<p><strong>ನವದೆಹಲಿ: ‘</strong>ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಒಂದು ವೇಳೆ ನಿಮಗೆ ಶಿಕ್ಷೆಯಾದರೆ, ನೀವು ಕೋರ್ಟ್ ವಿರುದ್ಧ ದಾವೆ ಹೂಡುತ್ತೀರಾ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಶನಿವಾರ ಪ್ರಶ್ನಿಸಿದ್ದಾರೆ.</p>.<p>ಅಬಕಾರಿ ನೀತಿ ಪ್ರಕರಣದಲ್ಲಿ ತಮ್ಮ ವಿರುದ್ಧ ಸಿಬಿಐ ಹಾಗೂ ಇ.ಡಿ ಸುಳ್ಳು ಪ್ರಕರಣ ದಾಖಲಿಸಿ, ಅಫಿಡವಿಟ್ಗಳನ್ನು ಸಲ್ಲಿಸಿದ್ದು, ಈ ತನಿಖಾ ಸಂಸ್ಥೆಗಳ ವಿರುದ್ಧ ಕೋರ್ಟ್ ಮೆಟ್ಟಿಲೇರುವುದಾಗಿ ಕೇಜ್ರಿವಾಲ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ರಿಜಿಜು ಈ ಪ್ರಶ್ನೆ ಕೇಳಿದ್ದಾರೆ.</p>.<p>ಕೇಜ್ರಿವಾಲ್ ಅವರ ಈ ಹೇಳಿಕೆಯನ್ನು ತಮ್ಮ ಟ್ವೀಟ್ನಲ್ಲಿ ಹಂಚಿಕೊಂಡಿರುವ ರಿಜಿಜು, ‘ಭ್ರಷ್ಟಾಚಾರವು ಕೇಜ್ರಿವಾಲ್ ಪಾಲಿಗೆ ಎಂದಿಗೂ ಸಮಸ್ಯೆಯೇ ಆಗಿರಲಿಲ್ಲ’ ಎಂದು ಕುಟುಕಿದ್ದಾರೆ.</p>.<p>‘ಕ್ಷಮಿಸಿ ಅಣ್ಣಾಜಿ (ಹೋರಾಟಗಾರ ಅಣ್ಣಾ ಹಜಾರೆ), ನೀವು ದೇಶದ ಮೇಲೆ ಇಂಥ ದೊಡ್ಡ ಭಾರವನ್ನು ಹೊರಿಸಿದ್ದೀರಿ ಎಂಬುದು ನಿಮಗೇ ಗೊತ್ತಿಲ್ಲ’ ಎಂದೂ ವ್ಯಂಗ್ಯವಾಡಿದ್ದಾರೆ.</p>.<p>‘ನರೇಂದ್ರ ಮೋದಿ, ಅಮಿತ್ ಶಾ ಅವರಂತಹ ಬಿಜೆಪಿಯ ಘಟಾನುಘಟಿಗಳನ್ನು ಸೋಲಿಸಲು ಕೆಲವೊಮ್ಮೆ ಭ್ರಷ್ಟಾಚಾರ ಪರ ವಾಲಬೇಕಾಗುತ್ತದೆ’ ಎಂದು ಸಂದರ್ಶನವೊಂದರಲ್ಲಿ ಕೇಜ್ರಿವಾಲ್ ಹೇಳಿದ್ದರು ಎನ್ನಲಾದ ವಿಡಿಯೊ ತುಣುಕನ್ನು ಸಹ ಅವರು ಹಂಚಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: ‘</strong>ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಒಂದು ವೇಳೆ ನಿಮಗೆ ಶಿಕ್ಷೆಯಾದರೆ, ನೀವು ಕೋರ್ಟ್ ವಿರುದ್ಧ ದಾವೆ ಹೂಡುತ್ತೀರಾ’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಶನಿವಾರ ಪ್ರಶ್ನಿಸಿದ್ದಾರೆ.</p>.<p>ಅಬಕಾರಿ ನೀತಿ ಪ್ರಕರಣದಲ್ಲಿ ತಮ್ಮ ವಿರುದ್ಧ ಸಿಬಿಐ ಹಾಗೂ ಇ.ಡಿ ಸುಳ್ಳು ಪ್ರಕರಣ ದಾಖಲಿಸಿ, ಅಫಿಡವಿಟ್ಗಳನ್ನು ಸಲ್ಲಿಸಿದ್ದು, ಈ ತನಿಖಾ ಸಂಸ್ಥೆಗಳ ವಿರುದ್ಧ ಕೋರ್ಟ್ ಮೆಟ್ಟಿಲೇರುವುದಾಗಿ ಕೇಜ್ರಿವಾಲ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ರಿಜಿಜು ಈ ಪ್ರಶ್ನೆ ಕೇಳಿದ್ದಾರೆ.</p>.<p>ಕೇಜ್ರಿವಾಲ್ ಅವರ ಈ ಹೇಳಿಕೆಯನ್ನು ತಮ್ಮ ಟ್ವೀಟ್ನಲ್ಲಿ ಹಂಚಿಕೊಂಡಿರುವ ರಿಜಿಜು, ‘ಭ್ರಷ್ಟಾಚಾರವು ಕೇಜ್ರಿವಾಲ್ ಪಾಲಿಗೆ ಎಂದಿಗೂ ಸಮಸ್ಯೆಯೇ ಆಗಿರಲಿಲ್ಲ’ ಎಂದು ಕುಟುಕಿದ್ದಾರೆ.</p>.<p>‘ಕ್ಷಮಿಸಿ ಅಣ್ಣಾಜಿ (ಹೋರಾಟಗಾರ ಅಣ್ಣಾ ಹಜಾರೆ), ನೀವು ದೇಶದ ಮೇಲೆ ಇಂಥ ದೊಡ್ಡ ಭಾರವನ್ನು ಹೊರಿಸಿದ್ದೀರಿ ಎಂಬುದು ನಿಮಗೇ ಗೊತ್ತಿಲ್ಲ’ ಎಂದೂ ವ್ಯಂಗ್ಯವಾಡಿದ್ದಾರೆ.</p>.<p>‘ನರೇಂದ್ರ ಮೋದಿ, ಅಮಿತ್ ಶಾ ಅವರಂತಹ ಬಿಜೆಪಿಯ ಘಟಾನುಘಟಿಗಳನ್ನು ಸೋಲಿಸಲು ಕೆಲವೊಮ್ಮೆ ಭ್ರಷ್ಟಾಚಾರ ಪರ ವಾಲಬೇಕಾಗುತ್ತದೆ’ ಎಂದು ಸಂದರ್ಶನವೊಂದರಲ್ಲಿ ಕೇಜ್ರಿವಾಲ್ ಹೇಳಿದ್ದರು ಎನ್ನಲಾದ ವಿಡಿಯೊ ತುಣುಕನ್ನು ಸಹ ಅವರು ಹಂಚಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>