‘ವಿಚಾರಣಾ ನ್ಯಾಯಾಲಯಗಳಲ್ಲೇ ಜಾಮೀನು ಸಿಗಬೇಕಾದವರಿಗೆ ಅಲ್ಲಿ ಜಾಮೀನು ಸಿಗುತ್ತಿಲ್ಲ. ಅಂತಹವರು ಹೈಕೋರ್ಟ್ಗಳಿಗೆ ಹೋಗುತ್ತಿದ್ದಾರೆ. ಹೈಕೋರ್ಟ್ಗಳಲ್ಲೇ ಜಾಮೀನು ಸಿಗಬೇಕಾದವರಿಗೆ ಅಲ್ಲಿ ಜಾಮೀನು ಸಿಗುತ್ತಿಲ್ಲ. ಅಂತಹವರು ಸುಪ್ರಿಂ ಕೋರ್ಟ್ಗೆ ಬರುತ್ತಿದ್ದಾರೆ. ಪರಿಣಾಮವಾಗಿ, ಅಕ್ರಮವಾಗಿ ಅಥವಾ ಅನಗತ್ಯವಾಗಿ ಬಂಧನದಲ್ಲಿ ಇರುವವರು ಮತ್ತಷ್ಟು ದಿನ ಬಂಧನದಲ್ಲೇ ಇರುವಂತೆ ಆಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.