ಲಕ್ಷಾಂತರ ಭಕ್ತರ ಜೊತೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಭಾನುವಾರದ ರಥಯಾತ್ರೆಗೆ ಸಾಕ್ಷಿಯಾಗಲಿದ್ದಾರೆ. ಅವರ ಭೇಟಿಗಾಗಿ ರಾಜ್ಯ ಸರ್ಕಾರ ವಿಶೇಷ ವ್ಯವಸ್ಥೆ ಮಾಡಿದೆ.
ಮೂರು ಪ್ರಮುಖ ದೇವರುಗಳಾದ ಜಗನ್ನಾಥ, ದೇವಿ ಸುಭದ್ರಾ ಹಾಗೂ ಬಲ ಭದ್ರನ ರಥಯಾತ್ರೆ ನಡೆಯಲಿದೆ. ಇದಕ್ಕಾಗಿ ಹಲವಾರು ಆಚರಣೆಗಳು ನಡೆಯಲಿವೆ. ಕೊನೆಯ ಬಾರಿಗೆ ಈ ಮಾದರಿಯ ರಥಯಾತ್ರೆ 1971ರಲ್ಲಿ ಎರಡು ದಿನಗಳ ಕಾಲ ನಡೆದಿತ್ತು.