<p><strong>ರಿಯಾದ್</strong>: ಗಾಜಾದಲ್ಲಿ ಇಸ್ರೇಲ್–ಪ್ಯಾಲೆಸ್ಟೀನ್ ಮಧ್ಯೆ ಆರಂಭವಾಗಿರುವ ಯುದ್ಧಕ್ಕೆ ಆದಷ್ಟು ಶೀಘ್ರ ಕದನವಿರಾಮ ಘೋಷಣೆಯಾಗಲಿ. ಅದಕ್ಕೆ ಭಾರತವು ಬೆಂಬಲ ನೀಡುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಸೋಮವಾರ ಹೇಳಿದರು.</p>.<p>ರಿಯಾದ್ನಲ್ಲಿ ನಡೆದ ಭಾರತ–ಗಲ್ಫ್ ಸಹಕಾರ ಮಂಡಳಿಯ (ಜಿಸಿಸಿ) ವಿದೇಶಾಂಗ ವ್ಯವಹಾರಗಳ ಸಚಿವರ ಸಭೆಯಲ್ಲಿ ಜೈಶಂಕರ್ ಅವರು ಈ ಮಾತು ಹೇಳಿದರು.</p>.<p>‘ಇಸ್ರೇಲ್–ಪ್ಯಾಲೆಸ್ಟೀನ್ ಸಂಘರ್ಷದ ವಿಚಾರದಲ್ಲಿ ಭಾರತದ ನಿರ್ಧಾರವು ಸ್ಥಿರವಾಗಿದೆ. ಭಯೋತ್ಪಾದನೆ ಮತ್ತು ಒತ್ತೆಯಾಳುಗಳಾಗಿ ಹೊತ್ತೊಯ್ಯುವುದನ್ನು ಖಂಡಿಸುತ್ತೇವೆ. ಹಾಗೆಯೇ ಈ ಸಂಘರ್ಷದಲ್ಲಿ ಮುಗ್ಧ ನಾಗರಿಕರು ಮೃತಪಡುತ್ತಿರುವ ಬಗ್ಗೆ ತೀವ್ರ ಸಂಕಟವೂ ಆಗುತ್ತಿದೆ’ ಎಂದರು.</p>.<p>ಉಭಯ ದೇಶಗಳು ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಬೇಕು ಎಂಬುದು ಭಾರತದ ಸಲಹೆ ಎಂದೂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಿಯಾದ್</strong>: ಗಾಜಾದಲ್ಲಿ ಇಸ್ರೇಲ್–ಪ್ಯಾಲೆಸ್ಟೀನ್ ಮಧ್ಯೆ ಆರಂಭವಾಗಿರುವ ಯುದ್ಧಕ್ಕೆ ಆದಷ್ಟು ಶೀಘ್ರ ಕದನವಿರಾಮ ಘೋಷಣೆಯಾಗಲಿ. ಅದಕ್ಕೆ ಭಾರತವು ಬೆಂಬಲ ನೀಡುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಸೋಮವಾರ ಹೇಳಿದರು.</p>.<p>ರಿಯಾದ್ನಲ್ಲಿ ನಡೆದ ಭಾರತ–ಗಲ್ಫ್ ಸಹಕಾರ ಮಂಡಳಿಯ (ಜಿಸಿಸಿ) ವಿದೇಶಾಂಗ ವ್ಯವಹಾರಗಳ ಸಚಿವರ ಸಭೆಯಲ್ಲಿ ಜೈಶಂಕರ್ ಅವರು ಈ ಮಾತು ಹೇಳಿದರು.</p>.<p>‘ಇಸ್ರೇಲ್–ಪ್ಯಾಲೆಸ್ಟೀನ್ ಸಂಘರ್ಷದ ವಿಚಾರದಲ್ಲಿ ಭಾರತದ ನಿರ್ಧಾರವು ಸ್ಥಿರವಾಗಿದೆ. ಭಯೋತ್ಪಾದನೆ ಮತ್ತು ಒತ್ತೆಯಾಳುಗಳಾಗಿ ಹೊತ್ತೊಯ್ಯುವುದನ್ನು ಖಂಡಿಸುತ್ತೇವೆ. ಹಾಗೆಯೇ ಈ ಸಂಘರ್ಷದಲ್ಲಿ ಮುಗ್ಧ ನಾಗರಿಕರು ಮೃತಪಡುತ್ತಿರುವ ಬಗ್ಗೆ ತೀವ್ರ ಸಂಕಟವೂ ಆಗುತ್ತಿದೆ’ ಎಂದರು.</p>.<p>ಉಭಯ ದೇಶಗಳು ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಬೇಕು ಎಂಬುದು ಭಾರತದ ಸಲಹೆ ಎಂದೂ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>