ಭಾರತದ ಪ್ರತಿ ಹಳ್ಳಿಯೂ ವಿಭಿನ್ನ, ಹಲವು ಜಾತಿ, ಧರ್ಮ, ಭಾಷೆಯ ಜನರು ಇರುವ ದೇಶದಲ್ಲಿ ಎಲ್ಲರಲ್ಲೂ ಭಾರತೀಯರು ಎನ್ನುವ ಭಾವನೆ ನೆಲೆಸಲು, ಶಾಂತಿ, ಸೌಹಾರ್ದದ ಬದುಕು ಸಾಗಿಸಲು ಸಂವಿಧಾನವೇ ಕಾರಣ. ಸ್ವಾತಂತ್ರ್ಯ ಚಳವಳಿಯ ಮೌಲ್ಯಗಳು ಹಾಗೂ ಸ್ವಾತಂತ್ರ್ಯ ಪೂರ್ವದಲ್ಲೇ ರಚನೆಯಾದ ಸಂವಿಧಾನ ರಚನಾ ಸಭೆಯ ಆಶಯಗಳ ಮಿಳಿತ, ಅಂಬೇಡ್ಕರ್ ಅವರಂತಹ ಪ್ರತಿಭಾವಂತರ ಶ್ರಮದ ಫಲವಾಗಿ ವಿಶ್ವದ ಶ್ರೇಷ್ಠ ಸಂವಿಧಾನ ಹೊಂದಲು ಸಾಧ್ಯವಾಯಿತು ಎಂದರು.