ನವದೆಹಲಿ: ‘ಭಾರತ ಸರ್ಕಾರದ ವಿರುದ್ಧ ಅಮೆರಿಕ ನ್ಯಾಯಾಲಯದಲ್ಲಿ ದಾವೆ ಹೂಡಿರುವ, ಖಾಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನೂ ಕುರಿತು ಹೆಚ್ಚಿಗೆ ಹೇಳಬೇಕಿಲ್ಲ. ಈಗ ಮೊಕದ್ದಮೆ ಹೂಡಲಾಗಿದ್ದರೂ, ಪನ್ನೂ ಹಾಗೂ ಆತ ಪ್ರತಿನಿಧಿಸುವ ಸಂಘಟನೆ ಕುರಿತ ನಮ್ಮ ನಿಲುವುಗಳಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಗುರುವಾರ ಹೇಳಿದ್ದಾರೆ.