<p><strong>ಬೆಂಗಳೂರು</strong>: 'ಒಂದು ಅಕ್ರಮ ಬಡಾವಣೆ ನೋಂದಣಿಗೆ ₹35 ಸಾವಿರ ಲಂಚ ಪಡೆಯಲಾಗುತ್ತಿದೆ. ದಿನಕ್ಕೆ 100 ಬಡಾವಣೆಗಳು ನೋಂದಣಿಯಾಗುತ್ತಿದ್ದು, ₹35 ಲಕ್ಷದವರೆಗೂ ವಹಿವಾಟು ನಡೆಯುತ್ತಿದೆ’ ಎಂದು ಬಿಜೆಪಿ ಸದಸ್ಯ ಎಸ್.ಆರ್. ವಿಶ್ವನಾಥ್ ಆರೋಪಿಸಿದರು.</p>.<p>ಅಕ್ರಮ ಬಡಾವಣೆಗಳ ನೋಂದಣಿ ಕುರಿತು ಸೋಮವಾರ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಕೃಷಿ ಭೂಮಿಯನ್ನು ಅಕ್ರಮವಾಗಿ ಬಡಾವಣೆಗಳಾಗಿ ಪರಿವರ್ತಿಸಿ ನೋಂದಣಿ ಮಾಡಲಾಗುತ್ತಿದೆ. ಈ ಬಗ್ಗೆ ಉಪ ನೋಂದಣಾಧಿಕಾರಿಗಳ ಬಳಿ ವಿಚಾರಿಸಿದರೆ ಮೇಲಿನವರಿಗೆ ಮಾಮೂಲಿ ನೀಡಬೇಕು. ಪ್ರತಿ ತಿಂಗಳು ₹ 8 ಕೋಟಿ ವಸೂಲಿ ಮಾಡುತ್ತಿದ್ದೇವೆಂದು ಹೇಳುತ್ತಿದ್ದಾರೆ. ಕಂದಾಯ ಸಚಿವರು ಲಂಚ ಪಡೆಯುವುದಿಲ್ಲವೆಂದು ಭಾವಿಸಿದ್ದೇನೆ. ಹಾಗಿದ್ದರೆ, ಹಣ ಯಾರಿಗೆ ತಲುಪುತ್ತಿದೆ’ ಎಂದು ಪ್ರಶ್ನಿಸಿದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ, ‘ಶಾಸಕರು ಪ್ರಸ್ತಾಪಿಸಿದಂತೆ ಹಣ ವಸೂಲಿ ಹೊರತುಪಡಿಸಿ, ಉಳಿದ ಎಲ್ಲ ವಿಚಾರಗಳಿಗೆ ನನ್ನ ಸಹಮತ ಇದೆ. ಇಂತಹ ವ್ಯವಹಾರ ನಡೆದೇ ಇಲ್ಲವೆಂದು ನಾನು ವಾದಿಸುವುದಿಲ್ಲ. ಅಕ್ರಮಗಳನ್ನೇ ಕಾನೂನುಬದ್ಧವಾಗಿ ಮಾಡುವ ಬುದ್ಧಿವಂತಿಕೆ ಪ್ರದರ್ಶಿಸಲಾಗುತ್ತಿದೆ. ಅಕ್ರಮ ಬಡಾವಣೆಗಳ ನೋಂದಣಿಗೆ ತಡೆಗಟ್ಟುತ್ತೇನೆ’ ಎಂದು ಭರವಸೆ ನೀಡಿದರು.</p>.<p>‘ಉಪ ನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಇತರೆ ಎಂಬ ವರ್ಗೀಕೃತ ವ್ಯವಸ್ಥೆಯಿದೆ. ಅದನ್ನು ಗ್ರಾಮ ಠಾಣ ಹಾಗೂ ಇತರ ಸ್ವತ್ತುಗಳ ನೋಂದಣಿಗೂ ಬಳಕೆ ಮಾಡಬಹುದು. ಅಕ್ರಮ ಮಾಡುವವರು ಬಡಾವಣೆಗಳ ನೋಂದಣಿಗೆ ಈ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದಾರೆ. ಗ್ರಾಮ ಪಂಚಾಯಿತಿ, ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು ನೀಡುವ ಇ-ಖಾತೆ ಸೌಲಭ್ಯ ನೇರವಾಗಿ ಉಪ ನೋಂದಣಿ ಅಧಿಕಾರಿಗಳ ಆನ್ಲೈನ್ಗೆ ಸಂಪರ್ಕಗೊಂಡರೆ ಅಕ್ರಮ ನೋಂದಣಿ ತಡೆಯಲು ಸಾಧ್ಯ’ ಎಂದು ಅವರು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: 'ಒಂದು ಅಕ್ರಮ ಬಡಾವಣೆ ನೋಂದಣಿಗೆ ₹35 ಸಾವಿರ ಲಂಚ ಪಡೆಯಲಾಗುತ್ತಿದೆ. ದಿನಕ್ಕೆ 100 ಬಡಾವಣೆಗಳು ನೋಂದಣಿಯಾಗುತ್ತಿದ್ದು, ₹35 ಲಕ್ಷದವರೆಗೂ ವಹಿವಾಟು ನಡೆಯುತ್ತಿದೆ’ ಎಂದು ಬಿಜೆಪಿ ಸದಸ್ಯ ಎಸ್.ಆರ್. ವಿಶ್ವನಾಥ್ ಆರೋಪಿಸಿದರು.</p>.<p>ಅಕ್ರಮ ಬಡಾವಣೆಗಳ ನೋಂದಣಿ ಕುರಿತು ಸೋಮವಾರ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಕೃಷಿ ಭೂಮಿಯನ್ನು ಅಕ್ರಮವಾಗಿ ಬಡಾವಣೆಗಳಾಗಿ ಪರಿವರ್ತಿಸಿ ನೋಂದಣಿ ಮಾಡಲಾಗುತ್ತಿದೆ. ಈ ಬಗ್ಗೆ ಉಪ ನೋಂದಣಾಧಿಕಾರಿಗಳ ಬಳಿ ವಿಚಾರಿಸಿದರೆ ಮೇಲಿನವರಿಗೆ ಮಾಮೂಲಿ ನೀಡಬೇಕು. ಪ್ರತಿ ತಿಂಗಳು ₹ 8 ಕೋಟಿ ವಸೂಲಿ ಮಾಡುತ್ತಿದ್ದೇವೆಂದು ಹೇಳುತ್ತಿದ್ದಾರೆ. ಕಂದಾಯ ಸಚಿವರು ಲಂಚ ಪಡೆಯುವುದಿಲ್ಲವೆಂದು ಭಾವಿಸಿದ್ದೇನೆ. ಹಾಗಿದ್ದರೆ, ಹಣ ಯಾರಿಗೆ ತಲುಪುತ್ತಿದೆ’ ಎಂದು ಪ್ರಶ್ನಿಸಿದರು.</p>.<p>ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ, ‘ಶಾಸಕರು ಪ್ರಸ್ತಾಪಿಸಿದಂತೆ ಹಣ ವಸೂಲಿ ಹೊರತುಪಡಿಸಿ, ಉಳಿದ ಎಲ್ಲ ವಿಚಾರಗಳಿಗೆ ನನ್ನ ಸಹಮತ ಇದೆ. ಇಂತಹ ವ್ಯವಹಾರ ನಡೆದೇ ಇಲ್ಲವೆಂದು ನಾನು ವಾದಿಸುವುದಿಲ್ಲ. ಅಕ್ರಮಗಳನ್ನೇ ಕಾನೂನುಬದ್ಧವಾಗಿ ಮಾಡುವ ಬುದ್ಧಿವಂತಿಕೆ ಪ್ರದರ್ಶಿಸಲಾಗುತ್ತಿದೆ. ಅಕ್ರಮ ಬಡಾವಣೆಗಳ ನೋಂದಣಿಗೆ ತಡೆಗಟ್ಟುತ್ತೇನೆ’ ಎಂದು ಭರವಸೆ ನೀಡಿದರು.</p>.<p>‘ಉಪ ನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಇತರೆ ಎಂಬ ವರ್ಗೀಕೃತ ವ್ಯವಸ್ಥೆಯಿದೆ. ಅದನ್ನು ಗ್ರಾಮ ಠಾಣ ಹಾಗೂ ಇತರ ಸ್ವತ್ತುಗಳ ನೋಂದಣಿಗೂ ಬಳಕೆ ಮಾಡಬಹುದು. ಅಕ್ರಮ ಮಾಡುವವರು ಬಡಾವಣೆಗಳ ನೋಂದಣಿಗೆ ಈ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದಾರೆ. ಗ್ರಾಮ ಪಂಚಾಯಿತಿ, ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳು ನೀಡುವ ಇ-ಖಾತೆ ಸೌಲಭ್ಯ ನೇರವಾಗಿ ಉಪ ನೋಂದಣಿ ಅಧಿಕಾರಿಗಳ ಆನ್ಲೈನ್ಗೆ ಸಂಪರ್ಕಗೊಂಡರೆ ಅಕ್ರಮ ನೋಂದಣಿ ತಡೆಯಲು ಸಾಧ್ಯ’ ಎಂದು ಅವರು ವಿವರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>