ ಹಾವೋಕಿಪ್ ಮತ್ತು ಕಾರ್ಯದರ್ಶಿ ಹೂಮಾನ್ ತೊಂಬಿಂಗ್ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.</p>.<p>‘ಚುರಚಾಂದಪುರ ಜಿಲ್ಲೆಯಲ್ಲಿರುವ ಎಲ್ಲ ಸರ್ಕಾರಿ ಕಚೇರಿಗಳ ಸಿಬ್ಬಂದಿ ಸೋಮವಾರದಿಂದ ಕೆಲಸಕ್ಕೆ ಹಾಜರಾಗಬಾರದು. ಒಂದು ವೇಳೆ ಕಚೇರಿಗಳಲ್ಲಿ ಯಾರಾದರೂ ಕಾಣಿಸಿಕೊಂಡಲ್ಲಿ, ಮುಂದಾಗುವ ಯಾವುದೇ ಅಹಿತಕರ ಪರಿಣಾಮಕ್ಕೆ ಅವರನ್ನೇ ಹೊಣೆ ಮಾಡಲಾಗುವುದು’ ಎಂದು ಹೇಳಿಕೆಯಲ್ಲಿ ಅವರು ಎಚ್ಚರಿಸಿದ್ದಾರೆ.</p>.<p>ಕುಕಿ ಸಮುದಾಯಕ್ಕೆ ಸೇರಿದ ಕಾನ್ಸ್ಟೆಬಲ್ ಸಿಯಾಮ್ಲಾಲ್, ಶಸ್ತ್ರಧಾರಿ ಕುಕಿ ವ್ಯಕ್ತಿಯೊಂದಿಗೆ ಚಿತ್ರ ತೆಗೆಸಿಕೊಂಡಿದ್ದರು ಎನ್ನಲಾಗಿದ್ದು, ಈ ಕಾರಣಕ್ಕೆ ಸಿಯಾಮ್ಲಾಲ್ ಅವರನ್ನು ಅಮಾನತು ಮಾಡಲಾಗಿತ್ತು. </p>.<p>ಇದನ್ನು ಖಂಡಿಸಿ ಕುಕಿ ಸಮುದಾಯದವರು ಗುರುವಾರ ನಡೆಸಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತಲ್ಲದೇ, ಇಬ್ಬರ ಹತ್ಯೆಯಾಗಿತ್ತು. </p>.<p>ಕಾನ್ಸ್ಟೆಬಲ್ ಅಮಾನತು ಆದೇಶವನ್ನು ಹಿಂಪಡೆಯಬೇಕು ಹಾಗೂ ಹಿಂಸಾಚಾರ, ಇಬ್ಬರ ಹತ್ಯೆ ಹೊಣೆ ಹೊತ್ತು ಜಿಲ್ಲಾಧಿಕಾರಿ ಎಸ್.ಧರುಣಕುಮಾರ್ ಹಾಗೂ ಎಸ್ಪಿ ಶಿವಾನಂದ ಸುರ್ವೆ ಅವರು ಜಿಲ್ಲೆಯನ್ನು ತೊರೆಯುವಂತೆ ಹೇಳಿದ್ದ ಐಟಿಎಲ್ಎಫ್, 24 ಗಂಟೆಗಳ ಗಡುವು ನೀಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುವಾಹಟಿ</strong>: ಕಾನ್ಸ್ಟೆಬಲ್ವೊಬ್ಬರ ಅಮಾನತು ಹಿಂಪಡೆಯಲು ನೀಡಿದ್ದ ಗಡುವು ಮುಗಿದ ಹಿನ್ನೆಲೆಯಲ್ಲಿ ಮಣಿಪುರದ ಚುರಚಾಂದಪುರ ಜಿಲ್ಲೆಯಲ್ಲಿನ ಸರ್ಕಾರಿ ಕಚೇರಿಗಳನ್ನು ಬಲವಂತದಿಂದ ಬಂದ್ ಮಾಡುವ ಕಾರ್ಯವನ್ನು ಸೋಮವಾರದಿಂದ ಆರಂಭಿಸಲು ಕುಕಿ ಸಂಘಟನೆಗಳ ವೇದಿಕೆ ಐಟಿಎಲ್ಎಫ್ ಮುಂದಾಗಿದೆ.</p>.<p>ಈ ಬಗ್ಗೆ ಐಟಿಎಲ್ಎಫ್ ಮುಖ್ಯಸ್ಥ ಪಗಿನ್ ಹಾವೋಕಿಪ್ ಮತ್ತು ಕಾರ್ಯದರ್ಶಿ ಹೂಮಾನ್ ತೊಂಬಿಂಗ್ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.</p>.<p>‘ಚುರಚಾಂದಪುರ ಜಿಲ್ಲೆಯಲ್ಲಿರುವ ಎಲ್ಲ ಸರ್ಕಾರಿ ಕಚೇರಿಗಳ ಸಿಬ್ಬಂದಿ ಸೋಮವಾರದಿಂದ ಕೆಲಸಕ್ಕೆ ಹಾಜರಾಗಬಾರದು. ಒಂದು ವೇಳೆ ಕಚೇರಿಗಳಲ್ಲಿ ಯಾರಾದರೂ ಕಾಣಿಸಿಕೊಂಡಲ್ಲಿ, ಮುಂದಾಗುವ ಯಾವುದೇ ಅಹಿತಕರ ಪರಿಣಾಮಕ್ಕೆ ಅವರನ್ನೇ ಹೊಣೆ ಮಾಡಲಾಗುವುದು’ ಎಂದು ಹೇಳಿಕೆಯಲ್ಲಿ ಅವರು ಎಚ್ಚರಿಸಿದ್ದಾರೆ.</p>.<p>ಕುಕಿ ಸಮುದಾಯಕ್ಕೆ ಸೇರಿದ ಕಾನ್ಸ್ಟೆಬಲ್ ಸಿಯಾಮ್ಲಾಲ್, ಶಸ್ತ್ರಧಾರಿ ಕುಕಿ ವ್ಯಕ್ತಿಯೊಂದಿಗೆ ಚಿತ್ರ ತೆಗೆಸಿಕೊಂಡಿದ್ದರು ಎನ್ನಲಾಗಿದ್ದು, ಈ ಕಾರಣಕ್ಕೆ ಸಿಯಾಮ್ಲಾಲ್ ಅವರನ್ನು ಅಮಾನತು ಮಾಡಲಾಗಿತ್ತು. </p>.<p>ಇದನ್ನು ಖಂಡಿಸಿ ಕುಕಿ ಸಮುದಾಯದವರು ಗುರುವಾರ ನಡೆಸಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತಲ್ಲದೇ, ಇಬ್ಬರ ಹತ್ಯೆಯಾಗಿತ್ತು. </p>.<p>ಕಾನ್ಸ್ಟೆಬಲ್ ಅಮಾನತು ಆದೇಶವನ್ನು ಹಿಂಪಡೆಯಬೇಕು ಹಾಗೂ ಹಿಂಸಾಚಾರ, ಇಬ್ಬರ ಹತ್ಯೆ ಹೊಣೆ ಹೊತ್ತು ಜಿಲ್ಲಾಧಿಕಾರಿ ಎಸ್.ಧರುಣಕುಮಾರ್ ಹಾಗೂ ಎಸ್ಪಿ ಶಿವಾನಂದ ಸುರ್ವೆ ಅವರು ಜಿಲ್ಲೆಯನ್ನು ತೊರೆಯುವಂತೆ ಹೇಳಿದ್ದ ಐಟಿಎಲ್ಎಫ್, 24 ಗಂಟೆಗಳ ಗಡುವು ನೀಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>