ಯುಎಪಿಎ ಅಡಿಯಲ್ಲಿವಿಚಾರಣೆ ನಡೆಸುವುದನ್ನು ಪ್ರಶ್ನಿಸಿ ಪುರೋಹಿತ್ ಹಾಗೂ ಇತರೆ ಆರೋಪಿಗಳು ಅರ್ಜಿಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಲು ನ್ಯಾಯಮೂರ್ತಿ ವಿನೋದ್ ಪಡಲ್ಕರ್ನಿರಾಕರಿಸಿದ್ದು, ಪ್ರಕರಣದಮುಂದಿನ ವಿಚಾರಣೆಯನ್ನು ಇದೇ 26ಕ್ಕೆ ನಿಗದಿಪಡಿಸಿದ್ದಾರೆ. ತಮ್ಮ ವಿರುದ್ಧ ವಿಚಾರಣಾಧೀನ ನ್ಯಾಯಾಲಯ ಆರೋಪಪಟ್ಟಿ ಸಲ್ಲಿಸುವುದನ್ನು ತಡೆಯಬೇಕೆಂದು ಪುರೋಹಿತ್ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಕಳೆದ ತಿಂಗಳು ತಿರಸ್ಕರಿಸಿತ್ತು.