<p><strong>ಹೈದರಾಬಾದ್</strong>: ಖ್ಯಾತ ಕವಿ ಅಂದೇ ಶ್ರೀ ಬರೆದಿರುವ ‘ಜಯ ಜಯ ಹೇ ತೆಲಂಗಾಣ’ವನ್ನು ರಾಜ್ಯ ಗೀತೆಯಾಗಿ ತೆಲಂಗಾಣ ರಾಜ್ಯ ಸರ್ಕಾರ ಅನುಮೋದಿಸಿದೆ.</p><p>ಜೂನ್ 2 ರಂದು ರಾಜ್ಯ ರಚನೆಯ ದಿನದ ಅದ್ಧೂರಿ ಆಚರಣೆಯಲ್ಲಿ ರಾಜ್ಯ ಗೀತೆ ಬಿಡುಗಡೆಯಾಗಲಿದೆ ಎಂದು ಗುರುವಾರ ರಾತ್ರಿ ಹೊರಡಿಸಲಾದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p><p>ಅಂದೇ ಶ್ರೀ ಅವರು 20 ವರ್ಷಗಳ ಹಿಂದೆ ಬರೆದ ಗೀತೆಯನ್ನು ಯಾವುದೇ ಬದಲಾವಣೆಗಳಿಲ್ಲದೆ ರಾಜ್ಯಗೀತೆಯಾಗಿ ಸ್ವೀಕರಿಸಲಾಗಿದೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಂ. ಎಂ. ಕೀರವಾಣಿ ಈ ಹಾಡಿಗೆ ಸಂಗೀತ ಸಂಯೋಜಿಸಿ ಹಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.</p><p>ರಾಜ್ಯ ಗೀತೆಯನ್ನು ಎರಡು ಆವೃತ್ತಿಗಳಲ್ಲಿ ನಿರ್ಮಿಸಲಾಗಿದೆ. ಹಾಡಿನ ಮೊದಲ ಆವೃತ್ತಿಯು ಎರಡೂವರೆ ನಿಮಿಷಗಳವರೆಗೆ ಇರುತ್ತದೆ, ಎರಡನೇ ಆವೃತ್ತಿಯು ಪೂರ್ಣ ಹದಿಮೂರುವರೆ ನಿಮಿಷಗಳ ನಿರೂಪಣೆಯಾಗಿದೆ.</p><p>ಮೂರು ಚರಣಗಳನ್ನು ಹೊಂದಿರುವ ಚಿಕ್ಕ ಆವೃತ್ತಿಯನ್ನು ಅಧಿಕೃತ ಕಾರ್ಯಕ್ರಮಗಳಲ್ಲಿ ಪ್ಲೇ ಮಾಡಲಾಗುವುದು. ಎರಡೂ ಆವೃತ್ತಿಗಳನ್ನು ರಾಜ್ಯ ಗೀತೆಗಳಾಗಿ ಪರಿಗಣಿಸಲಾಗುವುದು ಎಂದು ಸಿಎಂ ರೆಡ್ಡಿ ಘೋಷಿಸಿದ್ದಾರೆ.</p><p>ರಾಜ್ಯ ಲಾಂಛನದಿಂದ ಚಾರ್ಮಿನಾರ್ ಮತ್ತು ಕಾಕತೀಯ ರಾಜವಂಶದ ಕಮಾನುಗಳನ್ನು ತೆಗೆದುಹಾಕುವ ಸರ್ಕಾರದ ಕ್ರಮಕ್ಕೆ ಬಿಆರ್ಎಸ್ ಮತ್ತು ಎಐಎಂಐಎಂ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಸರ್ಕಾರವು ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಗುರುವಾರ ಹೇಳಿದ್ದಾರೆ.</p><p>ತೆಲಂಗಾಣ ಲಾಂಛನ ಮತ್ತು ತೆಲಂಗಾಣ ಮಾತೆಯ ಪ್ರತಿಮೆ ಕುರಿತು ವಿಧಾನಸಭೆಯಲ್ಲಿ ಚರ್ಚಿಸಿದ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಅಲ್ಲಿಯವರೆಗೆ ಯಾವುದೇ ತಪ್ಪು ಕಲ್ಪನೆ ಅಥವಾ ಸುಳ್ಳು ಪ್ರಚಾರ ಮಾಡಕೂಡದು ಎಂದು ರೆಡ್ಡಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೈದರಾಬಾದ್</strong>: ಖ್ಯಾತ ಕವಿ ಅಂದೇ ಶ್ರೀ ಬರೆದಿರುವ ‘ಜಯ ಜಯ ಹೇ ತೆಲಂಗಾಣ’ವನ್ನು ರಾಜ್ಯ ಗೀತೆಯಾಗಿ ತೆಲಂಗಾಣ ರಾಜ್ಯ ಸರ್ಕಾರ ಅನುಮೋದಿಸಿದೆ.</p><p>ಜೂನ್ 2 ರಂದು ರಾಜ್ಯ ರಚನೆಯ ದಿನದ ಅದ್ಧೂರಿ ಆಚರಣೆಯಲ್ಲಿ ರಾಜ್ಯ ಗೀತೆ ಬಿಡುಗಡೆಯಾಗಲಿದೆ ಎಂದು ಗುರುವಾರ ರಾತ್ರಿ ಹೊರಡಿಸಲಾದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.</p><p>ಅಂದೇ ಶ್ರೀ ಅವರು 20 ವರ್ಷಗಳ ಹಿಂದೆ ಬರೆದ ಗೀತೆಯನ್ನು ಯಾವುದೇ ಬದಲಾವಣೆಗಳಿಲ್ಲದೆ ರಾಜ್ಯಗೀತೆಯಾಗಿ ಸ್ವೀಕರಿಸಲಾಗಿದೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕ ಎಂ. ಎಂ. ಕೀರವಾಣಿ ಈ ಹಾಡಿಗೆ ಸಂಗೀತ ಸಂಯೋಜಿಸಿ ಹಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.</p><p>ರಾಜ್ಯ ಗೀತೆಯನ್ನು ಎರಡು ಆವೃತ್ತಿಗಳಲ್ಲಿ ನಿರ್ಮಿಸಲಾಗಿದೆ. ಹಾಡಿನ ಮೊದಲ ಆವೃತ್ತಿಯು ಎರಡೂವರೆ ನಿಮಿಷಗಳವರೆಗೆ ಇರುತ್ತದೆ, ಎರಡನೇ ಆವೃತ್ತಿಯು ಪೂರ್ಣ ಹದಿಮೂರುವರೆ ನಿಮಿಷಗಳ ನಿರೂಪಣೆಯಾಗಿದೆ.</p><p>ಮೂರು ಚರಣಗಳನ್ನು ಹೊಂದಿರುವ ಚಿಕ್ಕ ಆವೃತ್ತಿಯನ್ನು ಅಧಿಕೃತ ಕಾರ್ಯಕ್ರಮಗಳಲ್ಲಿ ಪ್ಲೇ ಮಾಡಲಾಗುವುದು. ಎರಡೂ ಆವೃತ್ತಿಗಳನ್ನು ರಾಜ್ಯ ಗೀತೆಗಳಾಗಿ ಪರಿಗಣಿಸಲಾಗುವುದು ಎಂದು ಸಿಎಂ ರೆಡ್ಡಿ ಘೋಷಿಸಿದ್ದಾರೆ.</p><p>ರಾಜ್ಯ ಲಾಂಛನದಿಂದ ಚಾರ್ಮಿನಾರ್ ಮತ್ತು ಕಾಕತೀಯ ರಾಜವಂಶದ ಕಮಾನುಗಳನ್ನು ತೆಗೆದುಹಾಕುವ ಸರ್ಕಾರದ ಕ್ರಮಕ್ಕೆ ಬಿಆರ್ಎಸ್ ಮತ್ತು ಎಐಎಂಐಎಂ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಸರ್ಕಾರವು ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಗುರುವಾರ ಹೇಳಿದ್ದಾರೆ.</p><p>ತೆಲಂಗಾಣ ಲಾಂಛನ ಮತ್ತು ತೆಲಂಗಾಣ ಮಾತೆಯ ಪ್ರತಿಮೆ ಕುರಿತು ವಿಧಾನಸಭೆಯಲ್ಲಿ ಚರ್ಚಿಸಿದ ನಂತರವೇ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಅಲ್ಲಿಯವರೆಗೆ ಯಾವುದೇ ತಪ್ಪು ಕಲ್ಪನೆ ಅಥವಾ ಸುಳ್ಳು ಪ್ರಚಾರ ಮಾಡಕೂಡದು ಎಂದು ರೆಡ್ಡಿ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>