‘ಎಲ್ಲಾ ಧರ್ಮಗಳಿಗೆ ಸೇರಿದ ಸದಸ್ಯರು ಇರುವ ಸದನದಲ್ಲಿ ಆಡಳಿತಾರೂಢ ಬಿಜೆಪಿಯು ಕೇವಲ ಹಿಂದೂ ಧರ್ಮದವರನ್ನು ಪ್ರತಿನಿಧಿಸುವುದಾಗಿ ಹೇಳುವಂತಿಲ್ಲ’ ಎಂದರು.
ರಾಹುಲ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘ರಾಹುಲ್ ಅವರ ಹೇಳಿಕೆಯು ಹಿಂದೂಗಳೆಂಬ ಹೆಮ್ಮೆ ಹೊಂದಿರುವ ದೇಶದ ಕೊಟ್ಯಂತರ ಜನರ ಭಾವನೆಗಳಿಗೆ ಘಾಸಿ ಮಾಡಿದೆ. 1984ರ ಸಿಖ್ ವಿರೋಧಿ ದಂಗೆಯ ಮೂಲಕ ಕಾಂಗ್ರೆಸ್ ಭಯೋತ್ಪಾದನೆಯನ್ನು ದೇಶದಲ್ಲಿ ಬಿತ್ತಿತ್ತು. ಹೀಗಾಗಿ ಅಹಿಂಸೆಯ ಕುರಿತು ಪಾಠ ಮಾಡುವ ಅಧಿಕಾರ ರಾಹುಲ್ಗೆ ಇಲ್ಲ’ ಎಂದು ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ರಾಹುಲ್ ಗಾಂಧಿ ಮಾತನಾಡುವ ಸಂದರ್ಭದಲ್ಲಿ ಶಿವನ ಚಿತ್ರ ತೋರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಸದನದ ನಿಯಮದಂತೆ ಪೋಸ್ಟರ್ಗಳನ್ನು ತೋರಿಸುವಂತಿಲ್ಲ ಎಂದು ತಾಕೀತು ಮಾಡಿದರು.