ಭಾನುವಾರ, 7 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಡಗಿನ ಮೇಲೆ ಕ್ಷಿಪಣಿ ದಾಳಿ: ನೆರವಿಗೆ ಧಾವಿಸಿದ ಭಾರತೀಯ ನೌಕೆ

22 ಭಾರತೀಯರೂ ಸೇರಿ 33 ಸಿಬ್ಬಂದಿಯ ರಕ್ಷಣೆ
Published 28 ಏಪ್ರಿಲ್ 2024, 15:17 IST
Last Updated 28 ಏಪ್ರಿಲ್ 2024, 15:17 IST
ಅಕ್ಷರ ಗಾತ್ರ

ನವದೆಹಲಿ: ಪನಾಮ ಧ್ವಜದೊಂದಿಗೆ ಕಚ್ಚಾ ತೈಲ ಹೊತ್ತು ಸಾಗುತ್ತಿದ್ದ ಸರಕು ಸಾಗಣೆ ಹಡಗಿನ ಮೇಲೆ ಹೌತಿ ಬಂಡುಕೋರರು ಕ್ಷಿಪಣಿ ದಾಳಿ ನಡೆಸಿದ್ದು, ಭಾರತೀಯ ನೌಕಾಪಡೆಯು ತ್ವರಿತವಾಗಿ ಆ ಹಡಗಿನ ನೆರವಿಗೆ ಧಾವಿಸಿ ಅದರಲ್ಲಿದ್ದ 22 ಭಾರತೀಯರೂ ಸೇರಿದಂತೆ 33 ಸಿಬ್ಬಂದಿಯನ್ನು ರಕ್ಷಿಸಿದೆ.

ಎಂ.ವಿ ಆಂಡ್ರೊಮೆಡಾ ಸ್ಟಾರ್‌ ಹಡಗಿನ ಮೇಲೆ ಏಪ್ರಿಲ್‌ 26ರಂದು ದಾಳಿ ನಡೆದಿತ್ತು. ವಿಷಯ ಗೊತ್ತಾದ ಕೂಡಲೇ ಭಾರತೀಯ  ನೌಕಾಪಡೆಯ ಐಎನ್ಎಸ್ ಕೊಚ್ಚಿ ಸಮರ ನೌಕೆಯು ತ್ವರಿತವಾಗಿ ಸ್ಪಂದಿಸಿತು. ಇದರ ಪರಿಣಾಮ ಆ ಹಡಗಿನಲ್ಲಿದ್ದ ಎಲ್ಲ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆಂಪು ಸಮುದ್ರದಲ್ಲಿ ಸಾಗುತ್ತಿದ್ದ ಸರಕು ಸಾಗಣೆ ಹಡಗುಗಳನ್ನು ಗುರಿಯಾಗಿಸಿ ಇರಾನ್‌ ಬೆಂಬಲಿತ ಹೌತಿ ಬಂಡುಕೋರರು ಮೂರು ಕ್ಷಿಪಣಿಗಳನ್ನು ಉಡಾವಣೆ ಮಾಡಿದ್ದರು. ಈ ದಾಳಿಯಿಂದ ಎಂ.ವಿ ಆಂಡ್ರೊಮೆಡಾ ಸ್ಟಾರ್‌ ಹಡಗಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್‌ ತಿಳಿಸಿದೆ. 

ಕೂಡಲೇ ಅಲ್ಲಿಗೆ ಹೋದ ಐಎನ್‌ಎಸ್‌ ಕೊಚ್ಚಿ ರಕ್ಷಣಾ ಕಾರ್ಯದಲ್ಲಿ ನಿರತವಾಯಿತು. ಹೆಲಿಕಾಪ್ಟರ್‌ ಕಾರ್ಯಾಚರಣೆಯನ್ನೂ ಕೈಗೊಂಡು ಹಡಗಿನಲ್ಲಿದ್ದವರನ್ನು ರಕ್ಷಿಸಲಾಯಿತು ಎಂದು ನೌಕಾಪಡೆ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT