ಕಳೆದ ವರ್ಷ ತೆಲಂಗಾಣದಲ್ಲಿ ಬಹುಮತ ಪಡೆದ ಕಾಂಗ್ರೆಸ್ ಪಕ್ಷ ಅಧಿಕಾರ ರಚಿಸಿತು. ಆ ನಂತರದಿಂದ ಬಿಆರ್ಎಸ್ನಲ್ಲಿ ಪಕ್ಷಾಂತರ ಪರ್ವ ಆರಂಭವಾಗಿದ್ದು, ಒಬ್ಬೊಬ್ಬರೇ ಶಾಸಕರು ಕಾಂಗ್ರೆಸ್ ಸೇರಲಾರಂಭಿಸಿದ್ದಾರೆ. ಈ ಹಾದಿಯಲ್ಲಿ ಯಾದಯ್ಯ ಅವರು ಬಿಆರ್ಎಸ್ನ ಆರನೇ ಶಾಸಕರು. ಇದಕ್ಕೂ ಮುನ್ನ ತಲ್ಲಂ ವೆಂಕಟರಾವ್, ಕಡಿಯಂ ಶ್ರೀಹರಿ, ಪೋಚರಂ ಶ್ರೀನಿವಾಸ ರೆಡ್ಡಿ, ಡಾ. ಎಂ. ಸಂಜಯ್ ಕುಮಾರ್ ಅವರು ಬಿಆರ್ಎಸ್ ತ್ಯಜಿಸಿ ಕಾಂಗ್ರೆಸ್ ಸೇರಿದ್ದಾರೆ.