<p><strong>ಗುವಾಹಟಿ</strong>: ಉಲ್ಫಾದ ಕೆಲ ಸಂಘಟನೆಗಳ ಜೊತೆ ಒಪ್ಪಂದವಾಗಿರುವುದು ರಾಜ್ಯದಲ್ಲಿ ಸ್ಥಳೀಯರಿಗೆ ಹೆಚ್ಚಿನ ಸುರಕ್ಷತೆ ಒದಗಿಸಲಿದ್ದು, ಅವರಿಗೆ ರಾಜಕೀಯ ಪ್ರಾತಿನಿಧ್ಯ ಮತ್ತು ಭೂಮಿಯ ಹಕ್ಕುಗಳು ಸಿಗಲಿವೆ ಎಂದು ಮುಖ್ಯಮಂತ್ರಿ ಹಿಮಂತಾ ಬಿಸ್ವ ಶರ್ಮಾ ಸೋಮವಾರ ಹೇಳಿದರು.</p>.<p>ಹೊಸ ವರ್ಷದ ನಿಮಿತ್ತ ಔಪಚಾರಿಕವಾಗಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ಅಸ್ಸಾಂನ ಸಾರ್ವಭೌಮತೆಗೆ ಒತ್ತಾಯಿಸಲು ಉಲ್ಫಾ ರಚನೆಯಾಗಿತ್ತು. ಯಾರೊಬ್ಬರಿಗೂ ಸಾರ್ವಭೌಮತೆ ಸಿಗುವುದಿಲ್ಲ. ಆದರೆ, ಈ ಒಪ್ಪಂದವು ಅಸ್ಸಾಂ ಜನರಿಗೆ ಸಂವಿಧಾನದ ಅನುಸಾರ ಹೆಚ್ಚಿನ ಸುರಕ್ಷತೆ ಒದಗಿಸಲಿದೆ ಎಂದು ಹೇಳಿದರು.</p>.<p>ಕ್ಷೇತ್ರ ಪುನರ್ವಿಂಗಡಣೆ ಪ್ರಕಾರ, ಬ್ರಹ್ಮಪುತ್ರ ಕಣಿವೆ ವ್ಯಾಪ್ತಿಯಲ್ಲಿ 96 ಮತ್ತು ಬರಾಕ್ ಕಣಿವೆ ಭಾಗದ ಎಂಟು ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ಅಸ್ಸಾಂನ ಸ್ಥಳೀಯ ನಿವಾಸಿಗಳಿಗೆ ಖಾತರಿಯಾಗಿ ರಾಜಕೀಯ ಪ್ರಾತಿನಿಧ್ಯ ಒದಗಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.</p>.<p>ಉಲ್ಫಾ ಮುಖಂಡ, ಪರೇಶ್ ಬರೂಚ್ ಸಂಪರ್ಕದಲ್ಲಿದ್ದು, ಅವರು ಇನ್ನೂ ಶಾಂತಿ ಪ್ರಕ್ರಿಯೆಗೆ ದಾಖಲಾಗಬೇಕಿದೆ. ಅವರ ಜೊತೆ ಚರ್ಚಿಸುತ್ತೇನೆ. ಬೇಗನೆ ಅವರುಮಾತುಕತೆಗೆ ಸಿದ್ಧರಿರಲಿರಲಾರರು. ಅವರ ಪತ್ತೆಗೆ ಕ್ರಮವಹಿಸಬಾರದು ಎಂದು ಪೊಲೀಸರಿಗೆ ಸೂಚಿಸುತ್ತೇನೆ ಎಂದರು.</p>.<p>‘ಆತ ರಾಜ್ಯದಿಂದ ಹೊರಗಿದ್ದು, ಈಗ ಯಾವ ರಾಜ್ಯದಲ್ಲಿದ್ದಾನೆ ಎಂದು ತಿಳಿದಿಲ್ಲ. ಆದರೆ, ಕನಿಷ್ಠ 15 ದಿನ ರಾಜ್ಯದಲ್ಲಿದ್ದು, ಅಸ್ಸಾಂನಲ್ಲಿ ಆಗಿರುವ ಅಭಿವೃದ್ಧಿ ಗಮನಿಸಬೇಕು ಎಂದು ಅವರಿಗೆ ತಿಳಿಸಲು ಬಯಸುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುವಾಹಟಿ</strong>: ಉಲ್ಫಾದ ಕೆಲ ಸಂಘಟನೆಗಳ ಜೊತೆ ಒಪ್ಪಂದವಾಗಿರುವುದು ರಾಜ್ಯದಲ್ಲಿ ಸ್ಥಳೀಯರಿಗೆ ಹೆಚ್ಚಿನ ಸುರಕ್ಷತೆ ಒದಗಿಸಲಿದ್ದು, ಅವರಿಗೆ ರಾಜಕೀಯ ಪ್ರಾತಿನಿಧ್ಯ ಮತ್ತು ಭೂಮಿಯ ಹಕ್ಕುಗಳು ಸಿಗಲಿವೆ ಎಂದು ಮುಖ್ಯಮಂತ್ರಿ ಹಿಮಂತಾ ಬಿಸ್ವ ಶರ್ಮಾ ಸೋಮವಾರ ಹೇಳಿದರು.</p>.<p>ಹೊಸ ವರ್ಷದ ನಿಮಿತ್ತ ಔಪಚಾರಿಕವಾಗಿ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಅವರು, ಅಸ್ಸಾಂನ ಸಾರ್ವಭೌಮತೆಗೆ ಒತ್ತಾಯಿಸಲು ಉಲ್ಫಾ ರಚನೆಯಾಗಿತ್ತು. ಯಾರೊಬ್ಬರಿಗೂ ಸಾರ್ವಭೌಮತೆ ಸಿಗುವುದಿಲ್ಲ. ಆದರೆ, ಈ ಒಪ್ಪಂದವು ಅಸ್ಸಾಂ ಜನರಿಗೆ ಸಂವಿಧಾನದ ಅನುಸಾರ ಹೆಚ್ಚಿನ ಸುರಕ್ಷತೆ ಒದಗಿಸಲಿದೆ ಎಂದು ಹೇಳಿದರು.</p>.<p>ಕ್ಷೇತ್ರ ಪುನರ್ವಿಂಗಡಣೆ ಪ್ರಕಾರ, ಬ್ರಹ್ಮಪುತ್ರ ಕಣಿವೆ ವ್ಯಾಪ್ತಿಯಲ್ಲಿ 96 ಮತ್ತು ಬರಾಕ್ ಕಣಿವೆ ಭಾಗದ ಎಂಟು ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ಅಸ್ಸಾಂನ ಸ್ಥಳೀಯ ನಿವಾಸಿಗಳಿಗೆ ಖಾತರಿಯಾಗಿ ರಾಜಕೀಯ ಪ್ರಾತಿನಿಧ್ಯ ಒದಗಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.</p>.<p>ಉಲ್ಫಾ ಮುಖಂಡ, ಪರೇಶ್ ಬರೂಚ್ ಸಂಪರ್ಕದಲ್ಲಿದ್ದು, ಅವರು ಇನ್ನೂ ಶಾಂತಿ ಪ್ರಕ್ರಿಯೆಗೆ ದಾಖಲಾಗಬೇಕಿದೆ. ಅವರ ಜೊತೆ ಚರ್ಚಿಸುತ್ತೇನೆ. ಬೇಗನೆ ಅವರುಮಾತುಕತೆಗೆ ಸಿದ್ಧರಿರಲಿರಲಾರರು. ಅವರ ಪತ್ತೆಗೆ ಕ್ರಮವಹಿಸಬಾರದು ಎಂದು ಪೊಲೀಸರಿಗೆ ಸೂಚಿಸುತ್ತೇನೆ ಎಂದರು.</p>.<p>‘ಆತ ರಾಜ್ಯದಿಂದ ಹೊರಗಿದ್ದು, ಈಗ ಯಾವ ರಾಜ್ಯದಲ್ಲಿದ್ದಾನೆ ಎಂದು ತಿಳಿದಿಲ್ಲ. ಆದರೆ, ಕನಿಷ್ಠ 15 ದಿನ ರಾಜ್ಯದಲ್ಲಿದ್ದು, ಅಸ್ಸಾಂನಲ್ಲಿ ಆಗಿರುವ ಅಭಿವೃದ್ಧಿ ಗಮನಿಸಬೇಕು ಎಂದು ಅವರಿಗೆ ತಿಳಿಸಲು ಬಯಸುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>