<p><strong>ನವದೆಹಲಿ</strong>: ಜೀವಾವಧಿ ಶಿಕ್ಷೆಯನ್ನು ಮಾಫಿ ಮಾಡುವುದಕ್ಕೆ ಅಪರಾಧಿಯು ಕಡ್ಡಾಯವಾಗಿ ಎರಡು ವರ್ಷ ‘ಸಭ್ಯವಾಗಿ’ ನಡೆದುಕೊಂಡಿರಬೇಕು ಎಂಬ ಷರತ್ತನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.</p>.<p>‘ಈ ಷರತ್ತು ನಿರಂಕುಶ, ಗೊಂದಲಕಾರಿ ಹಾಗೂ ವ್ಯಕ್ತಿನಿಷ್ಠವಾಗಿದೆ’ ಎಂದಿರುವ ಸುಪ್ರೀಂ ಕೋರ್ಟ್, ಇದು ಸಂವಿಧಾನದ 14ನೇ ವಿಧಿಗೆ ವಿರುದ್ಧವೂ ಆಗಲಿದೆ’ ಎಂದು ಹೇಳಿದೆ.</p>.<p>ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಹಾಗೂ ಆಗಸ್ಟಿನ್ ಜಾರ್ಜ್ ಮಹೀಹ್ ಅವರು ಇದ್ದ ನ್ಯಾಯಪೀಠವು, ‘ಸಿಆರ್ಪಿಸಿ ಅಥವಾ ಅದಕ್ಕೆ ಸಮಾನವಾದ ಇತರ ಕಾಯ್ದೆಯಲ್ಲಿ ಸಭ್ಯ ಅಥವಾ ಅಸಭ್ಯ ಎಂಬ ಬಗ್ಗೆ ವ್ಯಾಖ್ಯಾನವೇ ಇಲ್ಲ’ ಎಂದು ಹೇಳಿದೆ.</p>.<p>‘ಅಪರಾಧಿಯೊಬ್ಬನಿಗೆ ಕ್ಷಮಾದಾನ ನೀಡುವ ಇಲ್ಲವೇ ನೀಡದಿರುವ ನಿರ್ಧಾರವು ತರ್ಕಬದ್ಧವಾಗಿರಬೇಕು ಹಾಗೂ ಸಂಬಂಧಪಟ್ಟವರಿಗೆ ನ್ಯಾಯಸಮ್ಮತವಾಗಿರಬೇಕು’ ಎಂದು ಸೋಮವಾರ ನೀಡಿರುವ ತೀರ್ಪಿನಲ್ಲಿ ನ್ಯಾಯಪೀಠ ಹೇಳಿದೆ.</p>.<p>‘ಸಿಆರ್ಪಿಸಿ ಸೆಕ್ಷನ್ 432ರ ಸಬ್ಸೆಕ್ಷನ್(1) ಅಡಿ ದತ್ತವಾದ ಅಧಿಕಾರ ಬಳಸಿ ಇಂತಹ ಷರತ್ತನ್ನು ವಿಧಿಸಲು ನೀಡುವ ಅವಕಾಶವು, ಅಪರಾಧಿಗೆ ನೀಡಿದ ಕ್ಷಮಾದಾನವನ್ನು ತಮಗೆ ತೋಚಿದಂತೆ ರದ್ದು ಮಾಡಲು ಅಧಿಕಾರಿಗಳ ಕೈಗೆ ನೀಡುವ ಅಸ್ತ್ರವಾಗಲಿದೆ’ ಎಂದು ನ್ಯಾಯಪೀಠ ಹೇಳಿದೆ.</p>.<p>‘ಕ್ಷಮಾದಾನ ತನ್ನ ಹಕ್ಕು ಎಂಬಂತೆ ಅಪರಾಧಿ ಕೋರುವಂತಿಲ್ಲ. ಆದರೆ, ಕಾನೂನು ಪ್ರಕಾರ ಹಾಗೂ ಸರ್ಕಾರದ ನೀತಿಯ ಅನ್ವಯ ತನಗೆ ಕ್ಷಮಾದಾನ ನೀಡಲು ಪರಿಗಣಿಸಿ ಎಂಬುದಾಗಿ ಅರ್ಜಿ ಸಲ್ಲಿಸಲು ಆತನಿಗೆ ಹಕ್ಕು ಇದೆ’ ಎಂದು ನ್ಯಾಯಪೀಠ ಹೇಳಿದೆ.</p>.<p>ಮಫತ್ಭಾಯ್ ಮೋತಿಭಾಯ್ ಸಾಗರ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠ ನಡೆಸಿದೆ.</p>.<p>ಅಪರಾಧಿಯ ವಿರುದ್ಧ ಸಂಜ್ಞೇಯ ಪ್ರಕರಣ ದಾಖಲಾಗಿತ್ತು ಎಂಬುದು ಆತನಿಗೆ ಕ್ಷಮಾದಾನ ನೀಡಿ ಹೊರಡಿಸಿರುವ ಆದೇಶವನ್ನು ರದ್ದು ಮಾಡುವುದಕ್ಕೆ ಆಧಾರವಾಗದು ಎಂದೂ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಜೀವಾವಧಿ ಶಿಕ್ಷೆಯನ್ನು ಮಾಫಿ ಮಾಡುವುದಕ್ಕೆ ಅಪರಾಧಿಯು ಕಡ್ಡಾಯವಾಗಿ ಎರಡು ವರ್ಷ ‘ಸಭ್ಯವಾಗಿ’ ನಡೆದುಕೊಂಡಿರಬೇಕು ಎಂಬ ಷರತ್ತನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.</p>.<p>‘ಈ ಷರತ್ತು ನಿರಂಕುಶ, ಗೊಂದಲಕಾರಿ ಹಾಗೂ ವ್ಯಕ್ತಿನಿಷ್ಠವಾಗಿದೆ’ ಎಂದಿರುವ ಸುಪ್ರೀಂ ಕೋರ್ಟ್, ಇದು ಸಂವಿಧಾನದ 14ನೇ ವಿಧಿಗೆ ವಿರುದ್ಧವೂ ಆಗಲಿದೆ’ ಎಂದು ಹೇಳಿದೆ.</p>.<p>ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಹಾಗೂ ಆಗಸ್ಟಿನ್ ಜಾರ್ಜ್ ಮಹೀಹ್ ಅವರು ಇದ್ದ ನ್ಯಾಯಪೀಠವು, ‘ಸಿಆರ್ಪಿಸಿ ಅಥವಾ ಅದಕ್ಕೆ ಸಮಾನವಾದ ಇತರ ಕಾಯ್ದೆಯಲ್ಲಿ ಸಭ್ಯ ಅಥವಾ ಅಸಭ್ಯ ಎಂಬ ಬಗ್ಗೆ ವ್ಯಾಖ್ಯಾನವೇ ಇಲ್ಲ’ ಎಂದು ಹೇಳಿದೆ.</p>.<p>‘ಅಪರಾಧಿಯೊಬ್ಬನಿಗೆ ಕ್ಷಮಾದಾನ ನೀಡುವ ಇಲ್ಲವೇ ನೀಡದಿರುವ ನಿರ್ಧಾರವು ತರ್ಕಬದ್ಧವಾಗಿರಬೇಕು ಹಾಗೂ ಸಂಬಂಧಪಟ್ಟವರಿಗೆ ನ್ಯಾಯಸಮ್ಮತವಾಗಿರಬೇಕು’ ಎಂದು ಸೋಮವಾರ ನೀಡಿರುವ ತೀರ್ಪಿನಲ್ಲಿ ನ್ಯಾಯಪೀಠ ಹೇಳಿದೆ.</p>.<p>‘ಸಿಆರ್ಪಿಸಿ ಸೆಕ್ಷನ್ 432ರ ಸಬ್ಸೆಕ್ಷನ್(1) ಅಡಿ ದತ್ತವಾದ ಅಧಿಕಾರ ಬಳಸಿ ಇಂತಹ ಷರತ್ತನ್ನು ವಿಧಿಸಲು ನೀಡುವ ಅವಕಾಶವು, ಅಪರಾಧಿಗೆ ನೀಡಿದ ಕ್ಷಮಾದಾನವನ್ನು ತಮಗೆ ತೋಚಿದಂತೆ ರದ್ದು ಮಾಡಲು ಅಧಿಕಾರಿಗಳ ಕೈಗೆ ನೀಡುವ ಅಸ್ತ್ರವಾಗಲಿದೆ’ ಎಂದು ನ್ಯಾಯಪೀಠ ಹೇಳಿದೆ.</p>.<p>‘ಕ್ಷಮಾದಾನ ತನ್ನ ಹಕ್ಕು ಎಂಬಂತೆ ಅಪರಾಧಿ ಕೋರುವಂತಿಲ್ಲ. ಆದರೆ, ಕಾನೂನು ಪ್ರಕಾರ ಹಾಗೂ ಸರ್ಕಾರದ ನೀತಿಯ ಅನ್ವಯ ತನಗೆ ಕ್ಷಮಾದಾನ ನೀಡಲು ಪರಿಗಣಿಸಿ ಎಂಬುದಾಗಿ ಅರ್ಜಿ ಸಲ್ಲಿಸಲು ಆತನಿಗೆ ಹಕ್ಕು ಇದೆ’ ಎಂದು ನ್ಯಾಯಪೀಠ ಹೇಳಿದೆ.</p>.<p>ಮಫತ್ಭಾಯ್ ಮೋತಿಭಾಯ್ ಸಾಗರ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠ ನಡೆಸಿದೆ.</p>.<p>ಅಪರಾಧಿಯ ವಿರುದ್ಧ ಸಂಜ್ಞೇಯ ಪ್ರಕರಣ ದಾಖಲಾಗಿತ್ತು ಎಂಬುದು ಆತನಿಗೆ ಕ್ಷಮಾದಾನ ನೀಡಿ ಹೊರಡಿಸಿರುವ ಆದೇಶವನ್ನು ರದ್ದು ಮಾಡುವುದಕ್ಕೆ ಆಧಾರವಾಗದು ಎಂದೂ ಹೇಳಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>