<p><strong>ರಾಂಚಿ</strong>: ಜಾರ್ಖಂಡ್ ವಿಧಾನಸಭೆ ಚುನಾವಣೆ ಘೋಷಣೆಯಾದ ಬಳಿಕ ಜಾರ್ಖಂಡ್ನಲ್ಲಿ ಪಕ್ಷಾಂತರ ಪರ್ವ ಜೋರಾಗಿದೆ. ಮೂವರು ಮಾಜಿ ಶಾಸಕರು ಸೇರಿ ಬಿಜೆಪಿಯ ಹಲವು ನಾಯಕರು ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.</p><p>ಲೂಯಿಸ್ ಮರಂಡಿ, ಕುನಾಲ್ ಸರಂಗಿ ಮತ್ತು ಲಕ್ಷ್ಮಣ್ ತುಡು ಪಕ್ಷ ಬದಲಿಸಿದ ಮಾಜಿ ಶಾಸಕರು. ಮೂರು ಬಾರಿಯ ಬಿಜೆಪಿ ಶಾಸಕ ಕೇದಾರ್ ಹಜರಾ, ಎಜೆಎಎಸ್ಯು ಪಕ್ಷದ ನಾಯಕ ಉಮಾಕಾಂತ್ ರಜಕ್ ಜೆಎಂಎಂ ಸೇರ್ಪಡೆಯಾಗಿ ಎರಡು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.</p><p>‘ನಾವು ಇಂದು ಜೆಎಂಎಂ ಪಕ್ಷಕ್ಕೆ ಸೇರ್ಪಡೆಯಾದೆವು’ಎಂದು ಸರಂಗಿ ಹೇಳಿದ್ದಾರೆ.</p><p>ದುಮ್ಕಾ ಕ್ಷೇತ್ರದಲ್ಲಿ 2014ರ ಚುನಾವಣೆಯಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿರುದ್ಧ 5,262 ಮತಗಳ ಅಂತರದಿಂದ ಬಿಜೆಪಿಯ ಮಾಜಿ ಶಾಸಕರಾದ ಲೂಯಿಸ್ ಮರಾಂಡಿ ಅವರು ಗೆಲುವು ಸಾಧಿಸಿದ್ದರು.</p><p>'ಬಿಜೆಪಿಯ ಮಾಜಿ ಉಪಾಧ್ಯಕ್ಷ ಮತ್ತು ಹಿರಿಯ ನಾಯಕ ಲೂಯಿಸ್ ಮರಾಂಡಿ ಅವರನ್ನು ಜೆಎಂಎಂ ಕುಟುಂಬಕ್ಕೆ ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದು ಸೋರೆನ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.</p><p>2019 ರಲ್ಲಿ ಸೊರೇನ್ 13,188 ಮತಗಳ ಅಂತರದಲ್ಲಿ ದುಮ್ಕಾ ಕ್ಷೇತ್ರದಲ್ಲಿ ಗೆದ್ದಿದ್ದರು. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಅವರು ಬರ್ಹೈತ್ ಕ್ಷೇತ್ರವನ್ನು ಉಳಿಸಿಕೊಂಡಿದ್ದರು. ಬಳಿಕ ನಡೆದ ಉಪಚುನಾವಣೆಯಲ್ಲೂ ಅವರ ಸಹೋದರ ಬಸಂತ್ ಸೊರೇನ್ ಅವರು ಮರಾಂಡಿ ಅವರನ್ನು 6,842 ಮತಗಳಿಂದ ಸೋಲಿಸಿದ್ದರು.</p><p>ಲೂಯಿಸ್ ಮರಾಂಡಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಾಬುಲಾಲ್ ಮರಾಂಡಿ ಅವರಿಗೆ ಬರೆದ ಪತ್ರದಲ್ಲಿ ತಮ್ಮಂತಹ ಬದ್ಧತೆಯ ಕಾರ್ಯಕರ್ತರ ನಿರ್ಲಕ್ಷ್ಯ ಮತ್ತು ಬಿಜೆಪಿಯಲ್ಲಿ ಹೆಚ್ಚುತ್ತಿರುವ ಗುಂಪುಗಾರಿಕೆಯ ಬಗ್ಗೆ ಗಮನ ಸೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.</p><p>ಸ್ವಾತಂತ್ರ್ಯದ ನಂತರ 2014ರಲ್ಲಿ ಜೆಎಂಎಂ ಭದ್ರಕೋಟೆ ಎಂದು ಪರಿಗಣಿಸಲಾದ ದುಮ್ಕಾವನ್ನು ಬಿಜೆಪಿ ಮೊದಲ ಬಾರಿಗೆ ಹೇಗೆ ಗೆದ್ದಿದೆ ಎಂಬುದನ್ನು ಮರೆಯಬೇಡಿ ಎಂದು ಅವರು ಉಲ್ಲೇಖಿಸಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಂಚಿ</strong>: ಜಾರ್ಖಂಡ್ ವಿಧಾನಸಭೆ ಚುನಾವಣೆ ಘೋಷಣೆಯಾದ ಬಳಿಕ ಜಾರ್ಖಂಡ್ನಲ್ಲಿ ಪಕ್ಷಾಂತರ ಪರ್ವ ಜೋರಾಗಿದೆ. ಮೂವರು ಮಾಜಿ ಶಾಸಕರು ಸೇರಿ ಬಿಜೆಪಿಯ ಹಲವು ನಾಯಕರು ಜಾರ್ಖಂಡ್ ಮುಕ್ತಿ ಮೋರ್ಚಾ(ಜೆಎಂಎಂ) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.</p><p>ಲೂಯಿಸ್ ಮರಂಡಿ, ಕುನಾಲ್ ಸರಂಗಿ ಮತ್ತು ಲಕ್ಷ್ಮಣ್ ತುಡು ಪಕ್ಷ ಬದಲಿಸಿದ ಮಾಜಿ ಶಾಸಕರು. ಮೂರು ಬಾರಿಯ ಬಿಜೆಪಿ ಶಾಸಕ ಕೇದಾರ್ ಹಜರಾ, ಎಜೆಎಎಸ್ಯು ಪಕ್ಷದ ನಾಯಕ ಉಮಾಕಾಂತ್ ರಜಕ್ ಜೆಎಂಎಂ ಸೇರ್ಪಡೆಯಾಗಿ ಎರಡು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.</p><p>‘ನಾವು ಇಂದು ಜೆಎಂಎಂ ಪಕ್ಷಕ್ಕೆ ಸೇರ್ಪಡೆಯಾದೆವು’ಎಂದು ಸರಂಗಿ ಹೇಳಿದ್ದಾರೆ.</p><p>ದುಮ್ಕಾ ಕ್ಷೇತ್ರದಲ್ಲಿ 2014ರ ಚುನಾವಣೆಯಲ್ಲಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ವಿರುದ್ಧ 5,262 ಮತಗಳ ಅಂತರದಿಂದ ಬಿಜೆಪಿಯ ಮಾಜಿ ಶಾಸಕರಾದ ಲೂಯಿಸ್ ಮರಾಂಡಿ ಅವರು ಗೆಲುವು ಸಾಧಿಸಿದ್ದರು.</p><p>'ಬಿಜೆಪಿಯ ಮಾಜಿ ಉಪಾಧ್ಯಕ್ಷ ಮತ್ತು ಹಿರಿಯ ನಾಯಕ ಲೂಯಿಸ್ ಮರಾಂಡಿ ಅವರನ್ನು ಜೆಎಂಎಂ ಕುಟುಂಬಕ್ಕೆ ನಾವು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದು ಸೋರೆನ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.</p><p>2019 ರಲ್ಲಿ ಸೊರೇನ್ 13,188 ಮತಗಳ ಅಂತರದಲ್ಲಿ ದುಮ್ಕಾ ಕ್ಷೇತ್ರದಲ್ಲಿ ಗೆದ್ದಿದ್ದರು. ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಅವರು ಬರ್ಹೈತ್ ಕ್ಷೇತ್ರವನ್ನು ಉಳಿಸಿಕೊಂಡಿದ್ದರು. ಬಳಿಕ ನಡೆದ ಉಪಚುನಾವಣೆಯಲ್ಲೂ ಅವರ ಸಹೋದರ ಬಸಂತ್ ಸೊರೇನ್ ಅವರು ಮರಾಂಡಿ ಅವರನ್ನು 6,842 ಮತಗಳಿಂದ ಸೋಲಿಸಿದ್ದರು.</p><p>ಲೂಯಿಸ್ ಮರಾಂಡಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಾಬುಲಾಲ್ ಮರಾಂಡಿ ಅವರಿಗೆ ಬರೆದ ಪತ್ರದಲ್ಲಿ ತಮ್ಮಂತಹ ಬದ್ಧತೆಯ ಕಾರ್ಯಕರ್ತರ ನಿರ್ಲಕ್ಷ್ಯ ಮತ್ತು ಬಿಜೆಪಿಯಲ್ಲಿ ಹೆಚ್ಚುತ್ತಿರುವ ಗುಂಪುಗಾರಿಕೆಯ ಬಗ್ಗೆ ಗಮನ ಸೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.</p><p>ಸ್ವಾತಂತ್ರ್ಯದ ನಂತರ 2014ರಲ್ಲಿ ಜೆಎಂಎಂ ಭದ್ರಕೋಟೆ ಎಂದು ಪರಿಗಣಿಸಲಾದ ದುಮ್ಕಾವನ್ನು ಬಿಜೆಪಿ ಮೊದಲ ಬಾರಿಗೆ ಹೇಗೆ ಗೆದ್ದಿದೆ ಎಂಬುದನ್ನು ಮರೆಯಬೇಡಿ ಎಂದು ಅವರು ಉಲ್ಲೇಖಿಸಿದ್ದಾರೆ.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>