<p><strong>ಶ್ರೀನಗರ</strong>: ಸಂವಿಧಾನದ 370ನೇ ವಿಧಿ ಅಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ನಂತರ ಜಮ್ಮು–ಕಾಶ್ಮೀರಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ‘ನಿಮ್ಮೆಲ್ಲರ ಹೃದಯ ಗೆಲ್ಲುವುದಕ್ಕಾಗಿ ನಾನು ಇಲ್ಲಿಗೆ ಬಂದಿರುವೆ’ ಎಂದು ಗುರುವಾರ ಹೇಳಿದರು.</p><p>‘ವಿಕಸಿತ ಭಾರತ, ವಿಕಸಿತ ಜಮ್ಮು–ಕಾಶ್ಮೀರ’ ಕಾರ್ಯಕ್ರಮ ಅಂಗವಾಗಿ ಇಲ್ಲಿನ ಬಕ್ಷಿ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಹೃದಯ ಗೆಲ್ಲುವುದು ಮಾತ್ರ ನನ್ನ ಈ ಭೇಟಿಯ ಉದ್ದೇಶವಲ್ಲ; ಕಾಶ್ಮೀರ ಜನರ ಆಶೋತ್ತರಗಳು ಹಾಗೂ ಕನಸುಗಳನ್ನು ತಿಳಿದುಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ’ ಎಂದು ಮೋದಿ ಹೇಳಿದರು.</p><p>‘2014ರ ನಂತರ ಜಮ್ಮು–ಕಾಶ್ಮೀರಕ್ಕೆ ಬಂದಾಗಲೆಲ್ಲ, ನಾನು ನಿಮ್ಮ ಹೃದಯ ಗೆಲ್ಲುವುದಕ್ಕೆ ಎಲ್ಲ ಪ್ರಯತ್ನಗಳನ್ನು ಮಾಡುವೆ ಎಂದು ಹೇಳುತ್ತಿದ್ದೆ. ಇಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದನ್ನು ನೋಡಿದರೆ ನಾನು ನಿಮ್ಮ ಹೃದಯ ಗೆಲ್ಲುವಲ್ಲಿ ಯಶಸ್ಸು ಕಂಡಿದ್ದೇನೆ ಎಂಬುದು ಮನದಟ್ಟಾಗುತ್ತಿದೆ’ ಎಂದು ಹೇಳಿದರು.</p><p>‘ಶೀಘ್ರವೇ ರಂಜಾನ್ ಆರಂಭವಾಗಲಿದೆ. ಜಮ್ಮು–ಕಾಶ್ಮೀರದ ಪರಿಶುದ್ಧವಾದ ಈ ನೆಲದಿಂದ ನಾನು ಪ್ರತಿಯೊಬ್ಬರಿಗೂ ಶುಭಾಶಯ ಕೋರುತ್ತೇನೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಜಮ್ಮು–ಕಾಶ್ಮೀರ ಭಾರಿ ಅಭಿವೃದ್ಧಿ ಕಾಣಲಿದೆ. ಜಮ್ಮು–ಕಾಶ್ಮೀರದ ಯಶಸ್ಸು, ಶಾಂತಿ ಮತ್ತು ಅಭಿವೃದ್ಧಿಯನ್ನು ಯಾರೂ ತಡೆಯಲಾರರು’ ಎಂದು ಮೋದಿ ಹೇಳಿದರು.</p><p><strong>ನೇಮಕಾತಿ ಪತ್ರ ವಿತರಣೆ:</strong> ಇದೇ ಸಂದರ್ಭದಲ್ಲಿ ಮೋದಿ ಅವರು ನೂತನವಾಗಿ ನೇಮಕಗೊಂಡಿರುವ ಸಾವಿರದಷ್ಟು ಸರ್ಕಾರಿ ಉದ್ಯೋಗಿಗಳಿಗೆ ನೇಮಕಾತಿ ಪತ್ರ ವಿತರಿಸಿದರು.</p><p>ಮಹಿಳಾ ಸಾಧಕಿಯರು, ರೈತರು, ಉದ್ಯಮಶೀಲರು ಹಾಗೂ ಕೇಂದ್ರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.</p><p>₹6,400 ಕೋಟಿ ಅಧಿಕ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು.</p><p><strong>‘370ನೇ ವಿಧಿ: ಕಾಂಗ್ರೆಸ್ನಿಂದ ದಾರಿ ತಪ್ಪಿಸುವ ಕಾರ್ಯ’</strong></p><p>ಸಂವಿಧಾನದ 370ನೇ ವಿಧಿ ಕುರಿತು ಕಾಂಗ್ರೆಸ್ ಪಕ್ಷವು ಜಮ್ಮು–ಕಾಶ್ಮೀರ ಮಾತ್ರವಲ್ಲ ಇಡೀ ದೇಶದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು. </p><p>‘ಹಿಂದೆ ಕಾಲವೊಂದಿತ್ತು. ದೇಶದ ಇತರ ಭಾಗಗಳಿಗೆ ಸಿಗುತ್ತಿದ್ದ ಪ್ರಯೋಜನಗಳಿಂದ ಜಮ್ಮು–ಕಾಶ್ಮೀರ ವಂಚಿತವಾಗುತ್ತಿತ್ತು. 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನದಿಂದಾಗಿ ದೇಶದ ಇತರ ಭಾಗಗಳಲ್ಲಿ ಜಾರಿಯಲ್ಲಿದ್ದ ಕಾನೂನುಗಳು ಇಲ್ಲಿ ಅನ್ವಯವಾಗುತ್ತಿರಲಿಲ್ಲ’ ಎಂದರು. </p><p>‘ಈಗ ಕಾಲ ಬದಲಾಗಿದೆ. ಬಡವರ ಏಳಿಗೆಗಾಗಿ ದೇಶದಾದ್ಯಂತ ಜಾರಿಗೊಳಿಸಲಾಗುವ ಕಾರ್ಯಕ್ರಮಗಳು ಜಮ್ಮು–ಕಾಶ್ಮೀರದ ಸಹೋದರ–ಸಹೋದರಿಯರಿಗೂ ಪ್ರಯೋಜನವಾಗುತ್ತಿದೆ’ ಎಂದರು.</p><p>‘ಕೆಲ ಕುಟುಂಬಗಳ ಜಮ್ಮು–ಕಾಶ್ಮೀರದ ಮೇಲೆ ಹಿಡಿತ ಸಾಧಿಸಿದ್ದವು. ಕುಟುಂಬ ರಾಜಕಾರಣ ಲಂಚಗುಳಿತನದಿಂದಾಗಿ ಈ ಭಾಗದ ಜನರು ತೊಂದರೆ ಅನುಭವಿಸುವಂತಾಗಿತ್ತು‘ ಎಂದು ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಪಿಡಿಪಿ ವಿರುದ್ಧ ಪರೋಕ್ಷ ವಾಗ್ಗಾಳಿ ನಡೆಸಿದರು.</p><p>‘ಕುಟುಂಬ ರಾಜಕಾರಣದಿಂದಾಗಿ ಜಮ್ಮು–ಕಾಶ್ಮೀರ ಬ್ಯಾಂಕ್ ಮುಳುಗುವ ಹಂತ ತಲುಪಿತ್ತು. ಬ್ಯಾಂಕನ್ನು ಸಂಕಷ್ಟದಿಂದ ಪಾರು ಮಾಡಲಾಗಿದ್ದು ಈಗ ಅದು ಬೆಳೆಯುತ್ತಿದೆ. ಈ ಸಾಧನೆಗಳಿಗೆ ನಿಮ್ಮ ನಿರ್ಧಾರವೇ ಕಾರಣ. ನಾನು ಒಬ್ಬ ಕಾವಲುಗಾರ ಮಾತ್ರ’ ಎಂದು ವಿವರಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ</strong>: ಸಂವಿಧಾನದ 370ನೇ ವಿಧಿ ಅಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ನಂತರ ಜಮ್ಮು–ಕಾಶ್ಮೀರಕ್ಕೆ ಇದೇ ಮೊದಲ ಬಾರಿಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ‘ನಿಮ್ಮೆಲ್ಲರ ಹೃದಯ ಗೆಲ್ಲುವುದಕ್ಕಾಗಿ ನಾನು ಇಲ್ಲಿಗೆ ಬಂದಿರುವೆ’ ಎಂದು ಗುರುವಾರ ಹೇಳಿದರು.</p><p>‘ವಿಕಸಿತ ಭಾರತ, ವಿಕಸಿತ ಜಮ್ಮು–ಕಾಶ್ಮೀರ’ ಕಾರ್ಯಕ್ರಮ ಅಂಗವಾಗಿ ಇಲ್ಲಿನ ಬಕ್ಷಿ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಹೃದಯ ಗೆಲ್ಲುವುದು ಮಾತ್ರ ನನ್ನ ಈ ಭೇಟಿಯ ಉದ್ದೇಶವಲ್ಲ; ಕಾಶ್ಮೀರ ಜನರ ಆಶೋತ್ತರಗಳು ಹಾಗೂ ಕನಸುಗಳನ್ನು ತಿಳಿದುಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ’ ಎಂದು ಮೋದಿ ಹೇಳಿದರು.</p><p>‘2014ರ ನಂತರ ಜಮ್ಮು–ಕಾಶ್ಮೀರಕ್ಕೆ ಬಂದಾಗಲೆಲ್ಲ, ನಾನು ನಿಮ್ಮ ಹೃದಯ ಗೆಲ್ಲುವುದಕ್ಕೆ ಎಲ್ಲ ಪ್ರಯತ್ನಗಳನ್ನು ಮಾಡುವೆ ಎಂದು ಹೇಳುತ್ತಿದ್ದೆ. ಇಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದನ್ನು ನೋಡಿದರೆ ನಾನು ನಿಮ್ಮ ಹೃದಯ ಗೆಲ್ಲುವಲ್ಲಿ ಯಶಸ್ಸು ಕಂಡಿದ್ದೇನೆ ಎಂಬುದು ಮನದಟ್ಟಾಗುತ್ತಿದೆ’ ಎಂದು ಹೇಳಿದರು.</p><p>‘ಶೀಘ್ರವೇ ರಂಜಾನ್ ಆರಂಭವಾಗಲಿದೆ. ಜಮ್ಮು–ಕಾಶ್ಮೀರದ ಪರಿಶುದ್ಧವಾದ ಈ ನೆಲದಿಂದ ನಾನು ಪ್ರತಿಯೊಬ್ಬರಿಗೂ ಶುಭಾಶಯ ಕೋರುತ್ತೇನೆ. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಜಮ್ಮು–ಕಾಶ್ಮೀರ ಭಾರಿ ಅಭಿವೃದ್ಧಿ ಕಾಣಲಿದೆ. ಜಮ್ಮು–ಕಾಶ್ಮೀರದ ಯಶಸ್ಸು, ಶಾಂತಿ ಮತ್ತು ಅಭಿವೃದ್ಧಿಯನ್ನು ಯಾರೂ ತಡೆಯಲಾರರು’ ಎಂದು ಮೋದಿ ಹೇಳಿದರು.</p><p><strong>ನೇಮಕಾತಿ ಪತ್ರ ವಿತರಣೆ:</strong> ಇದೇ ಸಂದರ್ಭದಲ್ಲಿ ಮೋದಿ ಅವರು ನೂತನವಾಗಿ ನೇಮಕಗೊಂಡಿರುವ ಸಾವಿರದಷ್ಟು ಸರ್ಕಾರಿ ಉದ್ಯೋಗಿಗಳಿಗೆ ನೇಮಕಾತಿ ಪತ್ರ ವಿತರಿಸಿದರು.</p><p>ಮಹಿಳಾ ಸಾಧಕಿಯರು, ರೈತರು, ಉದ್ಯಮಶೀಲರು ಹಾಗೂ ಕೇಂದ್ರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.</p><p>₹6,400 ಕೋಟಿ ಅಧಿಕ ವೆಚ್ಚದ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು.</p><p><strong>‘370ನೇ ವಿಧಿ: ಕಾಂಗ್ರೆಸ್ನಿಂದ ದಾರಿ ತಪ್ಪಿಸುವ ಕಾರ್ಯ’</strong></p><p>ಸಂವಿಧಾನದ 370ನೇ ವಿಧಿ ಕುರಿತು ಕಾಂಗ್ರೆಸ್ ಪಕ್ಷವು ಜಮ್ಮು–ಕಾಶ್ಮೀರ ಮಾತ್ರವಲ್ಲ ಇಡೀ ದೇಶದ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು. </p><p>‘ಹಿಂದೆ ಕಾಲವೊಂದಿತ್ತು. ದೇಶದ ಇತರ ಭಾಗಗಳಿಗೆ ಸಿಗುತ್ತಿದ್ದ ಪ್ರಯೋಜನಗಳಿಂದ ಜಮ್ಮು–ಕಾಶ್ಮೀರ ವಂಚಿತವಾಗುತ್ತಿತ್ತು. 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನದಿಂದಾಗಿ ದೇಶದ ಇತರ ಭಾಗಗಳಲ್ಲಿ ಜಾರಿಯಲ್ಲಿದ್ದ ಕಾನೂನುಗಳು ಇಲ್ಲಿ ಅನ್ವಯವಾಗುತ್ತಿರಲಿಲ್ಲ’ ಎಂದರು. </p><p>‘ಈಗ ಕಾಲ ಬದಲಾಗಿದೆ. ಬಡವರ ಏಳಿಗೆಗಾಗಿ ದೇಶದಾದ್ಯಂತ ಜಾರಿಗೊಳಿಸಲಾಗುವ ಕಾರ್ಯಕ್ರಮಗಳು ಜಮ್ಮು–ಕಾಶ್ಮೀರದ ಸಹೋದರ–ಸಹೋದರಿಯರಿಗೂ ಪ್ರಯೋಜನವಾಗುತ್ತಿದೆ’ ಎಂದರು.</p><p>‘ಕೆಲ ಕುಟುಂಬಗಳ ಜಮ್ಮು–ಕಾಶ್ಮೀರದ ಮೇಲೆ ಹಿಡಿತ ಸಾಧಿಸಿದ್ದವು. ಕುಟುಂಬ ರಾಜಕಾರಣ ಲಂಚಗುಳಿತನದಿಂದಾಗಿ ಈ ಭಾಗದ ಜನರು ತೊಂದರೆ ಅನುಭವಿಸುವಂತಾಗಿತ್ತು‘ ಎಂದು ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಪಿಡಿಪಿ ವಿರುದ್ಧ ಪರೋಕ್ಷ ವಾಗ್ಗಾಳಿ ನಡೆಸಿದರು.</p><p>‘ಕುಟುಂಬ ರಾಜಕಾರಣದಿಂದಾಗಿ ಜಮ್ಮು–ಕಾಶ್ಮೀರ ಬ್ಯಾಂಕ್ ಮುಳುಗುವ ಹಂತ ತಲುಪಿತ್ತು. ಬ್ಯಾಂಕನ್ನು ಸಂಕಷ್ಟದಿಂದ ಪಾರು ಮಾಡಲಾಗಿದ್ದು ಈಗ ಅದು ಬೆಳೆಯುತ್ತಿದೆ. ಈ ಸಾಧನೆಗಳಿಗೆ ನಿಮ್ಮ ನಿರ್ಧಾರವೇ ಕಾರಣ. ನಾನು ಒಬ್ಬ ಕಾವಲುಗಾರ ಮಾತ್ರ’ ಎಂದು ವಿವರಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>